ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೇವರಗುಡ್ಡ (ರೇವಣ್ಣ )(55) ಮೃತ ದುರ್ದೈವಿ. ಬುಧವಾರ ಸಂಜೆ ಹೊತ್ತು ಜಮೀನಿಗೆ ಕೆಲಸ ಮಾಡಲು ತೆರಳಿದ್ದಾರೆ. ಕೆಲಸ ಮುಗಿಸಿ ಮರಳುವಾಗ ಜೋರು ಬಿರುಗಾಳಿ ಸಹಿತ ಮಳೆ ಆವರಿಸಿದೆ. ಮಳೆ ಬಂದ ಕಾರಣ ರೇವಣ್ಣ ಅವರು ಮನೆಗೆ ಹಿಂದಿರುಗುವ ವೇಳೆ ತೆಂಗಿನ ಮರ ಬುಡಮೇಲಾಗಿದೆ. ರೇವಣ್ಣ ಅವರ ಮೇಲೆ ಬಿದ್ದಿದೆ. ಜಮೀನಿಗೆ ಹೋಗಿ ಎಷ್ಟು ಹೊತ್ತು ಕಳೆದರೂ ಹಿಂದಿರುಗದ ಕಾರಣ ಆತಂಕಕ್ಕೀಡಾದ ಮನೆಯವರು ರೇವಣ್ಣ ಅವರನ್ನು ಅರಸುತ್ತ ಜಮೀನಿನ ಬಳಿ ಬಂದಿದ್ದಾರೆ. ಈ ವೇಳೆ ತೆಂಗಿನ ಮರ ಬಿದ್ದು, ತೀವ್ರ ರಕ್ತಸ್ರಾವವಾಗಿ ರೇವಣ್ಣ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ಸ್ವಗ್ರಾಮದಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.