ಮಾಗಡಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕೊಲೆ

KannadaprabhaNewsNetwork |  
Published : Jul 10, 2025, 12:47 AM IST
ಪೋಟೊ: ಮೃತ ಬಾಲಕಿ ಅರುಣ | Kannada Prabha

ಸಾರಾಂಶ

ಮೂಲತಃ ಕೊಪ್ಪಳದ ಅರಳಾಪುರ ಗ್ರಾಮದವರಾಗಿದ್ದ ನಾಗರಾಜು ಕುಟುಂಬ ಕೂಲಿ ಹರಸಿ ಬಂದು ಒಂದೂವರೆ ವರ್ಷದಿಂದ ತಾವರೆಕೆರೆ ಮಾರಮ್ಮ ದೇವಾಲಯದ ಬಳಿ ನೆಲೆಸಿದ್ದರು.

ಮಾಗಡಿ: ತಾವರೆಕೆರೆ ಪಟ್ಟಣದ ಮಾರಮ್ಮ ದೇವಾಲಯದ ಬಳಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ತಾವರೆಕೆರೆ ಪಟ್ಟಣದ ಮಾರಮ್ಮ ದೇವಾಲಯದ ಬಳಿ ವಾಸವಿದ್ದ ನಾಗರಾಜು ಮತ್ತು ರೇಣುಕಮ್ಮ ದಂಪತಿಯ ನಾಲ್ಕು‌ಮಕ್ಕಳ ಪೈಕಿ ಮೂರನೇ ಮಗುವಾಗಿದ್ದ ಅರುಣ (14) ಅತ್ಯಚಾರಕ್ಕೊಳಗಾಗಿ ಕೊಲೆಯಾದ ಕಂದಮ್ಮ. ಇದು ಕೂಲಿ ಹರಸಿ ವಲಸೆ ಬಂದಿದ್ದ ಕುಟುಂಬ.

ಮೂಲತಃ ಕೊಪ್ಪಳದ ಅರಳಾಪುರ ಗ್ರಾಮದವರಾಗಿದ್ದ ನಾಗರಾಜು ಕುಟುಂಬ ಕೂಲಿ ಹರಸಿ ಬಂದು ಒಂದೂವರೆ ವರ್ಷದಿಂದ ತಾವರೆಕೆರೆ ಮಾರಮ್ಮ ದೇವಾಲಯದ ಬಳಿ ನೆಲೆಸಿದ್ದರು. ನಾಗರಾಜು ಮತ್ತು ರೇಣುಕಮ್ಮ ಇಬ್ಬರೂ ಕೂಲಿ ಕೆಲಸಕ್ಕೆ ಹೋಗಿದ್ದು ಹಿರಿಯ ಮಗ ಕೂಡಾ ಕೆಲಸಕ್ಕೆ ಹೋಗಿದ್ದರು. ಇನ್ನಿಬ್ಬರು ಗಂಡು ಮಕ್ಕಳು ಶಾಲೆಗೆ ತೆರಳಿದ್ದರು. ಇಂದು ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ, ಘಟನೆಯ ಸಂಬಂದ ತಾವರೆಕೆರೆ ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಹೆಚ್ಚಿನ ತಪಾಸಣೆಗಾಗಿ ರಾಜರಾಜೇಶ್ವರಿ ಅಸ್ಪತ್ರೆ ರವಾನಿಸಲಾಗಿದ್ದು ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ