ಕನ್ನಡಪ್ರಭ ವಾರ್ತೆ ಗೋಕರ್ಣ
ಸೋಮವಾರ ಇಲ್ಲಿಗೆ ಭೇಟಿ ನೀಡಿ ಮಹಾಬಲೇಶ್ವರ ಮಂದಿರದ ತೀರ್ಥ ಸೋಮಸೂತ್ರದ ಮೂಲಕ ಸಂಗಮ ಸೇರುವ ಸ್ಥಳ ಹಾಗೂ ರಸ್ತೆಗೆ ಚರಂಡಿ ನೀರು ತುಂಬುವ ಮತ್ತಿತರ ಕಡೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಕಳೆದ ಎರಡು ದಿನಗಳ ಹಿಂದೆ ಸಂಗಮ ನಾಲಾದ ನೀರು ಸಮುದ್ರ ಸೇರದ ಪರಿಣಾಮ ಮಹಾಬಲೇಶ್ವರ ದೇವಾಲಯದ ಸೋಮಸೂತ್ರದ ನೀರು ಮುಂದೆ ಹೋಗದೆ ನಿಂತ ಪರಿಣಾಮ ಗರ್ಭಗುಡಿಯಲ್ಲಿ ನೀರು ತುಂಬಿ ದೇವರ ದರ್ಶನ ಹಾಗೂ ಮಧ್ಯಾಹ್ನ ಮಹಾಪೂಜೆಗೆ ತೊಡಕಾಗಿತ್ತು. ಈ ಬಗ್ಗೆ ಪತ್ರಿಕೆ ಸವಿವರ ಪತ್ರಿಕೆ ವರದಿ ಪ್ರಕಟಿಸಿತ್ತು. ಇದರ ಪರಿಣಾಮ ಖುದ್ದು ಜಿಪಂ ಸಿಇಓ ತಮ್ಮ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದರು.ಮಂದಿರದ ಸೋಮಸೂತ್ರ ನಾಲಾ ಸಂಗಮ ಸೇರುವಲ್ಲಿ ಹೂಳು ತುಂಬಿರುವುದು ಹಾಗೂ ಸಂಗಮ ನಾಲಾದದ ಈ ಭಾಗದಲ್ಲಿ ಎತ್ತರವಾಗಿರುವುದರಿಂದ ಸೋಮಸೂತ್ರ ನೀರು ಮುಂದೆ ಹೋಗದಿರುವುದರ ಕುರಿತು ಮಾಹಿತಿ ಪಡೆದರು. ಅಲ್ಲದೇ ದೇವಾಲಯದ ಗರ್ಭಗುಡಿಗೆ ಹೊರಗಿನ ಹೊಲಸು ನೀರು ಬರದಂತೆ ದೇವಾಲಯದವರು ಗೇಟ್ ಅಳವಡಿಸಿದ್ದು, ಇದರಿಂದ ನೀರು ತುಂಬಿದಾಗ ಹೊರಗಿನ ನೀರು ಹೊರಗೆ ಹಾಗೂ ದೇವಾಲಯದ ಆವಾರದ ನೀರು ಒಳಗೆ ನಿಲ್ಲುತ್ತದೆ, ಕೊಳಚೆ ನೀರು ಸೇರುವುದಿಲ್ಲ ಎಂಬುದನ್ನ ವಿವರಿಸಲಾಯಿತು.
ಈ ವೇಳೆ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯಾದ ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ಸದಸ್ಯರಾದ ಮಹೇಶ ಹಿರೇಗಂಗೆ, ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ, ಜಿಪಂ ವಿವಿಧ ವಿಭಾಗದ ಹಿರಿಯ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ.ಎ. ಪಟಗಾರ, ಕಾರ್ಯದರ್ಶಿ ಮಂಜುನಾಥ, ಪಿ.ಐ. ಶ್ರೀಧರ ಎಸ್.ಆರ್., ಪಂಚಾಯತ ಸಿಬ್ಬಂದಿ, ಮಂದಿರದ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.ಉಳಿದೆಡೆ ಭೇಟಿ:
ಸ್ವಚ್ಛತಾ ಸಿಬ್ಬಂದಿ ಮೂಲಕ ಚರಂಡಿ ಬಿಡಿಸಿಕೊಡಲಾಯಿತು. ಅಂಗಡಿಯವರು ಚರಂಡಿ ಮುಚ್ಚಿರುವುದನ್ನ ತೆರವುಗೊಳಿಸಲು ಸೂಚಿಸಿ, ದೇವಾಲಯದಿಂದ ಸಂಗಮ ನಾಲಾದವರೆಗೆ ಚರಂಡಿ ಬಿಡಿಸಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದರು.
ಕಸ ಎಸೆಯುವವರ ಬಗ್ಗೆ ನಿಗಾ ಇಡಲು ಕ್ಯಾಮರಾ ಅಳವಡಿಸಬೇಕು. ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ತಿಳಿಸಿ ಮೊದಲ ಹಂತದಲ್ಲಿ ಪೊಲೀಸ್ ಇಲಾಖೆ ನೆರವಿನೊಂದಿಗೆ ಕಾರ್ಯಕೈಗೊಳ್ಳಿ ಎಂದರು.