ಕನ್ನಡಪ್ರಭ ವಾರ್ತೆ ತುಮಕೂರು
ಅವರು ಬಸವಕೇಂದ್ರ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ ನಗರದ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿಯಲ್ಲಿ, ಮಡಿವಾಳ ವೃತ್ತಿಯ ಕುಟುಂಬದಲ್ಲಿ ಜನಿಸಿದ ಈತ ಬಸವಣ್ಣನವರ ಪ್ರಭಾವದಿಂದ ಕಲ್ಯಾಣಕ್ಕೆ ಹೋಗಿ ಅಲ್ಲಿ ಕೇವಲ ಭಕ್ತರ, ಶರಣರ ಬಟ್ಟೆಗಳನ್ನು ಮಡಿಮಾಡುವ ಕಾಯಕ ಮಾಡುತ್ತಾ, ಬಸವಣ್ಣನವರ ಅಂಗರಕ್ಷಕನಾಗಿ ಕಲಚೂರಿ ರಾಜ್ಯದಲ್ಲಿ ಸೇನಾ ತುಕಡಿಯೊಂದರ ಜವಾಬ್ದಾರಿ ಸ್ಥಾನಕ್ಕೆ ಏರಿದ್ದು, ಆತನಲ್ಲಿದ್ದ ನಿಷ್ಠೆ ಧೈರ್ಯ ಸಾಹಸಗಳೇ ಕಾರಣ ಎಂದರು.ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತನೆ ಮಾಡುತ್ತಿದ್ದ ಪ್ರಗತಿಪರರಿಗೆ, ಬಂಡಾಯಗಾರರಿಗೆ ಹನ್ನೆರಡನೇ ಶತಮಾನದಲ್ಲಿ ರಾಜಪ್ರಭುತ್ವವನ್ನು ಮತ್ತು ಕೋಮುವಾದಿಗಳನ್ನು ಎದುರು ಹಾಕಿಕೊಂಡು ವೇದಿಕೆಯನ್ನು ಕಲ್ಪಿಸಿಕೊಟ್ಟವರು ಬಸವಣ್ಣ, ಅವರ ನೇತೃತ್ವದಲ್ಲಿ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಜಾತ್ಯತೀತ ಪರಿಕಲ್ಪನೆ ಆಧಾರದ ಮೇಲೆ ಸಮಾಜ ಕಟ್ಟಲು ಪ್ರಯತ್ನಿಸಿದವರು. ಆದರೆ ಮೂಲಭೂತವಾದಿಗಳು ಅದನ್ನು ದಮನ ಮಾಡಲು ಪ್ರಯತ್ನಿಸಿದರೂ ಅವರ ಚಿಂತನೆಗಳ ಅನುಷ್ಠಾನಕ್ಕಾಗಿ ಪ್ರಸ್ತುತ ಸಮಾಜದಲ್ಲಿ ಅಲ್ಲಲ್ಲಿ ಹೋರಾಟಗಳು ನಡೆಯುತ್ತಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಡಾ. ವಿಜಯಕುಮಾರ ಕಮ್ಮಾರ್ ಮಾತನಾಡಿದರು, ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ರಾಮಕೃಷ್ಣಪ್ಪ, ಬಸವಕೇಂದ್ರದ ಕಲ್ಪನಾ ವೇದಿಕೆಯಲ್ಲಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ನಾಗಭೂಷಣ್ ಸ್ವಾಗತಿಸಿದರು. ಚಿಕ್ಕಬೆಳ್ಳಾವಿ ಶಿವಕುಮಾರ್ ವಂದಿಸಿದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು.