ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕರ್ನಾಟಕ ಏಕೀಕರಣ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಅಪಾರವಾಗಿದೆ. ಅಂತಹ ಮಹಾತ್ಮರ ತತ್ವಾದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದು ಮಾರಾಪುರದ ಶ್ರೀಮಂತ ಮಹಾರಾಜರು ನುಡಿದರು.ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ನಡೆದ ಮಾಧವಾನಂದರ 109ನೇ ಜಯಂತಿ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಮತ್ತು ದಾಸಬೋಧ ಪಠಣ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶ್ರೀಕ್ಷೇತ್ರ ಇಂಚಗೇರಿಮಠದ ಮಾಧವಾನಂದ ಪ್ರಭೂಜಿ ಸ್ವಾತಂತ್ರ್ಯ ಹೋರಾಟಗಾರರು. ಆಧ್ಯಾತ್ಮಿಕ ಚೇತನ, ಸಾಮಾಜಿಕ ಚಿಂತಕ, ಕ್ರಾಂತಿಯೋಗಿ ಶ್ರೀ ಸಮರ್ಥ ಮಾಧವಾನಂದ ಪ್ರಭೂಜಿಯವರು ಸಮಾಜದಲ್ಲಿ ಸಮಾನತೆ ತರಲು ಸಾಕಷ್ಟು ಹೋರಾಡಿದವರು. ಸುಮಾರು 26000 ಸಾವಿರಕ್ಕೂ ಹೆಚ್ಚು ಅಂತರ್ಜಾತಿ ವಿವಾಹ ನೆರವೇರಿಸಿದವರು ಎಂದು ತಿಳಿಸಿದರು.
ಗಿರಿಮಲ್ಲೇಶ್ವರ ಟ್ರಸ್ಟ್ ಅಧ್ಯಕ್ಷ ಡಾ.ಸಂಗಮೇಶ ಹಿಡಕಲ್ ಮಾತನಾಡಿ, ಮಾಧವಾನಂದ ಪ್ರಭೂಜಿಯವರ ಆದರ್ಶಗಳು ಇಂದಿನ ಯುವಕರಿಗೆ ಸ್ಫೂರ್ತಿಯಾಗಿವೆ. ಕರ್ನಾಟಕ ಮಹಾರಾಷ್ಟ್ರದ ಇಂಚಗೇರಿಮಠದ ವಿವಿಧ ಶಾಖಾ ಮಠ, ಆಶ್ರಮ, ಭಜನಾ ಮಂದಿರಗಳಲ್ಲಿ ಅವರ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲಾಗುತ್ತಿದೆ ಎಂದರು.ಬನಹಟ್ಟಿಯ ಯಲ್ಲಪ್ಪ ಮಹಾರಾಜರು ಮಾತನಾಡಿ, ಮಾಧವಾನಂದ ಪ್ರಭೂಜಿಯವರು ಗೋವಾ ವಿಮೋಚನಾ ಹೋರಾಟಗಾರರು. ಅವರದು ಬಹುಮುಖ ವ್ಯಕ್ತಿತ್ವ. ಕರ್ನಾಟಕ ಏಕೀಕರಣದ ರೂವಾರಿ. ಪರಿಸರವಾದಿ, ಕೃಷಿಕ, ಆತ್ಮಜ್ಞಾನಿ ಮತ್ತು ದಾರ್ಶನಿಕ ಎಲ್ಲ ಒಟ್ಟಿಗೆ ಆಗಿದ್ದವರು ಎಂದರು.
ಯುವ ಅಧ್ಯಾತ್ಮ ಚಿಂತಕ ಮಹೇಶ ಇಟಕನ್ನವರ ಮಾತನಾಡಿ, ಸ್ವಾತಂತ್ರ ಸಂಗ್ರಾಮದಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲದೇ ಮಹಾರಾಷ್ಟ್ರದ ಗಡಿಗುಂಟ ಮಹಾದೇವರು ಮುರಗೋಡ ಮಿಂಚಿನಂತೆ ಸಂಚರಿಸಿ ಬ್ರಿಟಿಷರ ಸಾಮ್ರಾಜ್ಯ ಆಡಳಿತ ಯಂತ್ರವನ್ನೇ ಕಂಗೆಡಿಸಿದ್ದರು ಎಂದು ತಿಳಿಸಿದರು.ಬನಹಟ್ಟಿಯ ಪ್ರಭು ಕೋಪರ್ಡೆ ಮಹಾರಾಜರು ಮತನಾಡಿದರು. ಕಾರ್ಯಕ್ರಮದಲ್ಲಿ ಬಾಬು ಜಾಡರ, ಬಸಮ್ಮ ತಾಯಿ ಕುಂದರಗಿ ಚನ್ನಗಿರಿ ಪೂಜಾರಿ ಮಾತನಾಡಿದರು. ಮುಖಂಡರಾದ ದುಂಡಪ್ಪ ಜಾಧವ, ಅರವಿಂದ ಮಾಲಬಸುರಿ, ಕಲ್ಲಪ್ಪ ಚಿಂಚಲಿ, ಗೌಡಪ್ಪಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಗಂಗಾಧರ ಮಗದುಮ್, ಸಂಜು ಶಿರೋಳ, ಷಣ್ಮುಖ ಕದ್ದಿಮನಿ, ಗುರಪ್ಪ ಪಂಕಿ, ಮಹಾಲಿಂಗಪ್ಪ ಹೊಸೂರ್, ಯಮನಪ್ಪ ಗಾಡೀಕಾರ , ಶ್ರೀಶೈಲ ಪಟ್ಟಣಶೆಟ್ಟಿ, ಗಿರೀಶ ಜಾಧವ, ಶಿವು ಜಮಖಂಡಿ, ಚಂದ್ರಪ್ಪ ದೋಣಿ, ಮಹಾಂತೇಶ ಮಗದುಮ್, ಗುರುಸಿದ್ದಪ್ಪ ಅಂಬಿ, ಡಾ.ರಾಚಪ್ಪ ಚುಮ್ಮಡ ನಾಗಪ್ಪ ದೋಣಿ, ಬಿ.ಎಸ್.ಮಟಗಾರ, ಪ್ರಕಾಶ ಗೋಕಾವಿ, ಗುರುಪಾದ ಉರಭಿನ್ನವರ, ಸಿದ್ದರಾಮ ಜಗದಾಳ, ಮೈತ್ರಾದೇವಿ ಕದ್ದಿಮನಿ, ಸುಹಾಸಿನಿ ಕದ್ದಿಮನಿ ಸೇರಿ ಹಲವರು ಇದ್ದರು.ಚಿನ್ನ ಲೇಪಿತ ಕಿರೀಟ ಮೆರವಣಿಗೆ ಅದ್ಧೂರಿಮಾಧವಾನಂದರ ಭವ್ಯ ಫೋಟೋ ಹಾಗೂ ದಾನಿಗಳಾದ ಶ್ರೀಶೈಲಪ್ಪ ರೊಡ್ಡನ್ನವರ ಅವರು ನೀಡಿದ 2 ಕೆಜಿ ಬೆಳ್ಳಿಯ ಚಿನ್ನ ಲೇಪಿತ ಕಿರೀಟವನ್ನು ಮೆರವಣಿಗೆ ಮೂಲಕ ಮಾಧವಾನಂದ ಆಶ್ರಮದಿಂದ ಸಕಲ ಮಂಗಳವಾದ್ಯಗಳೊಂದಿಗೆ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತ, ನಡುಚೌಕಿ, ಮಹಾಲಿಂಗೇಶ್ವರ ದೇವಸ್ಥಾನ, ಜವಳಿ ಬಜಾರ, ಮಾರ್ಗವಾಗಿ ಮಾಧವಾನಂದ ಆಶ್ರಮ ತಲುಪಿತು.