ನಗರ ಪೊಲೀಸ್ ಠಾಣೆ ಕಟ್ಟಡ ಮೇಲಿಂದ ಜಿಗಿದು ವ್ಯಕ್ತಿ ಸಾವು

KannadaprabhaNewsNetwork |  
Published : Sep 29, 2024, 01:31 AM IST
ಸುನೀಲ್ 30 ವರ್ಷ | Kannada Prabha

ಸಾರಾಂಶ

ನಗರ ಪೊಲೀಸ್ ಸಂಕೀರ್ಣದ ಕಟ್ಟಡದ ಮೇಲಿಂದ ನೆಗೆದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.ಹೊಳೆನರಸೀಪುರ ತಾಲೂಕಿನ ಡೊಡ್ಡಕಾಡನೂರು ಮಲ್ಲೆನಹಳ್ಳಿ ನಿವಾಸಿ ಸುನೀಲ್ (30 ವರ್ಷ) ಎಂಬುವನೇ ಮೇಲಿಂದ ಕೆಳಗೆ ಬಿದ್ದು ಸಾವನಪ್ಪಿದ ದುರ್ದೈವಿ. ಪೊಲೀಸ್ ಠಾಣೆ ಮೇಲಿಂದ ಏತಕ್ಕಾಗಿ ಬಿದ್ದು ಪ್ರಾಣ ಬಿಟ್ಟಿದ್ದಾನೆ ಎಂಬುದರ ಬಗ್ಗೆ ಸತ್ಯಾಂಶ ತಿಳಿದು ಬಂದಿಲ್ಲ.

ಕನ್ನಡಪ್ರಭ ವಾರ್ತೆ ಹಾಸನ

ನಗರ ಪೊಲೀಸ್ ಸಂಕೀರ್ಣದ ಕಟ್ಟಡದ ಮೇಲಿಂದ ನೆಗೆದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಪೊಲೀಸ್ ಠಾಣೆ ಮೇಲಿಂದ ಏತಕ್ಕಾಗಿ ಬಿದ್ದು ಪ್ರಾಣ ಬಿಟ್ಟಿದ್ದಾನೆ ಎಂಬುದರ ಬಗ್ಗೆ ಸತ್ಯಾಂಶ ತಿಳಿದು ಬಂದಿಲ್ಲ. ಹೊಳೆನರಸೀಪುರ ತಾಲೂಕಿನ ಡೊಡ್ಡಕಾಡನೂರು ಮಲ್ಲೆನಹಳ್ಳಿ ನಿವಾಸಿ ಸುನೀಲ್ (30 ವರ್ಷ) ಎಂಬುವನೇ ಮೇಲಿಂದ ಕೆಳಗೆ ಬಿದ್ದು ಸಾವನಪ್ಪಿದ ದುರ್ದೈವಿ. ಶನಿವಾರ ಈತ ಹಾಸನ ನಗರ ಪೊಲೀಸ್ ಉಪಾಧೀಕ್ಷಕರ ಕಛೇರಿ ಸಂಕೀರ್ಣದಲ್ಲಿ ಇರುವ ಹಾಸನ ನಗರ ಠಾಣೆ, ಗ್ರಾಮಂತರ ಪೊಲೀಸ್ ಠಾಣೆ, ಸಿಇಎನ್ ಪೊಲೀಸ್ ಠಾಣೆ, ಪೊಲೀಸ್ ಉಪಾಧೀಕ್ಷಕರ ಕಚೇರಿ ಈ ಎಲ್ಲಾ ಪೊಲೀಸ್ ಠಾಣೆಗೆ ಸುಮ್ಮನೆ ಹೋಗಿ ಸುತ್ತಾಡಿಕೊಂಡು ನಂತರ ಪೊಲೀಸ್ ಠಾಣೆಯ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಮಹಡಿಯಿಂದ ಕೆಳಕ್ಕೆ ಜಿಗಿದು ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತನ ತಲೆ, ಮುಖಕ್ಕೆ ಗಂಭೀರ ಗಾಯವಾಗಿದ್ದು, ನಂತರ ಸ್ಥಳದಲ್ಲಿ ಇದ್ದ ಪೊಲೀಸರು ಗಾಯಾಳು ಸುನೀಲ್ ಆತನನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಈ ವ್ಯಕ್ತಿ ಮೃತಪಟ್ಟಿದ್ದಾನೆ.

ಈ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ