ಟ್ರೇಡಿಂಗ್‌ನಿಂದ ಖಿನ್ನತೆಗೆ ತುತ್ತಾದವನಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ

KannadaprabhaNewsNetwork |  
Published : Jan 28, 2026, 02:15 AM IST
ಪೊಟೋ: 27ಎಸ್‌ಎಂಜಿಕೆಪಿ02ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯ ಎಸ್.ಬಿ.ಐ. ಕಚೇರಿಯಿಂದ ಸೀನಪ್ಪ ಶೆಟ್ಟಿ ವೃತ್ತದವರೆಗೆ ವಿವಿಧ  ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘಟನೆಯ ಒಕ್ಕೂಟವಾದ ಯು.ಎಫ್.ಬಿ.ಯು ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಯುಟ್ಯೂಬ್‌, ರೀಲ್ಸ್‌ ನೋಡಿಕೊಂಡು ಷೇರು ವ್ಯವಹಾರಕ್ಕೆ (ಟ್ರೇಡಿಂಗ್‌) ಇಳಿದು ಬಳಿಕ ಅದೇ ಗೀಳಿಗೆ ತುತ್ತಾಗಿ ಬರೋಬ್ಬರಿ ₹80 ಲಕ್ಷ ಸಾಲದ ಹೊರೆ ಹೊತ್ತು, ತೀವ್ರ ಖಿನ್ನತೆ ಸೇರಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಯುವಕನನ್ನು ನಿಮ್ಹಾನ್ಸ್‌ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯುಟ್ಯೂಬ್‌, ರೀಲ್ಸ್‌ ನೋಡಿಕೊಂಡು ಷೇರು ವ್ಯವಹಾರಕ್ಕೆ (ಟ್ರೇಡಿಂಗ್‌) ಇಳಿದು ಬಳಿಕ ಅದೇ ಗೀಳಿಗೆ ತುತ್ತಾಗಿ ಬರೋಬ್ಬರಿ ₹80 ಲಕ್ಷ ಸಾಲದ ಹೊರೆ ಹೊತ್ತು, ತೀವ್ರ ಖಿನ್ನತೆ ಸೇರಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಯುವಕನನ್ನು ನಿಮ್ಹಾನ್ಸ್‌ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ.

ಮೊಬೈಲ್‌ ಗೇಮಿಂಗ್‌, ಮದ್ಯಪಾನ, ಧೂಮಪಾನದ ಚಟದಂತೆ ಷೇರು ಮಾರುಕಟ್ಟೆಯ ವ್ಯವಹಾರವನ್ನೆ ಚಟವಾಗಿಸಿಕೊಂಡು ಮಾನಸಿಕವಾಗಿ ಬಳಲಿದ ಯುವಕನ ಕತೆಯಿದು.

ಬೆಂಗಳೂರು ಮೂಲದ ಶ್ರೀಮಂತ ಕುಟುಂಬ ಹಿನ್ನೆಲೆಯ ಹಾಗೂ ಉತ್ತಮ ಉದ್ಯೋಗದಲ್ಲಿದ್ದ ಈತ 4 ವರ್ಷದ ಹಿಂದೆ ಷೇರು ವ್ಯವಹಾರಕ್ಕೆ ಇಳಿದಿದ್ದ. ಆರಂಭದಲ್ಲಿ ಒಂದಿಷ್ಟು ಲಾಭ ಗಳಿಸಿದ ಬಳಿಕ ಸ್ಟಾಕ್ಸ್‌ನಿಂದ ಫ್ಯೂಚರ್‌ ಆ್ಯಂಡ್‌ ಆಪ್ಷನ್‌, ಇಂಟ್ರಾಡೇ ವ್ಯವಹಾರಕ್ಕೆ ಮುಂದಾಗಿದ್ದಾನೆ. ಒಂದಿಷ್ಟು ದಿನ ಲಾಭ ಗಳಿಸಿದ್ದಾನೆ. ಆದರೆ, ಬಳಿಕ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆ್ಯಪ್‌ ಮೂಲಕ ನಷ್ಟ ಸರಿಪಡಿಸಿಕೊಳ್ಳಲು ಲಕ್ಷಾಂತರ ಸಾಲ ಮಾಡಿಕೊಂಡಿದ್ದಾನೆ.

ಷೇರು ವ್ಯವಹಾರ ಕ್ರಮೇಣ ಗೀಳಾಗಿ ಮಾರ್ಪಟ್ಟಿದೆ. ಮನೆ, ಕಚೇರಿಯ ಕೆಲಸದ ಸಮಯದಲ್ಲೂ ಮತ್ತು ಅದರ ನಂತರವೂ ಗಂಟೆಗಟ್ಟಲೆ ಮೊಬೈಲ್ ನೋಡುತ್ತಾ, ಯುಟ್ಯೂಬ್‌ನಲ್ಲಿ ಬರುವ ಷೇರು ವ್ಯವಹಾರದ ವಿಡಿಯೋ ನೋಡುವುದು ಚಟವಾಗಿದೆ. ನಿದ್ದೆಗೆಟ್ಟು ಷೇರು ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸುವುದೇ ಕಾಯಕವಾಗಿದೆ.

ನಿದ್ರಾಹೀನತೆ ಸಮಸ್ಯೆ:

ಟ್ರೇಡಿಂಗ್ ಮಾಡದ ಸಮಯದಲ್ಲಿ ಉದ್ವೇಗಕ್ಕೆ ಒಳಗಾಗಿ ವಿಪರೀತ ಆತಂಕ, ಕೈಕಾಲು ನಡುಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆ ಕಾಣಿಸಿಕೊಂಡಿವೆ. ಆನ್‌ಲೈನ್ ಟ್ರೇಡಿಂಗ್ ಆ್ಯಪ್‌ ಜೂಜಿನಂತೆ ಆತನನ್ನು ಆವರಿಸಿಕೊಂಡಿದೆ. ಲಾಭಕ್ಕಿಂತ ನಷ್ಟವೇ ಹೆಚ್ಚಾದಾಗ ₹ 80 ಲಕ್ಷ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ನಷ್ಟ ಮುಚ್ಚಿಡಲು ಕುಟುಂಬದವರಿಗೆ ಕುಟುಂಬ ಮತ್ತು ಸಮಾಜದಿಂದ ದೂರ ಉಳಿದು ಒಂಟಿತನಕ್ಕೆ ಜಾರಿದ್ದಾನೆ.

ಇದು ಮನೆಯವರ ಗಮನಕ್ಕೆ ಬಂದು ನಿಮ್ಹಾನ್ಸ್‌ಗೆ ಚಿಕಿತ್ಸೆಗೆ ಕರೆತಂದರು. ನಿಮ್ಹಾನ್ಸ್‌ನ ''''''''''''''''ಷಟ್'''''''''''''''' ( ಸರ್ವೀಸ್‌ ಫಾರ್‌ ಹೆಲ್ತಿ ಯೂಸ್‌ ಆಫ್‌ ಟೆಕ್ನಾಲಜಿ) ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಮನೋಜ್ ಕೆ. ಶರ್ಮಾ ಮತ್ತು ಸಂಶೋಧಕರಾದ ಸುಬ್ರಮಣಿಯನ್ ಶಾರದ, ರಾಜೇಶ್ ಕುಮಾರ್ ಅವರ ತಂಡ ಈತನಿಗೆ ಚಿಕಿತ್ಸೆ ನೀಡಿದೆ. ಗೇಮಿಂಗ್ ಚಟಕ್ಕೆ ನೀಡುವ ಚಿಕಿತ್ಸಾ ವಿಧಾನವನ್ನೇ ಮಾರ್ಪಡಿಸಿ, ಈ ಯುವಕನಿಗೆ ''''''''''''''''ಮಲ್ಟಿಮೋಡಲ್ ಬಿಹೇವಿಯರಲ್ ಇಂಟರ್ವೆನ್ಷನ್'''''''''''''''' ಎಂಬ ವಿಶೇಷ ಚಿಕಿತ್ಸೆ ನೀಡಲಾಯಿತು.

ಒಟ್ಟು 10 ಸೆಷನ್‌ಗಳಲ್ಲಿ ಸಮಾಲೋಚನೆ ನಡೆಸಲಾಯಿತು. ಡಿಜಿಟಲ್ ಉಪವಾಸ ಅಂದರೆ ಟ್ರೇಡಿಂಗ್ ಆ್ಯಪ್‌ಗಳಿಂದ ಸಂಪೂರ್ಣವಾಗಿ ದೂರವಿರಿಸಿ, ಹಣಕಾಸು ನಿಯಂತ್ರಣ ಬದಲು, ಯುವಕನ ಹಣಕಾಸಿನ ವ್ಯವಹಾರಗಳ ಅಧಿಕಾರವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿ, ಟ್ರೇಡಿಂಗ್‌ ನಿಯಂತ್ರಣ. ಟ್ರೇಡಿಂಗ್‌ಗೆ ಪ್ರೇರೇಪಿಸುವ ಅಂಶಗಳಿಂದ ದೂರವಿರಿಸಲಾಯಿತು.

ಪುನಃ ಟ್ರೇಡಿಂಗ್‌ ಗೀಳಿಗೆ ತುತ್ತಾಗದಂತೆ ತಡೆಯಲು ವೈದ್ಯರು ''''''''''''''''4ಡಿ'''''''''''''''' ಸೂತ್ರ ತಿಳಿಸಿಕೊಟ್ಟಿದ್ದಾರೆ. ದೀರ್ಘ ಉಸಿರಾಟ, ಟ್ರೇಡಿಂಗ್ ಮಾಡುವ ತುಡಿತ ಬಂದಾಗ ಮನಸ್ಸನ್ನು ಶಾಂತಗೊಳಿಸಲು ಕಲಿಸಿದ್ದಾರೆ. ದೈಹಿಕವಾಗಿ ಗಮನ ಬೇರೆಡೆ ಸೆಳೆಯಲು ಚರ್ಚೆ ಕುಟುಂಬದವರೊಂದಿಗೆ ಬೆರೆಯುವಂತೆ ಹೇಳಿದ್ದಾರೆ. ಮುಖ್ಯವಾಗಿ ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಿ ಅನಗತ್ಯವಾಗಿ ಫೋನ್ ನೋಡುವುದನ್ನು ಬಿಡುವುದು ಕಲಿಸಿದ್ದಾರೆ.

ಯುವಕ ಟ್ರೇಡಿಂಗ್‌ನಿಂದ ಮಾನಸಿಕ ಖಿನ್ನತೆ ಸೇರಿ ಹಲವು ಸಮಸ್ಯೆಗೆ ಒಳಗಾಗಿದ್ದ. ಮಲ್ಟಿಮೋಡಲ್ ಬಿಹೇವಿಯರಲ್ ಇಂಟರ್ವೆನ್ಷನ್'''''''''''''''' ಎಂಬ ವಿಶೇಷ ಚಿಕಿತ್ಸೆ ಮೂಲಕ ಗುಣಪಡಿಸಿದ್ದೇವೆ.

- ಡಾ.ರಾಜೇಶ್‌ ಕುಮಾರ, ನಿಮ್ಹಾನ್ಸ್‌ ಷಟ್‌ ವಿಭಾಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ
ತಂದೆಯಂತೆ ಜನಸೇವೆ ಮಾಡುವ ಕನಸು ನನ್ನದು: ವಿನಯ ತಿಮ್ಮಾಪುರ