ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್ ನಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯು ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ನವಸಮಾಜದ ನಿರ್ಮಾಣದಲ್ಲಿ ಯುವಜನಾಂಗದ ಪಾತ್ರ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯಶೀಲರಾಗಬೇಕು. ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿಯಿದ್ದರೂ ಸುಮ್ಮನೆ ಇರಬಾರದು. ಸಮಾಜದ ಬದಲಾವಣೆಗೆ ಪ್ರಯತ್ನಿಸಬೇಕು. ಮಹಿಳೆಯರು ಮತ್ತು ಮಕ್ಕಳ ನೋವುಗಳು ನಾಗರಿಕ ಸಮಾಜಕ್ಕೆ ಕಾಡಬೇಕು. ಮಾನವೀಯತೆ, ಅಂತಃಕರಣವು ಸಮಾಜದಲ್ಲಿ ನೆಲೆಗೊಳ್ಳಬೇಕು ಎಂದರು.ಶ್ರಮ, ನೋವು, ಕೊರತೆ ಏನು ಎಂಬುದು ಗೊತ್ತಿರಬೇಕು. ಕುಟುಂಬ, ಊರು, ಸಮುದಾಯ, ರಾಜ್ಯ, ರಾಷ್ಟ್ರೀಯ ಇತಿಹಾಸವೇನು, ಇಲ್ಲಿನ ಸಮಸ್ಯೆಗಳೇನು ಎಂಬ ಅರಿವಿನ ಜೊತೆಗೆ ಸಮಸ್ಯೆ ಪರಿಹರಿಸುವ ಪ್ರಯತ್ನನಮ್ಮದಾಗಬೇಕು. ಎಲ್ಲರಿಗೂ ಸ್ಪಂದಿಸುವ ಅವಕಾಶಗಳಿರುತ್ತವೆ ಎಂದು ಹೇಳಿದರು.