ಇ-ಸ್ವತ್ತು ವಿಳಂಬ ಖಂಡಿಸಿ ಆಮರಣ ಉಪವಾಸ ಸತ್ಯಾಗ್ರಹ

KannadaprabhaNewsNetwork |  
Published : Mar 27, 2026, 01:30 AM IST
ನಮೂನೆ ತ್ರಿ ವಿತರಣೆಯಲ್ಲಿ ಪೌರಾಯುಕ್ತರ ನಿಲ೯ಕ್ಷ್ಯಖಂಡಿಸಿ ಪ್ರತಿಭಟನೆ | Kannada Prabha

ಸಾರಾಂಶ

ಇಲ್ಲಿನ ನಗರಸಭೆ ಆಯುಕ್ತರು ಇ-ಸ್ವತ್ತುಗೆ ನಮೂನೆ 3ಗಾಗಿ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದು, ನೂರಾರು ಅರ್ಜಿಗಳು ವಿಲೇವಾರಿಯಾಗದೆ ಜನರು ಅಲೆಯುವಂತಾಗಿದೆ ಎಂದು ಮಾಜಿ ನಾಮನಿರ್ದೇಶಿತ ಸದಸ್ಯ ಮಧುಚಂದ್ರ ಆರೋಪಿಸಿದ್ದು, ಇದರ ವಿರುದ್ಧ ಆಮರಣ ಉಪವಾಸ ಕೈಗೊಂಡಿದ್ದಾರೆ. ಸತ್ಯಾಗ್ರಹಕ್ಕೆ ಮೊದಲ ದಿನ ಉತ್ತಮ ಬೆಂಬಲ ವ್ಯಕ್ತವಾಗಿದೆ.

- ಉಪವಾಸ ಆರಂಭವಾದ ಅರ್ಧ ದಿನದಲ್ಲಿಯೇ ಮುಕ್ತಾಯ । ಮತ್ತೆ ಧರಣಿ ಕೂರುವ ಎಚ್ಚರಿಕೆ---ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇಲ್ಲಿನ ನಗರಸಭೆ ಆಯುಕ್ತರು ಇ-ಸ್ವತ್ತುಗೆ ನಮೂನೆ 3ಗಾಗಿ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದು, ನೂರಾರು ಅರ್ಜಿಗಳು ವಿಲೇವಾರಿಯಾಗದೆ ಜನರು ಅಲೆಯುವಂತಾಗಿದೆ ಎಂದು ಮಾಜಿ ನಾಮನಿರ್ದೇಶಿತ ಸದಸ್ಯ ಮಧುಚಂದ್ರ ಆರೋಪಿಸಿದ್ದು, ಇದರ ವಿರುದ್ಧ ಆಮರಣ ಉಪವಾಸ ಕೈಗೊಂಡಿದ್ದಾರೆ. ಸತ್ಯಾಗ್ರಹಕ್ಕೆ ಮೊದಲ ದಿನ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಬೆಳಗ್ಗೆ 10ರ ಸುಮಾರಿಗೆ ಬಿ.ಆರ್‌. ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧಿ ಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಧರಣಿ ಕುಳಿತ ಮಧುಚಂದ್ರ ಅವರ ಬೆಂಬಲಕ್ಕೆ ಬಿಜೆಪಿಯ ಹಿರಿಯ ಮುಖಂಡ, ಉದ್ಯಮಿ ನಟರಾಜಗೌಡ, ನಿವೃತ್ತ ರೈಲ್ವೆ ನೌಕರ ಲಿಂಗರಾಜು, ನಗರಸಭೆ ಮಾಜಿ ಸದಸ್ಯ ಕೆ.ಕೆ. ಮೂರ್ತಿ, ಮಹದೇವಪ್ಪ, ಪ್ರಭು, ರವಿ, ಸುರೇಶ್‌, ವಾಸೀಕ್‌, ಅಬ್ಬೂಕರ್‌, ಅಗಸ್ಟೀನ್‌, ಮಲ್ಲಿಕಾರ್ಜುನ, ರೇಚಣ್ಣ, ಶಂಕರ್‌, ರೈತ ಸಂಘದ ರಾಮಕೃಷ್ಣ, ಮೋಳೆ ಸೋಮಣ್ಣ ಸೇರಿದಂತೆ ಅನೇಕರು ಬೆಂಬಲ ಸುಚಿಸಿದರು.

ಈ ವೇಳೆ ಮಧುಚಂದ್ರ ಮಾತನಾಡಿ ಇ-ಸ್ವತ್ತು ವಿತರಣೆ ಸಮರ್ಪಕವಾಗಿಲ್ಲ. ಇ-ಸ್ವತ್ತು ನಿರಾಕರಿಸುವ ಅಧಿಕಾರಿಗಳು ಅದಕ್ಕೆ ಸೂಕ್ತ ಕಾರಣ ನೀಡಲ್ಲ. ಸೂಕ್ತ ದಾಖಲೆಗಳಿದ್ದರೂ ಸಹ ಅರ್ಜಿಯನ್ನು ವಿಲೇವಾರಿ ಮಾಡುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬಿತ್ಯಾದಿ ಗಂಭೀರ ಆರೋಪ ಮಾಡಿದರು. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ತೊಂದರೆ ತಪ್ಪಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆವಿತ್ತರು. ಪ್ರತಿಭಟನಾಕಾರರು ಒಪ್ಪದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ನಿರ್ಗಮಿಸಿದರು. ಬಳಿಕ ಚಾಮರಾಜನಗರ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳು ಪ್ರತಿಭಟನಾನಿರತರ ಜೊತೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆ ಇತ್ಯರ್ಥದ ಭರವಸೆ ನೀಡಿದರು.ಮಧ್ಯಾಹ್ನ ಮತ್ತೆ ಧರಣಿನಿರತರನ್ನು ಭೇಟಿ ಮಾಡಿದ ಪೌರಾಯುಕ್ತರು 1 ವಾರದೊಳಗೆ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.

ಬಾಕ್ಸ್‌...)))1 ವಾರದಲ್ಲಿ 600 ಅರ್ಜಿ ಇತ್ಯರ್ಥ- ರುದ್ರಮ್ಮ

ಕೊಳ್ಳೇಗಾಲ ನಗರಸಭೆಯಲ್ಲಿ 600 ಇ-ಸ್ವತ್ತು ದೂರುಗಳು ಬಾಕಿಯಿದ್ದು, ಹಂತಹಂತವಾಗಿ ಎಲ್ಲವನ್ನು ಪರಿಶೀಲಿಸಿ 1 ವಾರದಲ್ಲಿ ಇತ್ಯರ್ಥಪಡಿಸಲಾಗುವುದು ಎಂದು ರುದ್ರಮ್ಮ ಭರವಸೆಕೊಟ್ಟರು. ಇದಕ್ಕೆ ಸ್ಪಂದಿಸಿದ ಮಧುಚಂದ್ರ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು. ಜೊತೆಗೆ 10 ದಿನಗಳ ಒಳಗಾಗಿ ಬಗೆಹರಿಯದಿದ್ದರೆ, ಮತ್ತೆ ಏ.10ರಿಂದ ಅಹೋರಾತ್ರಿ ಧರಣಿ ಕೂರುವುದಾಗಿ ಎಚ್ಚರಿಸಿದರು.

---26ಕೆಜಿಎಲ್ 32

ಕೊಳ್ಳೇಗಾಲ ನಗರಸಭೆ ಮುಂಭಾಗ ಮಧುಚಂದ್ರ ಉಪವಾಸ ಸತ್ಯಾಗ್ರಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯ: ಕಿಡಿ
ಕೋಮು ಘರ್ಷಣೆ: 2 ವರ್ಷದಲ್ಲಿ ರಾಜ್ಯಕ್ಕೆ ಮಂಡ್ಯ ಫಸ್ಟ್..!