ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕೆಂಭಾವಿ ಪಟ್ಟಣ ಸಮೀಪದ ಜೇವರ್ಗಿ ತಾಲೂಕಿನ ಕ್ಷೇತ್ರ ದುಮ್ಮದ್ರಿ ವರಹಳ್ಳೇರಾಯನ ದೇವಸ್ಥಾನದಲ್ಲಿ ನಡೆದ ಮಧ್ವನವಮಿ ಉತ್ಸವದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ತಮ್ಮ ವಿಶಿಷ್ಠ ಜ್ಞಾನದ ಮೂಲಕ ಶ್ರೀಮದಾನಂದ ತೀರ್ಥರೆಂಬುದಾಗಿ ಪ್ರಸಿದ್ಧಿ ಪಡೆದವರು ಮಧ್ವಾಚಾರ್ಯರು. ಸಮಗ್ರ ಭಾರತದ ಇತಿಹಾಸ, ವೇದ, ಉಪನಿಷತ್ಗಳಲ್ಲಿ ಪಾಂಡಿತ್ಯ ಪಡೆದ ಮಹನ್ ಯತಿವರೇಣ್ಯರಾಗಿ ವಾಯು ದೇವರ ಮೂರನೇ ಅವತಾರವೆತ್ತಿ ಹಲವಾರು ಜ್ಞಾನಾಮೃತ ನಮಗೆ ನೀಡಿದ್ದಾರೆ ಎಂದರು.ಮಧ್ವನವಮಿ ಅಂಗವಾಗಿ ದೇವಸ್ಥಾನದ ಪ್ರಾಂಗಣದಲ್ಲಿ ನಾರಾಯಣಾಚಾರ್ಯ ಮಳ್ಳಿ ನೇತೃತ್ವದಲ್ಲಿ ಹಲವರು ಋತ್ವಿಜರ ಮಂತ್ರ ಘೋಷದೊಂದಿಗೆ ಹಣಮಂತಾಚಾರ್ಯ ಮಳ್ಳಿ ದಂಪತಿಗಳು ಪವಮಾನ ಹೋಮದ ಪೂರ್ಣಾಹುತಿ ನೆರವೇರಿಸಿದರು. ನಂತರ ಪಲ್ಲಕ್ಕಿ ಉತ್ಸವ, ರಥೋತ್ಸವ, ಕೆಂಭಾವಿ ರಘೂತ್ತಮ ಭಜನಾ ಮಂಡಳಿಯಿಂದ ಹರಿನಾಮಸ್ಮರಣೆ, ಭಜನೆ, ಅರ್ಚಕ ಗುರುರಾಜಾಚಾರ್ಯ ಜೋಷಿ ನೇತೃತವಲ್ಲಿ ವರಹಳ್ಳೇರಾಯನಿಗೆ ವಿಶೇಷ ಪೂಜೆ ಅಲಂಕಾರ ನೆರೆದಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.