ನಾಡಬಂದೂಕು ಸಮೇತ ವ್ಯಕ್ತಿ ಬಂಧನ

KannadaprabhaNewsNetwork |  
Published : Apr 07, 2025, 12:32 AM IST
6ಸಿಎಚ್‌ಎನ್‌58ಬಂಧಿತ ಅರೋಪಿ ಕೆಂಪಶೆಟ್ಟಿ | Kannada Prabha

ಸಾರಾಂಶ

ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಅಕ್ರಮ ನಾಡಬಂದೂಕು ಸಮೇತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಅಕ್ರಮ ನಾಡಬಂದೂಕು ಸಮೇತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕುಣಗಳ್ಳಿ ಗ್ರಾಮದ ಲೇಟ್ ಸಿದ್ದಯ್ಯನ ಮಗನಾದ ಕೆಂಪಶೆಟ್ಟಿ(50) ಬಂಧಿತ ಆರೋಪಿ. ಈತನಿಂದ ಒಂದು ಬಂದೂಕನ್ನು ಜಪ್ತಿ ಮಾಡಲಾಗಿದೆ.

ಆರೋಪಿಯು ಕುಣಗಳ್ಳಿ ಗ್ರಾಮದ ಲಕ್ಕಯ್ಯನ ಕೆರೆಯ ಏರಿಯ ಮೇಲೆ ಕಾಡು ಪ್ರಾಣಿಗಳನ್ನು ಭೇಟೆಯಾಡುವ ಸಲುವಾಗಿ ಅಕ್ರಮವಾಗಿ ಬಂದೂಕನ್ನು ಸಾಗಾಣಿಕೆ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡ ಅಗರ ಮಾಂಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯಲ್ಲಿ ಯಳಂದೂರು ಸಿಪಿಐ ಶ್ರೀಕಾಂತ್, ಪ್ರಭಾರ ಕ್ರೈಂ ಪಿಎಸ್ಐ ಉಮಾವತಿ, ಸಿಬ್ಬಂದಿ ಶಿವಕುಮಾರ್, ಸಕ್ರುನಾಯ್ಕ್, ಉಸ್ಮಾನ್, ಬಸವರಾಜು, ಶಿವಕುಮಾರ್, ಚಾಲಕ ಮಲ್ಲೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!