-ನಿವೃತ್ತ ಇಂಜಿನಿಯರ್ ಕೆ.ಸಿ.ನಿಂಗಪ್ಪ ಅವರ ಶ್ರದ್ಧಾಂಜಲಿ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಾನವ ಸತ್ತಮೇಲೆ ಬದುಕುವುದೇ ಜೀವನ, ಮಾನವ ಸತ್ತರೂ ಬದುಕಿನಲ್ಲಿ ಎಂದು ಚಿರಸ್ಥಾಯಿಯಾಗಿರುವಂತ ಕಾರ್ಯ ಮಾಡಿದಾಗ ಅವನ ಬದುಕು ಶಾಶ್ವತವಾಗುತ್ತದೆ ಎಂದು ಸಾಣೇಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಿವೃತ್ತ ಎಂಜಿನಿಯರ್ ಕೆ.ಸಿ.ನಿಂಗಪ್ಪನವರ ಶ್ರದ್ಧಾಂಜಲಿ ಸಭೆಯ ಸಾನಿಧ್ಯವಹಿಸಿ, ಯಾವುದೇ ವ್ಯಕ್ತಿ ಧರ್ಮದ ಹೆಸರಿನಲ್ಲಿ ಧರ್ಮಾಂಧತೆ ಬೆಳೆಸಿದರೆ ಅದನ್ನು ವಿರೋಧಿಸಬೇಕು. ಫುಲ್ಗಾಮ್ ನಲ್ಲಿ ಅಮಾಯಕ ಜೀವಿಗಳನ್ನು ಬಲಿ ತೆಗೆದುಕೊಂಡ ದುಷ್ಟ ಶಕ್ತಿಗಳನ್ನು ದಮನ ಮಾಡಬೇಕಿದೆ ಎಂದರು.
ಬಾಲ್ಯದಲ್ಲಿ ಮಕ್ಕಳಿಗೆ ನೀತಿವಂತ ಸತ್ಯವಂತ ಶಿಕ್ಷಣ ಕೊಡುವ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಾದರ ಚೆನ್ನಯ್ಯ ಗುರು ಪೀಠದ ಡಾ, ಮಾದಾರ ಚೆನ್ನಯ್ಯ ಸ್ವಾಮೀಜಿ, ವಿಧಾನಪರಿಷತ್ ಎಸ್ ನವೀನ್, ಮಾತನಾಡಿದರು. ಮಾಜಿ ಸಚಿವ ಏಕಾಂತಪ್ಪ,ಮಾಜಿ ಶಾಸಕರಾದ ಇಲ್ಕಲ್ ವಿಜಯಕುಮಾರ್, ಟಿ ಹೆಚ್ ಬಸವರಾಜಪ್ಪ, ರಮೇಶ್, ಮಾಜಿ ಜಿ ಪಂ ಹನುಮಂತಪ್ಪ, ಗುರುಸ್ವಾಮಿ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ತಮ್ಮಣ್ಣ, ಕಲ್ಲೇಶ್, ದೊಡ್ಡಘಟ್ಟ ದ್ಯಾಮಪ್ಪ, ಶೇಖರಪ್ಪ, ವಿಶ್ವನಾಥ್ ಹಾಗೂ ಕುಟುಂಬದವರು ಭಾಗವಹಿಸಿದ್ದರು.
ಫೋಟೋ: ಹೊಸದುರ್ಗದಲ್ಲಿ ನಿವೃತ್ತ ಇಂಜಿನಿಯರ್ ಕೆ.ಸಿ.ನಿಂಗಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು