ಮಹಾವೀರ್ ಶಾಲೆಯ ಅವ್ಯವಸ್ಥೆ: ದಂಗಾದ ಡಿಡಿಪಿಐ

KannadaprabhaNewsNetwork |  
Published : Jun 01, 2024, 12:45 AM IST
೩೧ಕೆಜಿಎಫ್೩ತೊಗಡಿನ ಷೇಡ್‌ನ್ನು ವೀಕ್ಷಣೆ ಮಾಡುತ್ತಿರುವ ಡಿಡಿಪಿಐ ಕೃಷ್ಣಮೂರ್ತಿ. | Kannada Prabha

ಸಾರಾಂಶ

ಶ್ರೀ ಮಹಾವೀರ್ ಜೈನ್ ಶಾಲೆಯ ಮಕ್ಕಳ ಸಂಖ್ಯೆ, ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿಗಳು, ಶೌಚಾಲಯಗಳು, ಗ್ರಂಥಾಲಯ, ಶಿಕ್ಷಕರ ಅರ್ಹತೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಬಿಇಒಗೆ ಡಿಡಿಪಿಐ ಸೂಚನೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಶಾಲೆಯಲ್ಲಿ ಮಕ್ಕಳ ಸುರಕ್ಷಗೆ ಆದ್ಯತೆ ಇಲ್ಲ, ಶಾಲೆಯಲ್ಲಿ ಪುಸ್ತಕ ಸಮವಸ್ತ್ರ ದುಪಟ್ಟು ಬೆಲೆಗೆ ಮಾರಾಟ, ಆಗ್ನಿ ಅವಘಡದ ಮುನ್ನಚ್ಚರಿಕೆ ಕ್ರಮವಿಲ್ಲ, ಕಟ್ಟಡಕ್ಕೆ ಲೋಕೊಪಯೋಗಿ ಇಲಾಖೆಯಿಂದ ಸುರಕ್ಷತೆ ಪರವಾನಿಗೆ ಪತ್ರವಿಲ್ಲ, ಮಕ್ಕಳಿಗೆ ಕುಡಿವ ನೀರಿನ ಸೌಲಭ್ಯವಿಲ್ಲ, ಕಲ್ಯಾಣ ಮಂಟಪದಲ್ಲಿ ಮಕ್ಕಳಿಗೆ ಪಾಠ, ತಗಡಿನ ಷೇಡ್‌ನಲ್ಲಿ ಮಕ್ಕಳಿಗೆ ಪಾಠ, ಮಕ್ಕಳು ಆಟವಾಡಲು ಆಟದ ಮೈದಾನವಿಲ್ಲ, ೨೫೦೦ ಮಕ್ಕಳಿಗೆ ಕೇವಲ ೧೫ ಶೌಚಾಲಯ....

ಶ್ರೀ ಮಹಾವೀರ್ ಜೈನ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಡಿಡಿಪಿಐ ಕೃಷ್ಟಮೂರ್ತಿ ಈ ಅವ್ಯವಸ್ಥೆಯನ್ನು ಕಂಡು ದಂಗಾದರು. ಶ್ರೀ ಮಹವೀರ್ ಜೈನ್ ಶಾಲೆಯ ಅವಾಂತರಗಳು ಕುರಿತು ಪೋಷಕರು ನೀಡಿದ ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರ ಡಿಡಿಪಿಐ ಮತ್ತು ಬಿಇಒ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿತು.

ದಾಖಲೆ ಸಲ್ಲಿಸಲು 2 ದಿನ ಗಡುವು

ಎರಡು ದಿನಗಳ ಒಳಗೆ ಶಾಲೆಗೆ ಸಂಬಂದಪಟ್ಟ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಶಾಲೆಯ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಿದರು. ಇಲ್ಲದೆ ಹೋದರೆ ನಿಮ್ಮ ಶಾಲೆಯ ಮಾನ್ಯತೆಯನ್ನು ರದ್ದುಪಡಿಸುವುದಾಗಿ ಡಿಡಿಪಿಐ ಕೃಷ್ಣಮೂರ್ತಿಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.

ಮಕ್ಕಳ ಅನುಪಾತಕ್ಕೆ ತಕ್ಕಂತೆ ನುರಿತ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು, ಲೋಕಪಯೋಗಿ ಇಲಾಖೆಯಿಂದ ಕಟ್ಟಡದ ಸುರಕ್ಷತೆಯ ಬಗ್ಗೆ ಪ್ರಮಾಣ ಪತ್ರ, ಅಗ್ನಿಶಾಮಕ ದಳದವರಿಂದ ಸುರಕ್ಷತೆಯ ಪತ್ರ, ಮಕ್ಕಳ ಆಟವಾಡುವ ಮೈದಾನದ ಚಿತ್ರ, ಸೇರಿದಂತೆ ಎರಡು ದಿನಗಳಲ್ಲಿ ಅಗತ್ಯವಿರುವ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಒದಗಿಸಬೇಕೆಂದು ತಿಳಿಸಿದರು.

ಮಾಹಿತಿ ಕೋರಿದ ಡಿಡಿಪಿಐ ಶ್ರೀ ಮಹಾವೀರ್ ಜೈನ್ ಶಾಲೆಯ ಮಕ್ಕಳ ಸಂಖ್ಯೆ, ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿಗಳು, ಶೌಚಾಲಯಗಳು, ಗ್ರಂಥಾಲಯ, ಶಿಕ್ಷಕರ ಅರ್ಹತೆ ಕುರಿತು ಸಂಪೂರ್ಣ ಮಾತಿಯನ್ನು ಸಂಜೆಯೊಳಗೆ ನೀಡುವಂತೆ ಬಿಇಒ ಮುನಿವೆಂಕಟರಾಮಚಾರಿ ಅವರಿಗೆ ಡಿಡಿಪಿಐ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ