ಕನ್ನಡಪ್ರಭ ವಾರ್ತೆ ನಾಪೋಕ್ಲು
ಚೇರಂಬಾಣೆ ಗೌಡ ಸಮಾಜದಲ್ಲಿ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ಆಯೋಜಿಸಿದ ಮಕರ ಸಂಕ್ರಾಂತಿ ಹಬ್ಬದ ಆಚರಣೆ ಹಾಗೂ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ 2026ನೇ ವರ್ಷದ ಮಾಸಿಕ ಸಭೆಯಲ್ಲಿ ಭಾಗವಹಿಸಿ ಸಂಕ್ರಮಣದ ಆಚರಣೆ ಮತ್ತು ಪದ್ಧತಿ ಬಗ್ಗೆ ಮಾತನಾಡಿದರು.
ರೈತರಿಗೆ ಇದು ಸುಗ್ಗಿ ಹಬ್ಬ. ದವಸ ಧಾನ್ಯಗಳು ಮನೆ ತುಂಬಿ ಸಂಭ್ರಮಿಸುವಕಾಲ. ಆದ್ದರಿಂದ ಮಾನವರಿಗೂ, ಪ್ರಾಣಿಗಳಿಗೂ ಯಥೇಚ್ಛವಾಗಿ ದಾನ ನೀಡುತ್ತಾ ವರ್ಷವಿಡೀ
ಕೆಲವೆಡೆ ಪೊಂಗಲ್ ಎಂದು ಆಚರಿಸಿದರೆ ಇನ್ನು ಕೆಲವೆಡೆ ಗಾಳಿಪಟ ಹಬ್ಬ
ಸುಗ್ಗಿ ಹಬ್ಬ. ಸಮೃದ್ಧಿಯ ಸಂಕೇತದ ಹಬ್ಬ ಎಂದು ಅವರು ಹೇಳಿದರು.
ಸೂರ್ಯನನ್ನು ಪೂಜಿಸುವ ಹಬ್ಬ. ಸೂರ್ಯ ತನ್ನ ಪಥವನ್ನು ಉತ್ತರಾಯಣಕ್ಕೆ ಬದಲಿಸುವ
ಎಣ್ಣೆಯ ಅಂಶ ಕಡಿಮೆಯಾಗಿ ಚರ್ಮ ಬಿಗಿ ಯಾಗಿರುತ್ತದೆ. ಈ ಸಂದರ್ಭದಲ್ಲಿ ನಾವು
ಇದಲ್ಲದೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ
ಅರ್ಪಿಸಲಾಗುವುದು ಎಂದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ಅಧ್ಯಕ್ಷತೆ ವಹಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿ, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಕರ ಸಂಕ್ರಾಂತಿ ಹಬ್ಬವನ್ನು ಸಾಂಕೇತಿಕವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಾನಪದ ಕೃಷಿ ಪರಿಕರಗಳು, ದವಸ ಧಾನ್ಯ, ಕಬ್ಬು ಸೇರಿಸಿ ಹಾಲು ಉಕ್ಕಿಸುವ ಶುಭ ಸಂಕೇತವನ್ನು ಸೂಚಿಸುವ ಸಂಭ್ರಮದ ಹಬ್ಬದಂದು ದೀಪ ಬೆಳಗಿ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸಿಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಒಕ್ಕೂಟದ ಸದಸ್ಯರು ಸಂಕ್ರಾಂತಿಯ ಸಂಭ್ರಮವನ್ನು ಸವಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರಾದ ತಳೂರು ಮಮತಾ ಹಿತೇಶ್ಮತ್ತು ಗುಡ್ಡೆಮನೆ ಲೀನಾ ಮಹೇಶ್ ಅವರು ಮಹಿಳಾ ಹಗ್ಗ ಜಗ್ಗಾಟದ ತಂಡಕ್ಕೆ
ಸಮವಸ್ತ್ರವನ್ನು ಉಡುಗೊರೆಯಾಗಿ, ಉಪಾಧ್ಯಕ್ಷರಾದಹೊಸೊಕ್ಲು ಲತಾ ಮೊಣ್ಣಪ್ಪ ಸಮವಸ್ತ್ರವನ್ನು
ಹಗ್ಗ ಜಗ್ಗಾಟ ತಂಡದ ನಾಯಕಿ ಸಿರಕಜೆ ಹಿತಾ ತೀರ್ಥ ಕುಮಾರ್ಅ ವರಿಗೆ ಹಸ್ತಾಂತರಿಸಿದರು. ಉಪಾಧ್ಯಕ್ಷರಾದ ಕೂರನ ಸುಶೀಲ ಅಪ್ಪಾಜಿ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಬೈಮನ ಜ್ಯೋತಿ ತಿಮ್ಮಯ್ಯ, ನಿವೃತ್ತ ಶಿಕ್ಷಕಿ ಪಾಣತಲೆ ತಾರಾಮಣಿ ಸೇರಿದಂತೆ ಮುಖ್ಯ ಪಟ್ಟವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರು ಸಂಕ್ರಾಂತಿ ಕುರಿತ ಸುಗ್ಗಿ ಹಾಡುಗಳನ್ನು ಹಾಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು .