ಕನ್ನಡಪ್ರಭ ವಾರ್ತೆ ಮೈಸೂರು
1995 ರಲ್ಲಿ ಕೇಂದ್ರ ಸರ್ಕಾರ ಇಪಿಎಫ್ ಕಾಯ್ದೆಗೆ ತಿದ್ದುಪಡಿ ತಂದು ಕುಟುಂಬ ಪಿಂಚಣಿ ಯೋಜನೆ ಬದಲಿಗೆ ಇಪಿಎಫ್ ಕಾಯ್ದೆ ಜಾರಿಗೆ ತಂದಿದೆ. ಆರಂಭದಲ್ಲಿ ದೇಶಾದ್ಯಂತ ಸುಮಾರು 24 ಸಾವಿರಕ್ಕೂ ಹೆಚ್ಚು ಮಂದಿಗೆ ನಿವೃತ್ತರಿಗೆ ವಾಸ್ತವ ವೇತನದ ಮೇಲೆ ಇಪಿಎಫ್ ಪಿಂಚಣಿ ಮಂಜೂರು ಮಾಡಿ ಕೆಲ ವರ್ಷ ಪಾವತಿಸಿ, ಕೆಲವರಿಗೆ ನಿಲ್ಲಿಸಿ ಪಕ್ಷಪಾತ ಮಾಡಲಾಗುತ್ತಿದೆ ಎಂದು ಅವರು ಆಗ್ರಹಿಸಿದರು.
ಇಪಿಎಫ್ ಟ್ರಸ್ಟ್ ಗಳ ಮೂಲಕ ನೌಕರರ ವಾಸ್ತವ ವೇತನದ ಮೇಲಿನ ಇಪಿಎಫ್ ಪಿಂಚಣಿ ಕೊಡಲು ಬರುವುದಿಲ್ಲ ಎಂದು 2017 ರಲ್ಲಿ ಸುತ್ತೋಲೆ ಹೊರಡಿಸಿತು. ಈ ಸರ್ವಾಧಿಕಾರಿ ಧೋರಣೆ ಪ್ರಶ್ನಿಸಿ ಹಲವು ಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಇಪಿಎಫ್ ಕಾಯ್ದೆಗೆ ತಂದ ತಿದ್ದುಪಡಿಯನ್ನು ರದ್ದುಗೊಳಿಸಲಾಗಿದೆ ಎಂದು ಅವರು ಕಿಡಿಕಾರಿದರು.280 ಮಂದಿ ನಿವೃತ್ತ ನೌಕರರು, ಸೇವಾನಿರತ ನೌಕರರು ಅರ್ಜಿ ಸಲ್ಲಿಸಿದ್ದು, ಇದನ್ನು ಪರಿಶೀಲಿಸಿದ ಮಂಡ್ಯ ಹಾಲು ಒಕ್ಕೂಟ ಅನುಮೋದನೆ ನೀಡಿತ್ತು. ಆದರೆ, 7- 8 ತಿಂಗಳಾದರೂ ಸೇವೆಯಲ್ಲಿರುವ ಸುಮಾರು 15 ನೌಕರರಿಗೆ ವ್ಯತ್ಯಾಸ ಮೊತ್ತ ಪಾವತಿಗೆ ಬೇಡಿಕೆ ಪತ್ರ ನೀಡಿ, ಅವರಲ್ಲಿ ಕೆಲವರಿಂದ ವ್ಯತ್ಯಾಸ ಮೊತ್ತ ಪಡೆದುಕೊಂಡಿರುವುದನ್ನು ಬಿಟ್ಟರೆ ಇದುವರೆಗೆ ಒಬ್ಬ ನಿವೃತ್ತನಿಗೂ ಬೇಡಿಕೆ ಪತ್ರ ನೀಡಿಲ್ಲ. ಈ ಕುರಿತು ಹಲವು ಬಾರಿ ವಿಚಾರಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಇಪಿಎಫ್ ಸಿಗದೆ ನಿವೃತ್ತರು ಮೃತಪಡುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಬಿ.ಜಿ. ಪೂವಯ್ಯ, ಕಾರ್ಯದರ್ಶಿ ವಿ. ನಾಗರಾಜ್ ಮೊದಲಾದವರು ಇದ್ದರು.