ಧರ್ಮ ಮಾರ್ಗದಿಂದ ಬದುಕು ಸಾರ್ಥಕ: ವಿಮಲಸಾಗರ ಸೂರಿಜಿ ಮಾರಾಸಾಹೇಬ

KannadaprabhaNewsNetwork |  
Published : Dec 17, 2025, 02:30 AM IST
ಶಿರಹಟ್ಟಿಗೆ ಆಗಮಿಸಿದ ವಿಮಲಸಾಗರ ಸೂರಿಜಿ ಮಾರಾಸಾಹೇಬ ಅವರನ್ನು ಸ್ವಾಗತಿಸಲಾಯಿತು. | Kannada Prabha

ಸಾರಾಂಶ

ಜನರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಅರಿವು, ಧಾರ್ಮಿಕ ಭಾವನೆ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಧರ್ಮ ಬೋಧನೆಯ ತತ್ವಗಳನ್ನು ಬಿತ್ತಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ನಮ್ಮ ದೇಶ ಧರ್ಮದ ತಳಹದಿಯ ಮತ್ತು ಉತ್ತಮ ಸಂಸ್ಕಾರದ ದೇಶವಾಗಿದೆ.

ಶಿರಹಟ್ಟಿ: ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಸಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಸಂಸ್ಕಾರಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ನಮ್ಮ ದೇಶಕ್ಕೆ ಅಧ್ಯಾತ್ಮವೇ ದೊಡ್ಡ ಶಕ್ತಿಯಾಗಿದೆ. ಸಮಾಜದ ಹಾಗೂ ಸರ್ವರ ಏಳಿಗೆಗೆ ಅಧ್ಯಾತ್ಮವೇ ಸುಲಭ ಮಾರ್ಗ ತೋರಿಸುತ್ತದೆ ಎಂದು ಜೈನ ಸಮಾಜದ ಗುರುಗಳಾದ ವಿಮಲಸಾಗರ ಸೂರಿಜಿ ಮಾರಾಸಾಹೇಬ ತಿಳಿಸಿದರು.ಲೋಕ ಕಲ್ಯಾಣಾರ್ಥವಾಗಿ ಗದುಗಿನಲ್ಲಿ ಚತುರ್ಮಾಸದ ಪ್ರಯುಕ್ತ ಜರುಗಿದ ೪ ತಿಂಗಳ ಧರ್ಮ ಕಾರ್ಯಕ್ರಮ ಮುಗಿಸಿ ಮೊಲದ ಬಾರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಶಿರಹಟ್ಟಿ ಪಟ್ಟಣಕ್ಕೆ ಪ್ರವೇಶ ಮಾಡುತ್ತಿದ್ದಂತೆ ಜೈನ ಸಮಾಜದವರು ವಾದ್ಯ ಮೇಳಗಳೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಪಟ್ಟಣದಲ್ಲಿ ಸಂಚರಿಸುತ್ತಲೇ ಪಾರ್ಶ್ವನಾಥ ಜೈನ ಮಂದಿರಕ್ಕೆ ತೆರಳಿ ಅಲ್ಲಿ ಧರ್ಮದ ಕುರಿತು ಪ್ರವಚನ ನೀಡಿದರು.

ಜನರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಅರಿವು, ಧಾರ್ಮಿಕ ಭಾವನೆ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಧರ್ಮ ಬೋಧನೆಯ ತತ್ವಗಳನ್ನು ಬಿತ್ತಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ನಮ್ಮ ದೇಶ ಧರ್ಮದ ತಳಹದಿಯ ಮತ್ತು ಉತ್ತಮ ಸಂಸ್ಕಾರದ ದೇಶವಾಗಿದೆ. ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ ಹೊಂದುವುದು ಅವಶ್ಯಕವಾಗಿದೆ. ತಮ್ಮ ಮಕ್ಕಳಿಗೆ ಎಷ್ಟೇ ಶಿಕ್ಷಣ ಕೊಡಿಸಿದರೂ ಮೊದಲು ಉತ್ತಮ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯವಾಗಿದೆ ಎಂದರು.

ಮಾನವನ ಬಹುದೊಡ್ಡ ನಿಧಿ ಅಧ್ಯಾತ್ಮ. ಮಾನವನ ಅಧ್ಯಾತ್ಮ ಜೀವನದಿಂದ ಮಾತ್ರ ಉನ್ನತ ಶ್ರೇಯಸ್ಸು, ಶಾಂತಿ ನೆಮ್ಮದಿ ಹಾಗೂ ಜೀವನ ಮೌಲ್ಯವನ್ನು ಆನಂದಿಸಬಹುದು. ಭಾರತ ಅಧ್ಯಾತ್ಮದ ಸ್ವರ್ಗ ಮತ್ತು ಪುಣ್ಯ ಭೂಮಿ. ಭಾರತವನ್ನು ಇಡೀ ಜಗತ್ತು ಪವಿತ್ರ ನಾಡು ಎಂದು ಕರೆದಿದೆ. ಭಾರತೀಯರು ಎಲ್ಲ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡುತ್ತಿರುವುದಕ್ಕೆ ಆಧ್ಯಾತ್ಮಿಕ ಶಕ್ತಿಯ ರಹಸ್ಯವೇ ಕಾರಣವಾಗಿದೆ ಎಂದರು.ಆಡಂಬರದ ಜೀವನಕ್ಕಿಂತ ಆದರ್ಶದ ಜೀವನ ಶ್ರೇಷ್ಠ ಎಂಬುದು ಅರಿತಾಗ ಸಹಬಾಳ್ವೆಯ ಬಳ್ಳಿ ಜಿಗುರೊಡೆಯಲು ಸಾಧ್ಯ. ದೈನಂದಿನ ಒತ್ತಡದ ಜೀವನದಲ್ಲಿ ಮಾನಸಿಕ, ದೈಹಿಕ ನೆಮ್ಮದಿಗೆ ಹಾಗೂ ಶಾಂತಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ. ಯಾಂತ್ರಿಕ ಜೀವನದಲ್ಲಿ ಮನುಷ್ಯರಿಗೆ ವಿಶ್ರಾಂತಿ ಎನ್ನುವುದೇ ಇಲ್ಲವಾಗಿದ್ದು, ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳಿಂದಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುತ್ತದೆ ಎಂದರು.

ಮುಖಂಡರಾದ ಭವರಲಾಲ್ ಮಣೋತ್, ಬುರಚಂದ್ ಜೈನ, ಉಮೇದಮಲ್ ಜೈನ, ಗೌತಮ ಜೈನ, ಪ್ರವೀಣ ಜೈನ, ದಿಲೀಪ್ ಮಣೋತ್, ಮಧು ಜೈನ, ಸವಿತಾ ಜೈನ, ತ್ರಿಶಲ್ ಜೈನ, ನಿರ್ಮಲಾ ಜೈನ, ಸಂಗೀತಾ ಜೈನ, ಧೀರಜ್ ಜೈನ, ಮೇವುಲ್ ಜೈನ, ಪ್ರಕ್ಷಾಲ್ ಜೈನ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!