ಗದಗ: ಇಂದಿನ ಯುವ ಸಮುದಾಯ ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಗ್ರಾಹಕರ ಮನಸ್ಸನ್ನು ಅರಿತುಕೊಂಡು ಮಾರುಕಟ್ಟೆಯಲ್ಲಿ ಮುನ್ನುಗ್ಗಬೇಕು ಅಂದರೆ ಮಾತ್ರ ತನ್ನ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚು ಗಳಿಕೆ ಮಾಡಬಹುದು ಎಂದು ಗಣ್ಯ ವ್ಯಾಪಾರಸ್ಥ ಅಶೋಕ ಬಾಗಮಾರ ಹೇಳಿದರು.
ಆದರ್ಶ ಶಿಕ್ಷಣ ಸಂಸ್ಥೆಯ ಚೇರ್ಮನ್ ಸಿಎ ಆನಂದ ಪೋತ್ನಿಸ್ ಮಾತನಾಡಿ, ಪ್ರತಿಯೊಂದು ವ್ಯವಹಾರದ ಯಶಸ್ಸು ಹೆಚ್ಚಾಗಿ ಅವರು ನಿಯೋಜಿಸುವ ಮಾರ್ಕೆಟಿಂಗ್ ತಂತ್ರದ ಪ್ರಕಾರವನ್ನು ಅವಲಂಬಿಸಿರುತ್ತದೆ. ಏಕೆಂದರೆ ವ್ಯಾಪಾರದ ಎಲ್ಲಾ ಹಂತಗಳಲ್ಲಿ ಮಾರ್ಕೆಟಿಂಗ್ ಪ್ರಾರಂಭದಿಂದ ಕೊನೆಯವರೆಗೆ ಇರುತ್ತದೆ. ವ್ಯಾಪಾರಗಳು ವ್ಯಾಪಕವಾದ ಸಂಶೋಧನೆಯನ್ನು ನಡೆಸುವುದು, ತಮ್ಮ ಗುರಿ ಪ್ರೇಕ್ಷಕರನ್ನು ಚೆನ್ನಾಗಿ ತಿಳಿದುಕೊಳ್ಳುವುದು, ಸಮಗ್ರ ಮಾರಾಟ ಮತ್ತು ಮಾರುಕಟ್ಟೆ ನಿರ್ವಹಣಾ ಯೋಜನೆಯನ್ನು ಮಾಡುವುದು ಮತ್ತು ಮಾರ್ಕೆಟಿಂಗ್ ಚಾನೆಲ್ಗಳನ್ನು ಬುದ್ಧಿವಂತಿಕೆಯಿಂದ ಆರಿಸುವುದು ಅತ್ಯಗತ್ಯ. ಇದಲ್ಲದೆ, ಬದಲಾಗುತ್ತಿರುವ ಮಾರ್ಕೆಟಿಂಗ್ ಡೈನಾಮಿಕ್ಸ್ ಮತ್ತು ನಿರ್ದಿಷ್ಟ ಉತ್ಪನ್ನ ಅಥವಾ ಸೇವೆಯನ್ನು ಖರೀದಿಸಲು ಗ್ರಾಹಕರನ್ನು ಮನವೊಲಿಸುವ ಕಷ್ಟವನ್ನು ಪರಿಗಣಿಸಿ, ಸಾಂಪ್ರದಾಯಿಕ ಮಾರ್ಕೆಟಿಂಗ್ ತಂತ್ರಗಳು ಶೀಘ್ರದಲ್ಲೇ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬಹುದು ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾ.ಪ್ರೊ.ಕೆ.ಗಿರಿರಾಜಕುಮಾರ್ ಮಾತನಾಡಿ, ಮಾರ್ಕೆಟಿಂಗ್ ಉದ್ದೇಶ ಉತ್ಪನ್ನ ಅಭಿವೃದ್ಧಿ, ಜಾಹಿರಾತು, ಮಾರಾಟ ಮತ್ತು ವಿತರಣಾ ವಿಧಾನಗಳಂತಹ ವ್ಯಾಪಾರದ ವಿಭಿನ್ನ ಅಂಶಗಳನ್ನು ಮಾರ್ಕೆಟಿಂಗ್ ಒಳಗೊಂಡಿರುತ್ತದೆ. ಕಂಪನಿಯ ಉತ್ಪನ್ನಗಳು ಅಥವಾ ಸೇವೆಗಳಲ್ಲಿ ಜನರು ಆಸಕ್ತಿ ವಹಿಸುವುದು ಮಾರ್ಕೆಟಿಂಗ್ನ ಪ್ರಮುಖ ಉದ್ದೇಶವಾಗಿದೆ ಎಂದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಕೆ.ವಿ. ಕುಷ್ಟಗಿ, ಕಾರ್ಯದರ್ಶಿ ಎ.ಡಿ. ಗೋಡಕಿಂಡಿ, ಉಪ ಪ್ರಾ. ಡಾ. ವಿ.ಟಿ. ನಾಯ್ಕರ್. ಡಾ. ಎಸ್.ಡಿ. ಬಂಡಾರ್ಕರ್, ಮಾರ್ಕೆಟಿಂಗ್ ಪ್ರತ್ಯಾಗ್ರ ಫುಡ್ ಫಸ್ಟಿನ ಮುಖ್ಯಸ್ಥೆ ಪ್ರೊ. ಸಲ್ಮಾ ಬೆಳಗಾಂ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.