)
- ಮದ್ದೂರು ನಾಕಾಬಂಧಿ ಬಳಿ ಘಟನೆ
---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಚೆಕ್ಪೋಸ್ಟ್ ಬಳಿ ಅಕ್ರಮವಾಗಿ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಗ್ರೀನ್ ಟ್ಯಾಕ್ಸ್ ಟಿಕೆಟ್ ಕಲೆಕ್ಟರ್ ಮೇಲೆ ಹಲ್ಲೆ ನಡೆಸಿ, ಹಣ ಕಿತ್ತುಕೊಂಡು ಹೋದ ಚನ್ನಮಲ್ಲೀಪುರ ಗ್ರಾಮದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಏ.6ರ ರಾತ್ರಿ ಶಿವಕುಮಾರ್ ಮತ್ತು ಗಸ್ತು ವನಪಾಲಕ ಸಿದ್ದೇಶ್. ಡಿ. ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದೇವರಾಜ್ ಚೆಕ್ ಪೋಸ್ಟ್ ಮೂಲಕ ಹಾದು ಹೋಗುತ್ತಿದ್ದ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದರು.
ಬಳಿಕ ಸರ್ಕಾರಿ ಕೆಲಸ ಮಾಡಲು ಅಡ್ಡಿಪಡಿಸಿ, ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಅವಾಷ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನನ್ನ ಬಳಿಯಿದ್ದ ಹಣದ ಬ್ಯಾಗ್ ಕದಿಯಲು ಯತ್ನಿಸಿದ್ದಾನೆ. ಆಗ ನಾನು ಹಣದ ಬ್ಯಾಗ್ ಬಿಗಿಯಾಗಿ ಹಿಡಿದುಕೊಂಡೆನು. ಆದರೂ ನನಗೆ ಜೀವ ಬೆದರಿಕೆ ಹಾಕಿ, 200 ರು. ಕಿತ್ತುಕೊಂಡು ಹೋದ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಅಲ್ಲಿಯೇ ಕರ್ತವ್ಯದಲ್ಲಿದ್ದ ಡಿಆರ್ಎಫ್ಒ ರವಿ ಕುಮಾರ್ ಸಂಗೂರ್ ಹಾಗೂ ಹೋಂ ಗಾರ್ಡ್ ಕೃಷ್ಣಮೂರ್ತಿ, ಬೀಟ್ ಫಾರೆಸ್ಟರ್ ಮಹಮದ್ ನಸಾಪ್ ಬಂದು ದೇವರಾಜುವನ್ನು ಸಮಾಧಾನಪಡಿಸಿ ಕಳುಹಿಸಿದರು ಎಂದು ದೂರಿನಲ್ಲಿ ಹೇಳಿದ್ದಾರೆ.
ದೇವರಾಜು ಮೇಲೆ ಪ್ರಕರಣ ದಾಖಲಿಸಿಕೊಂಡು ಗುಂಡ್ಲುಪೇಟೆ ಪೊಲೀಸರು, ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ.