ಶಿಕ್ಷಕರ ದಿನಾಚರಣೆ : ಮಡಿಕೇರಿ ಶಿಕ್ಷಕರಿಗೆ ನೇಶನ್‌ ಬಿಲ್ಡರ್‌ ಪ್ರಶಸ್ತಿ ನೀಡಿ ಸನ್ಮಾನ

KannadaprabhaNewsNetwork |  
Published : Sep 06, 2024, 01:14 AM ISTUpdated : Sep 06, 2024, 05:03 AM IST
ಚಿತ್ರ :  5ಎಂಡಿಕೆ1 : ರೋಟರಿ ಮಡಿಕೇರಿ ವುಡ್ಸ್ ನಿಂದ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು.  | Kannada Prabha

ಸಾರಾಂಶ

ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆ ವತಿಯಿಂದ ನಾಲ್ವರು ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

 ಮಡಿಕೇರಿ : ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆ ವತಿಯಿಂದ ನಾಲ್ವರು ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಭಾಗಮಂಡಲ ಕೆ.ವಿ.ಜಿ.ಐಟಿಐನ ಪದ್ಮಕುಮಾರ್ ರೈ, ನಾಪೋಕ್ಲು ಪಬ್ಲಿಕ್ ಶಾಲೆಯ ಉಷಾರಾಣಿ, ಪೆರಾಜೆ ಅಮೆಚೂರು ಪ್ರಾಥಮಿಕ ಶಾಲೆಯ ಲಾಲಿ ಮತ್ತು ಚೇರಂಬಾಣೆಯ ಅರುಣಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಅವರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೋಟರಿ ಅಸಿಸ್ಟೆಂಟ್ ಗವರ್ನರ್‌ ದೇವಣಿರ ಕಿರಣ್, ನೆಶನ್ ಬಿಲ್ಡರ್ ಪ್ರಶಸ್ತಿಯ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿದರು.

ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ವುಡ್ಸ್ ಸಂಸ್ಥೆಯ ಪ್ರಮುಖ ಕಾರ್ಯಕ್ರಮಗಳನ್ನು ಶ್ಲಾಘಿಸುವ ಜೊತೆಗೆ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರಿಗೆ ಅಭಿನಂದನೆಗಳನ್ನು ತಿಳಿಸಿದರು.

ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲ್ ಮಾತನಾಡಿ, ಅರ್ಹ ಶಿಕ್ಷಕರನ್ನು ಹುಡುಕಿ ರೋಟರಿ ವುಡ್ಸ್ ವತಿಯಿಂದ ಗೌರವಿಸಲಾಗಿದೆ ಎಂದರು.

ಕ್ಲಬ್ ಕಾರ್ಯದರ್ಶಿ ಕಿರಣ್ ಕುಂದರ್, ಸದಸ್ಯರಾದ ಪ್ರವೀಣ್, ರವಿಕುಮಾರ್, ಪ್ರಮಿಳಾ ಶೆಟ್ಟಿ, ವಸಂತ್ ಕುಮಾರ್, ರಂಜಿತ್ ಕಿಗ್ಗಾಲ್, ಪ್ರದೀಪ್ ಕಿಗ್ಗಾಲ್, ದಿವಾಕರ್, ರವಿ ಪಿ.,ವಿಶಾಲಾಕ್ಷಿ, ಪದ್ಮಾ ಗಿರಿ ಜಹೀರ್ ಅಹ್ಮದ್, ಬೋಪಣ್ಣ ಭಾಗವಹಿಸಿದ್ದರು.

ಕ್ಲಬ್ ನ ಶಿಕ್ಷಕರ ದಿನಾಚರಣೆಯ ಪೋಸ್ಟರನ್ನು ಅಸಿಸ್ಟೆಂಟ್ ಗವರ್ನರ್ ದೇವಣಿರ ಕಿರಣ್ ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!