ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ವಿದ್ಯಾರ್ಥಿಗಳು ಮತ್ತು ರೋಗಿಗಳಿಂದ ಮಾನಸಿಕ ಆರೋಗ್ಯದ ಬಗ್ಗೆ ಅವರ ಚಿಂತನೆಗಳ ಅಭಿವ್ಯಕ್ತಿ ಎಂಬ ಕಾರ್ಯಕ್ರಮ ಉದ್ಘಾಟಿಸಿದ ಸುಯೋಗ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರು ಮತ್ತು ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಸೃಷ್ಟಿಯಲ್ಲಿ ಮನುಷ್ಯನ ಮನಸ್ಸು ಮತ್ತು ಮೆದುಳು ಅತ್ಯಂತ ಅದ್ಭುತವಾದ ಸೃಷ್ಟಿಗಳೆಂದು ವರ್ಣಿಸಿ ಅದರಲ್ಲೂ ಮನುಷ್ಯನ ಮನಸ್ಸಿಗೆ ಇಡೀ ಸೃಷ್ಟಿಯನ್ನೇ ಆಳುವ ಅಥವಾ ವಿನಾಶ ಮಾಡುವ ಸಾಮರ್ಥ್ಯ ಇರುವುದರಿಂದ ಅದನ್ನು ಸರಿದಾರಿಯಲ್ಲಿ ತರಬೇತುಗೊಳಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಮನಸ್ಸು ಪ್ರಜ್ಞೆ ಮತ್ತು ಆಲೋಚನೆಗಳಿಂದ ವ್ಯಕ್ತವಾಗುವುದರಿಂದ ಅದರಲ್ಲಿ ಉಗಮಿಸುವ ವಿಭಿನ್ನ ಬಗೆಯ ಆಲೋಚನೆಗಳಿಂದ ಅದು ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವಗಳನ್ನು ತಂದುಕೊಳ್ಳುವುದರಿಂದ ಮನಸ್ಸನ್ನು ಸಕಾರಾತ್ಮಕಭಾವಗಳುಂಟಾಗುವ ದಿಕ್ಕಿನಲ್ಲಿ ಬಾಲ್ಯದಲ್ಲಿಯೇ ತರಬೇತಿಗೊಳಿಸಬೇಕು ಎಂದರು.ಇದರಲ್ಲಿ ಪೋಷಕರು ಮತ್ತು ಪರಿಸರದ ಪಾತ್ರ ಅತ್ಯವಶ್ಯಕ ಎಂದು ತಿಳಿಸಿ ಆಧುನಿಕ ಮಾನವನ ಮನಸ್ಸು ವೈಜ್ಞಾನಿಕವಾಗಿ ಬೆಳೆಯುತ್ತಿದ್ದರೂ ಆಧ್ಯಾತ್ಮಿಕ ಚಿಂತನೆಗಳಿಲ್ಲದೇ ಅಶಾಂತಿಯಿಂದ ನರಳುತ್ತಿದೆ. ಆಧ್ಯಾತ್ಮಿಕ ಜೀವನಶೈಲಿಯಿಂದ ಮಾತ್ರ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದ್ದು, ಯೋಗ ಇದಕ್ಕೆ ಪೂರಕವಾಗಿದ್ದು, ವಿಜ್ಞಾನದಿಂದ ಇದು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸುಯೋಗ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಸೀಮಾ ಯೋಗಣ್ಣ, ಸುಯೋಗ್ ಅಲೈಡ್ ಪ್ರಾಂಶುಪಾಲೆ ಡಾ. ಸಂಗೀತಾ, ಸುಯೋಗ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಾಗಮಣಿ, ಮಾನಸಿಕ ಆರೋಗ್ಯ ತಜ್ಞೆ ಹಾಗೂ ಉಪನ್ಯಾಸಕಿ ಸಂಗೀತಾ ಇದ್ದರು.