ಒಳ್ಳೆಯ ನಾಗರೀಕರನ್ನಾಗಿ ರೂಪಿಸಿ

KannadaprabhaNewsNetwork |  
Published : Jun 04, 2024, 12:31 AM IST
ರಾಯಬಾಗ ತಾಲೂಕಿನ ಭಿರಡಿ ಗ್ರಾಮದಲ್ಲಿ ಭದ್ರಯ್ಯಸ್ವಾಮಿ ಪ್ರೌಢಶಾಲೆ ಉದ್ಘಾಟನೆ ಹಾಗೂ ಪೀಠೋಪಕರಣ ಮತ್ತು ಕ್ರೀಡಾಸಾಮಗ್ರಿಗಳ ಹಸ್ತಾಂತರ ಸಮಾರಂಭಕ್ಕೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು.  | Kannada Prabha

ಸಾರಾಂಶ

ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಕೊಟ್ಟು ಒಳ್ಳೆ ಬೋಧನೆ ಮಾಡಿ ಅವರನ್ನು ಒಳ್ಳೆಯ ನಾಗರೀಕರನ್ನಾಗಿ ರೂಪಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಬಾಗ

ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಕೊಟ್ಟು ಒಳ್ಳೆ ಬೋಧನೆ ಮಾಡಿ ಅವರನ್ನು ಒಳ್ಳೆಯ ನಾಗರೀಕರನ್ನಾಗಿ ರೂಪಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಭಿರಡಿಗ್ರಾಮದ ಮಹಾದೇವ ಶಿಕ್ಷಣ ಸಂಸ್ಥೆಯ ಭದ್ರಯ್ಯಸ್ವಾಮಿ ಪ್ರೌಢಶಾಲೆ ಉದ್ಘಾಟನೆ ಹಾಗೂ ಪೀಠೋಪಕರಣ ಮತ್ತು ಕ್ರೀಡಾಸಾಮಗ್ರಿಗಳ ಹಸ್ತಾಂತರ ಸಮಾರಂಭಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಶ್ರಮಿಸಬೇಕು. ಶಾಲೆಗೆ ದೊರಕುವಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.ಹಂಚಿನಾಳದ ಮಹೇಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ದೇಶಕಟ್ಟುವ ವ್ಯಕ್ತಿಗಳು ರೂಪುಗೊಳ್ಳುವುದು ಶಾಲೆಗಳಲ್ಲಿ. ಅಂತಹ ಶಾಲೆಗಳು ಮಕ್ಕಳಿಗೆ ಮುಕ್ತವಾಗಿ ಸಂತೋಷದಿಂದ ಕಲಿಯುವಂತಹ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.ಸಂಸ್ಥೆ ಅಧ್ಯಕ್ಷ ಶಿವಪ್ಪ ಕುಮಟೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವ ಬೊರಗಾಂವೆ, ಗಣೇಶ ಹೆಗಡೆ, ಶ್ರೀಧರ ಕುಡಚೆ, ಎ.ಬಿ.ನಿಡೋಣಿ, ಸಚಿನ ಪಾಟೀಲ, ಮಂಜು ಕಳಸನ್ನವರ, ಅಣ್ಣಾಸಾಹೇಬ ನಿಶಾನದಾರ, ಮುರಗೇಶ ನಿಶಾನದಾರ, ನಿಂಗಣ್ಣಕೇದಾರಿ, ಶಂಕರ ನಿಡೋಣಿ, ಪಿರಪ್ಪಕುಡಚೆ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ