ಹಾಲುಮತದವರೇ ಜಿಪಂ ಅಧ್ಯಕ್ಷರಾಗಲು ಎಂಬಿಪಾ ಕಾರಣ: ಸೋಮನಾಥ ಕಳ್ಳಿಮನಿ

KannadaprabhaNewsNetwork |  
Published : Aug 20, 2026, 04:15 AM IST
ಹಾಲುಮತ ಸಮಾಜದ ಬಗ್ಗೆ ನಾಡಗೌಡರ ಹೇಳಿಕೆ ಅನಗತ್ಯ | Kannada Prabha

ಸಾರಾಂಶ

ನನ್ನ ಪತ್ನಿ ಸುಜಾತಾ ಕಳ್ಳಿಮನಿ, ನೀಲಮ್ಮ ಮೇಟಿ, ಸಂಗೀತಾ ದಿನ್ನಿ ಹಾಲುಮತದ ಈ ಮೂವರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಲು ಎಂ.ಬಿ.ಪಾಟೀಲರೇ ಕಾರಣರಾಗಿದ್ದಾರೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನನ್ನ ಪತ್ನಿ ಸುಜಾತಾ ಕಳ್ಳಿಮನಿ, ನೀಲಮ್ಮ ಮೇಟಿ, ಸಂಗೀತಾ ದಿನ್ನಿ ಹಾಲುಮತದ ಈ ಮೂವರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಲು ಎಂ.ಬಿ.ಪಾಟೀಲರೇ ಕಾರಣರಾಗಿದ್ದಾರೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಎಂ.ಬಿ.ಪಾಟೀಲರ ಮೇಲೆ ಆರೋಪಿಸಿದ್ದು ತಪ್ಪು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಾಲುಮತದ ನೀಲಮ್ಮ ಮೇಟಿ, ಸುಜಾತಾ ಕಳ್ಳಿಮನಿ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸುವ ಸಂದರ್ಭದಲ್ಲಿ ಬಹುಮತವಿರಲಿಲ್ಲ. ನಮ್ಮ ಪಕ್ಷದವರೇ ಪಕ್ಷಾಂತರ ಮಾಡಿದ್ದರೂ ಇದನ್ನು ಸವಾಲಾಗಿ ಸ್ವೀಕರಿಸಿದ ಎಂ.ಬಿ.ಪಾಟೀಲರು ಬಿಜೆಪಿ ಆಡಳಿತಾರೂಢ ಎದುರಾದ ಸಂದರ್ಭದಲ್ಲಿ ತನು, ಮನ, ಧನದಿಂದ ಬೆಂಬಲಿಸಿ ಅಧ್ಯಕ್ಷ ಸ್ಥಾನವನ್ನು ಕೊಡಿಸಿದ್ದಾರೆ ಎಂದು ಹೇಳಿದರು.

ಹಾಲುಮತ ಸಮಾಜದ ಸಂಗೀತಾ ದಿನ್ನಿ, ನೀಲಮ್ಮ ಮೇಟಿ, ಸುಜಾತಾ ಕಳ್ಳಿಮನಿ ಅಧ್ಯಕ್ಷರಾಗಲು ಎಂ.ಬಿ.ಪಾಟೀಲರೆ ಕಾರಣರಾಗಿದ್ದಾರೆ. ಆ ಸಮಯದಲ್ಲಿ ಎಂ.ಬಿ.ಪಾಟೀಲರು, ಸುನೀಲಗೌಡರು, ಶಿವಾನಂದ ಪಾಟೀಲರು, ಯಶವಂತರಾಯಗೌಡರು ಸೇರಿದಂತೆ ಹಲವರು ಬೆಂಬಲಿಸಿ, ನಮಗೆ ಸಾಥ್ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಯಾವುದಾದರೂ ಕ್ಷೇತ್ರದಲ್ಲಿ ಹಾಲುಮತದ ಸಮಾಜದವರಿಗೆ ಟಿಕೆಟ್ ಕೊಡಿಸಿ ಅವರನ್ನು ಶಾಸಕರನ್ನಾಗಿಸಬೇಕಿದೆ ಎಂದರು.

ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ತಾಲೂಕುಗಳಲ್ಲಿ ಹಾಲುಮತ ಸಮಾಜದ ಜನಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ವಿಧಾನಸಭೆಗೆ ಟಿಕೆಟ್ ನೀಡಬೇಕೆಂದು ಎಲ್ಲರೂ ಸೇರಿ ಒತ್ತಾಯಿಸುತ್ತೇವೆ ಎಂದರು.

ಜಿಪಂ‌ ಮಾಜಿ ಅಧ್ಯಕ್ಷೆ ಸಂಗೀತಾ ದಿನ್ನಿ ಮಾತನಾಡಿ, ಎಂ.ಬಿ.ಪಾಟೀಲರು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಮಾಜದವರಿಗೆ ಅವಕಾಶ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಶಾಸಕರ ಸಹಕಾರದಿಂದಲೇ ನಮಗೆ ಅವಕಾಶ ಸಿಕ್ಕಿದೆ. ಕುರುಬ ಸಮಾಜಕ್ಕೆ ಅನ್ಯಾಯ ಆಗಿದೆ ಎನ್ನುವುದು ತಪ್ಪು. ಜಿಪಂ ಅಧ್ಯಕ್ಷ ಸ್ಥಾನಕ್ಕೇರಿಸಲು ಎಂ.ಬಿ.ಪಾಟೀಲರು ಮತ್ತು ಶಿವಾನಂದ ಪಾಟೀಲರು ಚರ್ಚಿಸಿ ಹಾಲುಮತದ ನನ್ನನ್ನು ಪ್ರಥಮವಾಗಿ ಅವಕಾಶ ಕಲ್ಪಿಸಿದ್ದರು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವೀಯತೆಯೇ ಎಲ್ಲ ಧರ್ಮಗಳ ತಿರುಳು
ನಾಗೇಂದ್ರ ವಿರುದ್ಧ ಮುಂದುವರಿದ ಬಿಜೆಪಿ ಧರಣಿ