ಕನ್ನಡಪ್ರಭ ವಾರ್ತೆ ನಾಪೋಕ್ಲು
ರಂಗು ತುಂಬಿದ ಸಾಂಸ್ಕೃತಿಕ ಕಾರ್ಯಕ್ರಮ ಅಪರಾಹ್ನ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ನರಿಯಂದಡ ಗ್ರಾಮದ ಐತಿಹ್ಯಗಳು ಎಂಬ ವಿಷಯ ಕುರಿತು ಸಿ.ಎ. ಮೊಹಮ್ಮದ್ ನಿಝಾರ್ ಸಖಾಫಿ, ಮಡಿಕೇರಿ ತಾಲೂಕಿನಲ್ಲಿ ಕನ್ನಡ, ಕೊಡವ ಮತ್ತು ಅರೆ ಭಾಷೆ ಸಾಹಿತ್ಯದಲ್ಲಿ ಕೃಷಿ ಮಾಡಿದ ಸಾಹಿತಿಗಳ ಕುರಿತು ನಿವೃತ್ತ ಪ್ರಾಂಶುಪಾಲ ಕೆ.ಜೆ. ದಿವಾಕರ್, ಕೃಷಿ ಕ್ಷೇತ್ರದಲ್ಲಿ ರೈತಾಪಿ ಜನರಿಗಿರುವ ಸಮಸ್ಯೆಗಳು ಮತ್ತು ಪರಿಹಾರದ ಮಾರ್ಗೋಪಾಯಗಳು ಎಂಬ ವಿಷಯ ಕುರಿತು ಸುಳ್ಯದ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ತಳೂರು ಸ್ವರ್ಣ ಕಿಶೋರ್ ವಿಷಯ ಮಂಡನೆ ಮಾಡಿದರು.
ಕವಿಗೋಷ್ಠಿ ಯಲ್ಲಿ 15 ಕವಿಗಳು ಕವನ ವಾಚಿಸಿದರು.ಸಾಧಕರಿಗೆ ಸನ್ಮಾನ:ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಬಿಟ್ಟಿರ ಚೋಂದಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಚೇನಂಡ ಪಾರ್ವತಿ ತಿಮ್ಮಯ್ಯ, ಪೊಕ್ಕುಳಂಡ್ರ ಚಂದ್ರಾವತಿ ಸಿದ್ಧಾರ್ಥ, ಸಹಕಾರ ಕ್ಷೇತ್ರದಲ್ಲಿ ಪಾಂಡಂಡ ಕಿಟ್ಟು ಅಯ್ಯಣ್ಣ, ಸಮಾಜ ಸೇವೆಯಲ್ಲಿ ಎಚ್.ಎಲ್. ದಿವಾಕರ, ಜನಪದ ಕ್ಷೇತ್ರದಲ್ಲಿ ನಂಬಿಯಪಂಡ ಕರುಂಬಯ್ಯ, ಕೃಷಿ ಕ್ಷೇತ್ರದಲ್ಲಿ ದೇಯಿರ ಸುಭಾಷ್ ಭೀಮಯ್ಯ, ಸೇನೆಯಲ್ಲಿ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ರಕ್ಷಣಾ ಕ್ಷೇತ್ರದಲ್ಲಿ ಎಂ.ಕೆ. ಸಲಾಂ, ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತ ದುಗ್ಗಳ ಸದಾನಂದ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಎಚ್.ಎಸ್. ಉರಾಳ, ನಾಟಿ ವೈದ್ಯ ನಂದ ಕುಮಾರ್ ಪಡಿಞಾರಮಂಡ, ಜನಪದ ಪರಿಕರಗಳ ಪೋಷಣೆ ಕ್ಷೇತ್ರದಲ್ಲಿ ಪೊನ್ನಚ್ಚನ ಮಧುಸೂದನ್, ಹಾಕಿಪಟು ಪಾಂಡಂಡ ರಾಜೇಶ್ ಅಯ್ಯಪ್ಪ, ಕ್ರೀಡೆಯಲ್ಲಿ ಪಟ್ಟಚೆರವಂಡ ಗಗನ್ ವೇದಪ್ಪ ಅವರನ್ನು ಸನ್ಮಾನಿಸಲಾಯಿತು. ನಾಗೇಶ್ ಕಾಲೂರು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾಜಿ, ಅಧ್ಯಕ್ಷ ಅಂಬೆಕಲ್ ನವೀನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಸ್ವಾಗತಿ ಸಮಿತಿ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ನರಿಯಂದಡ ಪಿಡಿಒ ಆಶಾ ಕುಮಾರಿ, ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹಮದ್, ಪುದಿಯ ನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜು, ಬಿ.ಎಂ. ವಾಸು ರೈ, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಟಿ. ವಿಜೇತ್, ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ, ನಾಪೋಕ್ಲು ಹೋಬಳಿ ಕಸಾಪ ಅಧ್ಯಕ್ಷ ನೆರವಂಡ ಉಮೇಶ್, ಮೂರ್ನಾಡು ಹೋಬಳಿ ಕಸಾಪ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಉಪಸ್ಥಿತರಿದ್ದರು.
ಬಾಲೆಯಡ ದಿವ್ಯ ಮಂದಪ್ಪ. ತಳೂರು ಉಷಾ ಕಾಶಿ, ವಂದನ ನಿರೂಪಿಸಿದರು.