ಲೋಕ ಅದಾಲತ್: 3659 ಪ್ರಕರಣಗಳಲ್ಲಿ 3114 ಇತ್ಯರ್ಥ

KannadaprabhaNewsNetwork |  
Published : Mar 24, 2024, 01:33 AM IST
ಲೋಕ ಅದಾಲತ್‌ | Kannada Prabha

ಸಾರಾಂಶ

1493 ಪ್ರಕರಣ ಕೈಗೆತ್ತಿಕೊಂಡು 1350 ಪ್ರಕರಣವನ್ನು ಇತ್ಯರ್ಥ ಪಡಿಸಿದರು. ಹಿರಿಯ ಶ್ರೇಣಿ, ಕಿರಿಯ ಶ್ರೇಣಿ ಮತ್ತು ಹೆಚ್ಚುವರಿ ನ್ಯಾಯಾಲಯದ ಒಟ್ಟು 3659 ಪ್ರಕರಳಲ್ಲಿ 3114 ಇತ್ಯರ್ಥಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ಪಟ್ಟಣದಲ್ಲಿನ ಹಿರಿಯ, ಕಿರಿಯ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಏಕಕಾಲಕ್ಕೆ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಸಿವಿಲ್ ಹಾಗೂ ಕ್ರಿಮಿನಲ್ ಸ್ವರೂಪದ ಪ್ರಕರಣಗಳನ್ನು ನ್ಯಾಯಾಧೀಶರುಗಳು ಕಕ್ಷಿದಾರರಿಗೆ ತಿಳಿವಳಿಕೆ ನೀಡಿ ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿದರು.

ಈ ಲೋಕ ಅದಾಲತ್‌ನಲ್ಲಿ ಹೆಚ್ಚಾಗಿ ಭೂಸಾಸ್ವಾಧೀನ ಪ್ರಕರಣ, ಬ್ಯಾಂಕ್ ಪ್ರಕರಣ, ಮೋಟಾರ್ ವಾಹನ ಅಪಘಾತ ಪ್ರಕರಣ ಸಂಬಂಧಿಸಿದ ಪ್ರಕರಣ, ವೈಹಿವಾಹಿಕ ಪ್ರಕರಣ, ರಾಜಿಯಾಗಬಲ್ಲ ಕ್ರಿಮೀನಲ್ ಮತ್ತು ಸಿವಿಲ್ ಪ್ರಕರಣ, 138 ಎನ್‍ಐ ಕಾಯ್ದೆ ಪ್ರಕರಣ ಹಾಗೂ ಜನನ ಮತ್ತು ಮರಣ ನೋಂದಣಿ ಪ್ರಕರಣ, ವಿವಾಹ ವಿಚ್ಛೇಧನ ಮತ್ತು ಪೊಲೀಸ್ ದಂಡ ಹೀಗೆ ಮೂರು ಕೋರ್ಟ್‍ನಲ್ಲಿ ಹಿರಿಯ ಮತ್ತು ಕಿರಿಯ ನ್ಯಾಯಾಧೀಶರು ಸೇರಿ ಪ್ರತ್ಯೇಕವಾಗಿ ಪ್ರಕರಣ ರಾಜಿಗೊಳಿಸಿದರು.

ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ರಾಜಿಸಂಧಾನ ಮೂಲಕ ಕಕ್ಷಿದಾರರ ಹಲವು ಬಾಕಿ ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಿದರು. ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣದಲ್ಲಿ ಹೀಗೆ ಎಲ್ಲಾ ರೀತಿಯ ಸಿವಿಲ್ ಮತ್ತು ಕ್ರಿಮಿನಲ್ ಸ್ವೂಪದ ಪ್ರಕರಣ ಒಳಗೊಂಡು ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ 269 ಪ್ರಕರಣಗಳಲ್ಲಿ 58 ಪ್ರಕರಣಗಳು ಸ್ಥಳದಲ್ಲೇ ಇತ್ಯರ್ಥಪಡಿಸಿದರು.

ಇದೇ ವೇಳೆ ಮಾತನಾಡಿದ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರು, ಕಾನೂನು ಅರಿವಿಲ್ಲದೆ ಮತ್ತು ತಪ್ಪ ತಿಳಿವಳಿಕೆಯಿಂದ ಆದ ಪ್ರಮಾದಿಂದ ಕೋರ್ಟ್ ಕಟ್ಟೆ ಹತ್ತಿ ಸಮಯ ಹಾಗೂ ಹಣ ವ್ಯರ್ಥವಾಗುವುದನ್ನು ತಪ್ಪಿಸಲು ಲೋಕ ಅದಾಲತ್‍ನಲ್ಲಿ ಕಕ್ಷಿದಾರರಿಗೆ ರಾಜೀಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ ಅವರು ರಾಜಿಯಾಗಬಲ್ಲ 1897 ಪ್ರಕರಣ ಕೈಗೆತ್ತಿಕೊಂಡು 1706 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಡಿಸಿದರು.

ಅಲ್ಲದೆ, ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಲಯದ ಪ್ರಧಾನ ಹಾಗೂ ಕಿರಿಯ ಹೆಚ್ಚುವರಿ ಶ್ರೇಣಿ ಪ್ರಭಾರ ನ್ಯಾಯಾಧೀಶರಾದ ಎಸ್.ಎಂ. ಅರುಟಗಿ ಅವರು 1493 ಪ್ರಕರಣ ಕೈಗೆತ್ತಿಕೊಂಡು 1350 ಪ್ರಕರಣವನ್ನು ಇತ್ಯರ್ಥ ಪಡಿಸಿದರು. ಹಿರಿಯ ಶ್ರೇಣಿ, ಕಿರಿಯ ಶ್ರೇಣಿ ಮತ್ತು ಹೆಚ್ಚುವರಿ ನ್ಯಾಯಾಲಯದ ಒಟ್ಟು 3659 ಪ್ರಕರಳಲ್ಲಿ 3114 ಇತ್ಯರ್ಥಗೊಳಿಸಿದ್ದಾರೆ.

ಈ ಅದಾಲತನಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಇಸ್ಮಾಯಿಲ ಪಟೇಲ್, ಅಭಿಯೋಜಕಿ ಜ್ಯೋತಿ ವಿ. ಬಂದಿ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ ರಾಠೋಡ, ಕಾರ್ಯದರ್ಶಿ ಬಿ.ಟಿ. ಸಿಂಧೆ, ಹಿರಿಯ ನ್ಯಾಯವಾದಿ ಎಸ್.ಎ. ಪಾಟೀಲ, ಎ.ಡಬ್ಲೂ ಅನ್ಸಾರಿ, ದೇವಾನಂದ ಹೋದಲೂರಕರ್, ಪಿ.ವಿ. ಆಪ್ಟೆ, ಡಿ.ಎಸ್. ನಾಡಕರ್, ಎಸ್.ಎಸ್. ಚಿಂಚೂರೆ, ಎಸ್.ಡಿ.ಬೋಸಗೆ, ಮಹಾದೇವ ಹತ್ತಿ, ಸ್ವಾಮಿರಾವ ಚನಗುಂಡ, ಎಂ.ವಿ. ಏಕಬೋಟೆ ಸೇರಿದಂತೆ ಇನ್ನೂಳಿದ ನ್ಯಾಯವಾದಿಗಳು ಮತ್ತು ಲೋಕ ಅದಾಲತ್ ಯಶಸ್ವಿಗೆ ಕೋರ್ಟ್ ಸಿಬ್ಬಂದಿಗಳು ಇನ್ನಿತರ ಹಿರಿಯ ಕಿರಿಯ ನ್ಯಾಯವಾದಿಗಳು, ಕಕ್ಷಿದಾರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ