ದಿವ್ಯಾಂಗವುಳ್ಳವರು ಸಮಾಜದ ಮುನ್ನೆಲೆಗೆ ಬರಬೇಕು: ಎಂ.ಎಸ್. ಚಲುವರಾಜು

KannadaprabhaNewsNetwork |  
Published : May 06, 2024, 12:31 AM IST
51 | Kannada Prabha

ಸಾರಾಂಶ

ನರಗಳ ವೈಕಲ್ಯತೆಯನ್ನು ಹೊಂದಿರುವವರು, ಅಂಗವೈಕಲ್ಯತೆಯನ್ನು ಹೊಂದಿರುವವರು, ದೃಷ್ಟಿ ಹೀನರಾಗಿರುವವರು, ಬುದ್ಧಿ ಮಾಂಧ್ಯತೆಯನ್ನು ಹೊಂದಿರುವ ಸಮಾಜದಲ್ಲಿ 21 ರೀತಿಯ ಅಂಗವೈಕಲ್ಯ ಉಳ್ಳವರನ್ನು ಸರ್ಕಾರ ಗುರುತಿಸಿದೆ.

ಕನ್ನಡಪ್ರಭ ವಾರ್ತೆ ಬನ್ನೂರು

ಸರ್ಕಾರ ವಿಶೇಷ ಚೇತನವುಳ್ಳವರ ಅಭಿವೃದ್ಧಿಗಾಗಿ ವಿವಿಧ ಯೋಜನೆಯನ್ನು ರೂಪಿಸಿ ಜಾರಿ ಮಾಡಿ ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರೂ ಸಮಾಜದಲ್ಲಿ ವಿಶೇಷಚೇತನರಿಗೆ ಮುಖ್ಯವಾಹಿನಿಗೆ ಬರುತ್ತಿಲ್ಲ. ಸರ್ಕಾರ ನೀಡುವ ಸೌಲಭ್ಯ, ಸವಲತ್ತುಗಳನ್ನು ಪಡೆದುಕೊಳ್ಳುತ್ತಿಲ್ಲ ಎಂದು ಅಂಗವಿಕಲ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಎಸ್. ಚಲುವರಾಜು ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಅಂಗವಿಕಲರ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರಗಳ ವೈಕಲ್ಯತೆಯನ್ನು ಹೊಂದಿರುವವರು, ಅಂಗವೈಕಲ್ಯತೆಯನ್ನು ಹೊಂದಿರುವವರು, ದೃಷ್ಟಿ ಹೀನರಾಗಿರುವವರು, ಬುದ್ಧಿ ಮಾಂಧ್ಯತೆಯನ್ನು ಹೊಂದಿರುವ ಸಮಾಜದಲ್ಲಿ 21 ರೀತಿಯ ಅಂಗವೈಕಲ್ಯ ಉಳ್ಳವರನ್ನು ಸರ್ಕಾರ ಗುರುತಿಸಿದೆ. ಸರ್ಕಾರ ಇವರ ಅಭಿವೃದ್ಧಿಗಾಗಿ ಹಿಂದೆ ಇದ್ದ ಶೇ. 3 ರಷ್ಟು ಮೀಸಲಾತಿಯನ್ನು ಶೇ. 5ಕ್ಕೆ ಹೆಚ್ಚು ಮಾಡಿದೆ ಎಂದರು.

ಸ್ಥಳೀಯ ಸಂಸ್ಥೆಯಲ್ಲಿಯೂ ಶೇ.3 ರಷ್ಟು ಅನುದಾನ ಮೀಸಲಿರಿಸುತ್ತಿದ್ದುದ್ದನ್ನು ಇಂದು ಶೇ. 5ಕ್ಕೆ ಏರಿಸಿದೆ. ಇವುಗಳ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿಯೂ ದಿವ್ಯಾಂಗರು ಮುಂದೆ ಬರದೇ ಇರುವುದು ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಸದುಪಯೋಗವಾಗುತ್ತಿಲ್ಲ ಎಂದು ಅವರು ತಿಳಿಸಿದರು.

ದೇಹದಲ್ಲಿ ಯಾವುದೇ ಒಂದು ತೊಂದರೆ ಇದ್ದರೆ ಅದನ್ನೇ ಪ್ರಧಾನವಾಗಿ ಮಾಡಿಕೊಂಡು ಯಾವುದೇ ಕೆಲಸಕ್ಕೆಬಾರದವರು ಎಂದು ನಿರ್ಧರಿಸುವುದು ಸರಿಯಲ್ಲ. ಯಾವುದಾದರೂ ಚಟುವಟಿಕೆಯಲ್ಲಿ ಪಾಲ್ಗೊಂಡು ಸಮಾಜಕ್ಕೆ ತನ್ನಿಂದಲೂ ಕೊಡುಗೆ ನೀದಲು ಸಾಧ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸಾಮಾಜಿಕ ದೃಷ್ಟಿಕೋನ ಹಾಗೂ ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿಶೇಷಚೇತನರನ್ನು ನೋಡುತ್ತಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಮಾತನಾಡಿ, ವಿಶೇಷಚೇತನರಿಗಾಗಿ ನಡೆಸುವ ಕಾರ್ಯಕ್ರಮದಲ್ಲಿ ವಿಶೇಷ ಚೇತನುಳ್ಳವರು ಹೆಚ್ಚು ಪಾಲ್ಗೊಂಡರೇ ಅವರಿಗೆ ದೊರೆಯುವ ಸೌಲಭ್ಯಗಳು ಅವರಿಗೆ ಮನವರಿಕೆಯಾಗುತ್ತದೆ. ಆದರೆ ಅವರಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಅವರೇ ಬೆರಳೆಣಿಕೆಯಷ್ಟು ಮಂದಿ ಪಾಲ್ಗೊಂಡರೇ ಯಾವ ಪ್ರಯೋಜನವಾಗುತ್ತದೆ ಎಂದು ವಿಷಾದಿಸಿದರು.

ಇದೇ ವೇಳೆ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ, ಗ್ರಾಮೀಣ ಪ್ರತಿಭಾವಂತ ಸಾಧಕರನ್ನು, ರೈತ ಮುಖಂಡರನ್ನು ಸನ್ಮಾನಿಸಲಾಯಿತು.

ಅಂಗವಿಕಲರ ಸಮೃದ್ಧಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಸ್. ಸಿದ್ದರಾಜು, ರಮೇಶ್, ರೈತ ಮುಖಂಡ ರವಿ, ಶಿವರಾಮು, ರಂಗಸ್ವಾಮಿ, ಪುಟ್ಟಸ್ವಾಮಿಗೌಡ, ಬಾಬು, ಪಾರ್ಥ ಮೊದಲಾದವರು ಇದ್ದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌