ಕಿಕ್ಕೇರಿ:
ಹೋಬಳಿಯ ದಬ್ಬೇಘಟ್ಟದ ಅನ್ನಪೂರ್ಣೇಶ್ವರಿ ವಿದ್ಯಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಕ್ಕಳು ಹೆಚ್ಚು ಅಂಕಗಳಿಸಿದರೆ ಸಾಕು ಮೊದಲು ಇಂಗ್ಲಿಷ್ ಕಲಿಯಲಿ. ಇದೇ ಭವಿಷ್ಯಕ್ಕೆ ಆಧಾರ ಎನ್ನುವಂತಾಬಾರದು. ಎಲ್ಲ ಭಾಷೆಗಳಿಗೂ ಕಲಿಕೆ ಆಧಾರ ಮಾತೃಭಾಷೆ ಎಂಬುದನ್ನು ಮರೆಯದೆ ಸುಲಲಿತವಾಗಿ ಕನ್ನಡ ಭಾಷೆ ಓದಿ, ಬರೆಯಿಸಿ. ಇದೇ ಶಿಕ್ಷಣದ ಜ್ಞಾನದಾಹಕ್ಕೆ ಮೊದಲ ಮೆಟ್ಟಿಲು ಎಂದರು.
ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬ ಪಾಲಕರ-ಶಿಕ್ಷಕರ-ವಿದ್ಯಾರ್ಥಿಗಳ ಸಮಾಗಮ ಸಂಗಮವಾಗಿದೆ. ಪಾಶ್ವಿಮಾತ್ಯ ನೃತ್ಯ, ಕ್ಯಾಸೆಟ್ ಹಾಡಿನ ನೃತ್ಯಗಳಿಂದ ನಮ್ಮಜಾನಪದ ಸಂಸ್ಕೃತಿ ಕಲೆಗಳು ಮರೆಯಾಗುತ್ತಿವೆ. ಮೊದಲು ನಮ್ಮಜಾನಪದ ಕಲೆ ಉಳಿಸಲು ಶಾಲೆಗಳು ಇಂತಹ ಕಾರ್ಯಕ್ರಮವನ್ನು ವೇದಿಕೆಯಾಗಿ ರೂಪಿಸಿಕೊಳ್ಳಬೇಕಿದೆ. ಮಕ್ಕಳಲ್ಲಿ ನೈಜ್ಯ ಪ್ರತಿಭೆಗಳಿವೆ. ಎಕ್ಕಿ ಹೊರ ತೆಗೆಯುವ ಕೆಲಸವಾಗಬೇಕಿದೆ ಎಂದರು.ಶಾಲಾ ಮಕ್ಕಳ ನೃತ್ಯ ವೈಭವ, ವಿವಿಧಸಾಂಸ್ಕೃತಿಕ ಪ್ರದರ್ಶನ ರಂಜಿಸಿತು. ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ ವ್ಯವಸ್ಥಾಪಕ ಮಹೇಶ್, ಮುಖ್ಯಶಿಕ್ಷಕ ಹರೀಶ್, ಗ್ರಾಪಂ ಅಧ್ಯಕ್ಷದೇವರಾಜು, ಬೀರುವಳ್ಳಿ ಸತೀಶ್, ಮಾರ್ಗೋನಹಳ್ಳಿ ನಾಗರಾಜು, ಮೋಹನ್, ಅಭಿಷಕ್,ಗಂಜಿಗೆರೆ ಮಹೇಶ್ಭಾಗವಹಿಸಿದ್ದರು.ಮಾಸಾಶನ ಫಲಾನುಭವಿಗೆ ವಾತ್ಸಲ್ಯಮನೆ ರಚನೆಗಾಗಿ ಗುದ್ದಲಿ ಪೂಜೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ಮಾತೃಶ್ರೀ ಅವರ ಆಶಯದಂತೆ ಕದಲೂರು ಕಾರ್ಯ ಕ್ಷೇತ್ರದ ಮಾಸಾಶನ ಫಲಾನುಭವಿ ಜಯಮ್ಮರಿಗೆ ವಾತ್ಸಲ್ಯಮನೆ ರಚನೆಗಾಗಿ ಮನ್ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಯೋಜನಾಧಿಕಾರಿ ಮಾತನಾಡಿ, ಯಾರು ಇಲ್ಲದೆ, ದುಡಿದು ತಿನ್ನಲು ಅಸಹಾಯಕರಾದ ಜೀವಗಳಿಗೆ ಮಾಸಾಶನ ಸೌಲಭ್ಯ ನೀಡಿ, ಫಲಾನುಭವಿಗಳಿಗೆ ವಾತ್ಸಲ್ಯಮನೆ, ಬೆಳಕಿನ ವ್ಯವಸ್ಥೆಗಾಗಿ ಸೋಲಾರ್, ನೀರಿನ ವ್ಯವಸ್ಥೆ ಶೌಚಾಲಯ, ಸ್ನಾನ ಗೃಹ ಹೀಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುತ್ತಿರುವ ಬಗ್ಗೆ ತಿಳಿಸಿದರು.