ದ್ವೇಷಕ್ಕೆ 200ಕ್ಕೂ ಹೆಚ್ಚು ಬಾಳೆಗಿಡ ಕೊಚ್ಚಿದರು!

KannadaprabhaNewsNetwork |  
Published : Jun 13, 2026, 01:30 AM IST
 ಕೊಳ್ಳಿ ಇಟ್ಟ | Kannada Prabha

ಸಾರಾಂಶ

ಹಳೇ ದ್ವೇಷದಿಂದಾಗಿ ದುಷ್ಕರ್ಮಿಗಳು 200ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಕೊಚ್ಚಿ ನೆಲಸಮ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಸಪ್ಪಯ್ಯನಪುರ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ: ಹಳೇ ದ್ವೇಷದಿಂದಾಗಿ ದುಷ್ಕರ್ಮಿಗಳು 200ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಕೊಚ್ಚಿ ನೆಲಸಮ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಸಪ್ಪಯ್ಯನಪುರ ಗ್ರಾಮದಲ್ಲಿ ನಡೆದಿದೆ. ಸಾಲಸೋಲ ಮಾಡಿ ರೈತ ಮಾದೇಗೌಡ ಬೆಳೆದಿದ್ದ ಬಾಳೆಯನ್ನು ದುಷ್ಕರ್ಮಿಗಳು ಕೊಚ್ಚಿ ಹಾಕಿರುವುದರಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿ ರೈತ ಕಂಗಲಾಗಿದ್ದಾನೆ. ಚಿನ್ನ ಅಡವಿಟ್ಟು ಬೋರ್‌ ಹಾಕಿಸಿ ಇದೇ ಮೊದಲ ಬಾರಿಗೆ ರೈತ ಮಾದೇಗೌಡ ಬಾಳೆ ಬೆಳೆದಿದ್ದರು. ಇನ್ನೊಂದೆರಡು ತಿಂಗಳಲ್ಲಿ ಕಟಾವಾಗಬೇಕಿದ್ದ ಬಾಳೆ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿವೆ. ಸಾಲ ತೀರಿಸಿ ನೆಮ್ಮದಿಯಾಗಿರಬಹುದೆಂದು ಕನಸು ಕಂಡಿದ್ದ ರೈತನ ಕನಸಿಗೆ ದುಷ್ಕರ್ಮಿಗಳು ಕೊಳ್ಳಿ ಇಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂರಿಯಾ ಅಭಾವ ಖಂಡಿಸಿ ರೈತ ಸಂಘ ಪ್ರತಿಭಟನೆ
ನೀಟ್‌ ಅಕ್ರಮ: ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ