ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರಿನ ಕಲ್ಯಾಣನಗರದ ಬಸವತತ್ವಪೀಠದಲ್ಲಿ ಭಾನುವಾರ 58ನೇ ಶಿವಾನುವಭವ ಗೋಷ್ಠಿ ಅಂಗವಾಗಿ ''''''''ಸೆಲ್ಫಿಬುಕ್'''''''' ಜಾಲತಾಣದ ಆ್ಯಪ್ ಬಿಡುಗಡೆ ಹಾಗೂ ''''''''ಮಧುರಚೆನ್ನ'''''''' ಏಕವ್ಯಕ್ತಿ ನಾಟಕ ಪ್ರದರ್ಶನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ಒಡಹುಟ್ಟಿದವ ಎಂದೆನಿಸಿಕೊಂಡವರು ಮಧುರಚೆನ್ನರು. ಅಲ್ಲದೆ ಮಧುರಚೆನ್ನರನ್ನು ಹೂತಿಲ್ಲ; ಬಿತ್ತೀರಿ ಎಂದ ಬೇಂದ್ರೆಯವರ ಮಾತು ನಿಜ. ಅವರನ್ನು ಉಳಿಸುವ, ಬೆಳೆಸುವ ಕೆಲಸ ''''''''ಮಧುರಚೆನ್ನ'''''''' ಎಂಬ ಏಕವ್ಯಕ್ತಿ ನಾಟಕದ ಮೂಲಕ ನಡೆದಿದೆ ಎಂದು ಶ್ಲಾಘಿಸಿದರು.
ಮಹರ್ಷಿ ಅರವಿಂದರಿಗೂ ನಮ್ಮ ಬಸವತತ್ವಪೀಠಕ್ಕೂ ಸಂಬಂಧವಿದೆ. ದೈಹಿಕ, ಮಾನಸಿಕ ಹಾಗೂ ಆತ್ಮಿಕ ವಿಕಾಸದ ಮೂಲಕ ಪ್ರತಿಯೊಬ್ಬರೂ ಸಾಧಿಸಬೇಕು. ಇದೇ ಯೋಗ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಅರವಿಂದರು. ಇದನ್ನೇ ಶರಣರು ಪ್ರತಿಪಾದಿಸಿದರು. ಇದನ್ನು ಮಧುರಚೆನ್ನರು ಮುಂದುವರಿಸಿದರು.ಇಂಥ ಅಪರೂಪದ ಕವಿ ಕುರಿತ ನಾಟಕವಿದು. ವಿಶೇಷವೆಂದರೆ ಮಧುರ ಚೆನ್ನರ ಮೊಮ್ಮಗ ಜಗದೇವ ಗಲಗಲಿ ಅವರೇ ನಾಟಕವನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಚಿಕ್ಕಮಗಳೂರಿನ ಬಸವತತ್ವಪೀಠದಲ್ಲಿ ಭಾನುವಾರ ಏರ್ಪಡಿಸಿದ್ದ 58ನೇ ಶಿವಾನುವಭವ ಗೋಷ್ಠಿ ಅಂಗವಾಗಿ ''''''''ಸೆಲ್ಫಿಬುಕ್'''''''' ಜಾಲತಾಣದ ಆ್ಯಪ್ ಅನ್ನು ಬಸವತತ್ವಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಬಿಡುಗಡೆ ಮಾಡಿದರು. ಈ ವೇಳೆ ಸಿಂದಿಗೆರೆ ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಶಿರಸಂಗಿಯ ಬಸವಮಹಾಂತ ಸ್ವಾಮೀಜಿ, ಹಿರೇಮಗಳೂರು ಕಣ್ಣನ್, ಹೇಮೇಗೌಡ ರುದ್ರಪ್ಪ, ನಂಜೇಶ್ ಬೆನ್ನೂರು ಇದ್ದರು.--ಕೋಟ್---
- ಹೇಮೇಗೌಡ ರುದ್ರಪ್ಪ, ಅಧ್ಯಕ್ಷರು, ಇಟಲಿ ಕನ್ನಡ ಅಸೋಸಿಯೇಷನ್