ಸಾಹಿತ್ಯಕ್ಕೆ ಒಂದು ಐಡಿಯಾಲಜಿ ಇರಬೇಕು: ಡಾ. ವೆಂಕಟಗಿರಿ ದಳವಾಯಿ

KannadaprabhaNewsNetwork |  
Published : Oct 11, 2025, 12:03 AM IST
ಧರ್ಮವನ್ನು ಧರ್ಮವನ್ನಾಗಿಸುವುದು ದಯೆ | Kannada Prabha

ಸಾರಾಂಶ

ವಿ.ಸೀತಾರಾಮಯ್ಯನವರ ಬರಹಗಳು ವಾಸ್ತವ ಮತ್ತು ನಿಲುವುಗಳನ್ನು ತೋರಿಸುತ್ತದೆ. ಸಾಹಿತ್ಯಕ್ಕೆ ಒಂದು ಐಡಿಯಾಲಜಿ ಇರಬೇಕು.

ವಿಚಾರ ಸಂಕಿರಣದ ಎರಡನೇ ದಿನದ ಗೋಷ್ಠಿ

ಕನ್ನಡಪ್ರಭ ವಾರ್ತೆ ಹೊನ್ನಾವರ

ಸಾಹಿತ್ಯಕ್ಕೆ ಗೊತ್ತಿರುವುದು ಜೀವಕಾರುಣ್ಯ. ಇದು ಸಾಹಿತ್ಯದ ಧಾತುವು ಹೌದು. ನವೋದಯ ಕಾಲಘಟ್ಟದಲ್ಲಿ ಹೊಸ ಆವಿಷ್ಕಾರಗಳಾದವು. ಸೃಜನಶೀಲ ಮನಸ್ಸುಗಳು ಜೀವಕಾರುಣ್ಯವನ್ನು ನೀಡುತ್ತದೆ ಎಂದು ಹಂಪಿ ಕನ್ನಡ ವಿವಿಯ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆದ ಜೀವ ಕಾರುಣ್ಯ ಪರಂಪರೆ ಮತ್ತು ವಿ.ಸೀತಾರಾಮಯ್ಯ ಎಂಬ ವಿಚಾರ ಸಂಕಿರಣದ ಎರಡನೇ ದಿನದ ಗೋಷ್ಠಿಯಲ್ಲಿ ಮಾತನಾಡಿದರು.

ವಿ.ಸೀತಾರಾಮಯ್ಯನವರ ಬರಹಗಳು ವಾಸ್ತವ ಮತ್ತು ನಿಲುವುಗಳನ್ನು ತೋರಿಸುತ್ತದೆ. ಸಾಹಿತ್ಯಕ್ಕೆ ಒಂದು ಐಡಿಯಾಲಜಿ ಇರಬೇಕು. ವಿ.ಸೀ.ಅವರು ಬದುಕನ್ನು ವಿಸ್ತಾರವಾಗಿ ನೋಡಿದರು. ಧರ್ಮವನ್ನು ಧರ್ಮವನ್ನಾಗಿಸುವುದು ದಯೆ ಎಂದು ಸಾರಿದರು ಎನ್ನುತ್ತಾ ವಿ.ಸೀ.ಕಂಡ ಸಮಾಜದ ಆಶಯವನ್ನು ಅರ್ಥವತ್ತಾಗಿ ಕಟ್ಟಿಕೊಟ್ಟರು.

ನಂತರದಲ್ಲಿ ಪತ್ರಕರ್ತ ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ಸಾಹಿತ್ಯದ ಕಾರ್ಯಕ್ರಮಗಳು ಸಾಹಿತಿಗಳಿಗೆ ರಸದೂಟದಂತೆ. ವಿ.ಸೀ. ಅಂದರೆ ಸಾಹಿತ್ಯದ ದೈತ್ಯ ಶಕ್ತಿ. ಅವರ ಬರಹಗಳಲ್ಲಿ ಚಿಂತನೆಗೆ ಹಚ್ಚುವ ಬರಹಗಳೆ ಹೆಚ್ಚಿದ್ದವು. ಹಿರಿಯ ಸಾಹಿತಿಗಳ ಪರಿಪೂರ್ಣ ಪರಿಚಯ ಆಗಲು ಸಾಹಿತ್ಯ ಅಕಾಡಮಿಗಳು ಅವರ ಕುರಿತಾದ ಪುಸ್ತಕಗಳನ್ನು ಪ್ರಕಟಿಸುವ ಕೆಲಸವನ್ನು ಮಾಡಬೇಕು.ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವ ಹೊತ್ತಲ್ಲಿ ಪುಸ್ತಕಗಳನ್ನು ಎಷ್ಟು ಮಂದಿ ಓದುತ್ತಾರೆ ಅನ್ನುವ ಪ್ರಶ್ನೆ ಇದ್ದೆ ಇದೆ ಎನ್ನುತ್ತಾ ವಿ.ಸೀ ಅವರ ಬದುಕು ಮತ್ತು ಬರಹವನ್ನು ರೂಪಿಸಿದ ಪರಿಸರದ ಕುರಿತು ತಿಳಿಸಿದರು.

ಬೆಂಗಳೂರಿನ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶ್ರೀಮತಿ ವೀಣಾದೇವಿ ವಿ.ಸೀ. ಚಿತ್ರಿಸಿದ ವ್ಯಕ್ತಿಗಳು ಮತ್ತು ವ್ಯಕ್ತಿತ್ವ ಕುರಿತಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. ಬೆಂಗಳೂರಿನ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸಂಧ್ಯಾ ಹೆಗಡೆ ಯುಗಧರ್ಮ ಮತ್ತು ವಿ.ಸೀ.ಅವರ ಸಾಹಿತ್ಯ ಅನ್ನುವ ವಿಷಯ ಮಂಡಿಸಿದರು.

ನಂತರದಲ್ಲಿ ಜೀವಕಾರುಣ್ಯ ಪಂಪರಂಪರೆ ಮತ್ತು ವಿ.ಸೀತಾರಾಮಯ್ಯ ಒಂದು ಪಟ್ಟಾಂಗ ಎಂಬ ವಿಚಾರದಲ್ಲಿ ನೆರೆದ ಸಾಹಿತ್ಯಾಸಕ್ತರ ಜೊತೆ ಪ್ರಶ್ನೋತ್ತರ ಮಾಲಿಕೆ ನಡೆದು ರಸವತ್ತಾದ ಚರ್ಚೆ ನಡೆದವು.

ಗೋಷ್ಠಿಯ ನಂತರ ಕನ್ನಡ ಕಾವ್ಯ ಗಾಯನ ಕಾರ್ಯಕ್ರಮ ನಾಡಿನ ಖ್ಯಾತ ಸಾಹಿತಿಗಳು ಮತ್ತು ಕಲಾವಿದರಿಂದ ನಡೆಯಿತು. ಭಾಗ್ಯಶ್ರೀ ಭಟ್ ಪ್ರಾರ್ಥಿಸಿದರು. ಉಪನ್ಯಾಸಕ ವಿದ್ಯಾಧರ ಕಡತೋಕ ನಿರೂಪಿಸಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ