-ಶಹಾಪುರ ಪಡಿತರ ಅಕ್ಕಿ ಅಕ್ರಮ ಪ್ರಕರಣಕ್ಕೆ ಮರುಜೀವ । ದಾಖಲೆ ಸಮೇತ ಹೇಳಿಕೆ ನೀಡಿದ ಅಶೋಕ್ ಮಲ್ಲಾಬಾದಿ । ತನಿಖಾಧಿಕಾರಿ ಬಗ್ಗೆ ಅನುಮಾನ
ಕನ್ನಡಪ್ರಭ ವಾರ್ತೆ ಯಾದಗಿರಿ
ತೀವ್ರ ಚರ್ಚೆಗೆ ಗ್ರಾಸವಾಗಿದ್ದ, ಶಹಾಪುರದಲ್ಲಿನ ಸಮಾರು 2 ಕೋಟಿ ರು.ಗಳ ಪಡಿತರ ಅಕ್ಕಿ ನಾಪತ್ತೆ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಕೋರಿ ಸಾಮಾಜಿಕ ಕಾರ್ಯಕರ್ತ, ಶಹಾಪುರ ತಾಲೂಕು ಮುಡಬೂಳದ ಅಶೋಕರಾವ್ ಕುಲಕರ್ಣಿ ಮಲ್ಲಾಬಾದಿ ನೀಡಿದ್ದ ದೂರಿನ ಮೇರೆಗೆ, ಅವರ ವಿಚಾರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ದಾಖಲೆಗಳ ಸಮೇತ ಹೇಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ, ಮೂಲ ಆರೋಪಿಗಳ ಪತ್ತೆಯಾಗದೆ, ಬಹುತೇಕ ಮುಚ್ಚಿಯೇ ಹೋಯ್ತು ಎನ್ನಲಾಗುತ್ತಿರುವ ಶಹಾಪುರ ಪಡಿತರ ಅಕ್ಕಿ ಅಕ್ರಮ ಪ್ರಕರಣಕ್ಕೆ ಮರುಜೀವ ಸಾಧ್ಯತೆಯಿದೆ."ಅಕ್ಕಿ ನಾಪತ್ತೆ ಪ್ರಕರಣದ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಆಗ ನಾನು ಬೆಂಗಳೂರಿಗೆ ತೆರಳಿ ದೂರು ನೀಡಿದ್ದೆ. ಈ ಕುರಿತು, ಮೇಲಧಿಕಾರಿಗಳ ಸೂಚನೆ ಮೇರೆಗೆ ವಿಚಾರಣೆಗೆ ಹಾಜರಾಗುವಂತೆ ನನಗೆ ಪತ್ರ ಬಂದಿದ್ದರಿಂದ ಯಾದಗಿರಿ ಲೋಕಾಯುಕ್ತ ಕಚೇರಿಗೆ ತೆರಳಿ ದಾಖಲಾತಿಗಳ ಸಮೇತ ಎಲ್ಲ ವಿವರಣೆ ನೀಡಿದ್ದೇನೆ. ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ಮರೆ ಮಾಚಲಾಗಿದೆ, ಮೂಲ ದಂಧೆಕೋರರನ್ನು ಬಿಟ್ಟು, ಲಂಚ ನೀಡದ ಕೆಲವು ಅಮಾಯಕರನ್ನು ದೂರಿನಲ್ಲಿ ದಾಖಲಿಸಲಾಗಿದೆ. ಪ್ರಕರಣದ ತನಿಖಾಧಿಕಾರಿ ಮೇಲೆಯೇ ಅನುಮಾನಗಳಿದ್ದಾಗ, ಅವರಿಂದಲೇ ಈ ತನಿಖೆ ನಡೆಸಿದಾಗ, ಸತ್ಯ ಹೊರಬರುವುದಾದರೂ ಹೇಗೆ ಎಂದು ನಾನು ದೂರಿನಲ್ಲಿ ತಿಳಿಸಿದ್ದೇನೆ. ನನ್ನ ಈ ಎಲ್ಲ ಹೇಳಿಕೆಯನ್ನು ಅಧಿಕಾರಿಗಳು ಪಡೆದಿದ್ದು, ಇಲಾಖೆಯ ಮೇಲ್ಮಟ್ಟಕ್ಕೆ ಕಳುಹಿಸುವುದಾಗಿ ಅವರು ತಿಳಿಸಿದ್ದಾರೆ. " ಎಂದು ದೂರುದಾರ ಅಶೋಕರಾವ್ ಕುಲಕರ್ಣಿ ಮಲ್ಲಾಬಾದಿ "ಕನ್ನಡಪ್ರಭ "ಕ್ಕೆ ತಿಳಿಸಿದರು.
- ಪ್ರಕರಣ ರದ್ದು ಕೋರಿದ್ದ ಅರ್ಜಿ ಹೈಕೋರ್ಟಿನಲ್ಲಿ ವಜಾ
ಕನ್ನಡಪ್ರಭ ವಾರ್ತೆ ಯಾದಗಿರಿ
ಶಹಾಪುರದ ಅಕ್ಕಿ ನಾಪತ್ತೆ ಪ್ರಕರಣದ ದೂರುದಾರರೂ ಆಗಿದ್ದ ಭೀಮರಾಯನನ್ನು ಚಾರ್ಚ್ಶೀಟಿನಲ್ಲಿ ಆರೋಪಿಯನ್ನಾಗಿಸಿದೆ. ನಾಪತ್ತೆ ಪ್ರಕರಣದ ವೇಳೆ ಯಾದಗಿರಿ ಜಿಲ್ಲೆಯ ಆಹಾರ ಸರಬರಾಜು ಇಲಾಖೆ ಉಪ ನಿರ್ದೇಶಕರಾಗಿದ್ದ ಭೀಮರಾಯ ಈ ಪ್ರಕರಣದ ದೂರುದಾರರೂ ಆಗಿದ್ದರು. ಆದರೆ, ಅವರ ವಿರುದ್ಧವೇ ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಕ್ರಮಕ್ಕೆ ಕೋರಿ ಯಾದಗಿರಿ ಜಿಲ್ಲಾಧಿಕಾರಿಗಳೇ ಇಲಾಖೆಯ ಬೆಂಗಳೂರು ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ, ಭೀಮರಾಯ ವಿರುದ್ಧ ಇಲಾಖೆ ಕ್ರಮಕ್ಕೆ ಮುಂದಾಗದಿರುವುದು ಅಚ್ಚರಿ ಮೂಡಿಸಿತ್ತು.
====ಬಾಕ್ಸ್:2====
ಜಿಲ್ಲೆಯ ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿಯಮಿತ (ಟಿ.ಎ.ಪಿ.ಸಿ.ಎಂ.ಎಸ್) ಗೋದಾಮಿನಿಂದ, ಸುಮಾರು 2 ಕೋಟಿ ರು. ಗಳಿಗೂ ಹೆಚ್ಚಿನ ಮೌಲ್ಯದ 6077 ಕ್ವಿಂಟಾಲ್ ಪಡಿತರ ಅಕ್ಕಿ ನಾಪತ್ತೆ ಕುರಿತು 25 ನವೆಂಬರ್ 2023ರಂದು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
-----
....ಕೋಟ್..1ಯಾದಗಿರಿ ಲೋಕಾಯುಕ್ತ ಕಚೇರಿಗೆ ತೆರಳಿ ದಾಖಲಾತಿಗಳ ಸಮೇತ ಎಲ್ಲ ವಿವರಣೆ ನೀಡಿದ್ದೇನೆ. ನನ್ನ ಹೇಳಿಕೆಯನ್ನು ಬೆಂಗಳೂರಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.
- ಅಶೋಕರಾವ್ ಕುಲಕರ್ಣಿ ಮಲ್ಲಾಬಾದಿ, ಶಹಾಪುರ. (10ವೈಡಿಆರ್3)----
10ವೈಡಿಆರ್1 : ಅಕ್ಕಿ ಅಕ್ರಮ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿ.10ವೈಡಿಆರ್2