8 ಮಂದಿ ಸಾಧಕರಿಗೆ ಮಲಬಾರ್ ವಿಶ್ವ ಪುರಸ್ಕಾರ ಪ್ರಕಟ

KannadaprabhaNewsNetwork |  
Published : Jun 21, 2026, 02:45 AM IST
ಬಾಲಕೃಷ್ಣ ಪೂಜಾರಿ | Kannada Prabha

ಸಾರಾಂಶ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ -ಡೈಮಂಡ್ಸ್ ನೀಡುವ ಮಲಬಾರ್ ವಿಶ್ವ ಪುರಸ್ಕಾರ-2026ಕ್ಕೆ ‘ಕನ್ನಡಪ್ರಭ’ದ ಕಾರ್ಕ‍ಳ ತಾಲೂಕು ವರದಿಗಾರ ರಾಮ್ ಅಜೆಕಾರ್ ಮತ್ತು ‘ಸುವರ್ಣ ನ್ಯೂಸ್’ನ ಉಡುಪಿ ಜಿಲ್ಲಾ ವರದಿಗಾರ ಶಶಿಧರ್ ಮಾಸ್ತಿಬೈಲು ಸೇರಿದಂತೆ ಒಟ್ಟು 8 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ -ಡೈಮಂಡ್ಸ್ ನೀಡುವ ಮಲಬಾರ್ ವಿಶ್ವ ಪುರಸ್ಕಾರ-2026ಕ್ಕೆ ‘ಕನ್ನಡಪ್ರಭ’ದ ಕಾರ್ಕ‍ಳ ತಾಲೂಕು ವರದಿಗಾರ ರಾಮ್ ಅಜೆಕಾರ್ ಮತ್ತು ‘ಸುವರ್ಣ ನ್ಯೂಸ್’ನ ಉಡುಪಿ ಜಿಲ್ಲಾ ವರದಿಗಾರ ಶಶಿಧರ್ ಮಾಸ್ತಿಬೈಲು ಸೇರಿದಂತೆ ಒಟ್ಟು 8 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ ತಾಲೂಕು ಕಸಾಪ ಸಹಯೋಗದಲ್ಲಿ ಜು.1ರಂದು ವಿಶ್ವ ವೈದ್ಯರ, ಲೆಕ್ಕ ಪರಿಶೋಧಕರ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಈ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುವುದು.

ಪ್ರಶಸ್ತಿ ಪುರಸ್ಕೃತರು: ‘ಮಲಬಾರ್ ವಿಶ್ವ ವೈದ್ಯ ಪುರಸ್ಕಾರ’ : ಡಾ. ಎ. ರಾಮಚಂದ್ರ ಬಾಯಾರಿ, ಡಾ. ಕೆ. ಸತೀಶ್ ಕಾಮತ್, ಡಾ. ಇಂದಿರಾ ಶಾನಭಾಗ್. ‘ಮಲಬಾರ್ ವಿಶ್ವ ಲೆಕ್ಕಪರಿಶೋಧಕ ಪುರಸ್ಕಾರ’: ಸಿಎ ದೇವ್ ಆನಂದ್, ಸಿಎ ಗಣೇಶ್ ಎರ್ಮಾಳ್. ‘ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರ’: ಶಶಿಧರ್ ಮಾಸ್ತಿಬೈಲು, ಬಾಲಕೃಷ್ಣ ಪೂಜಾರಿ, ರಾಮ್ ಅಜೆಕಾರ್ ಅವರಿಗೆ ನೀಡಿ ಗೌರವಿಸಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿಗೆ ಪಿಎಂವಿಬಿಆರ್‌ವೈನಲ್ಲಿ 3.66 ಕೋಟಿ ರು.: ಕೋಟ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಪ್ರಥಮ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ಯಶಸ್ವಿ