ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಬೆಲ್ಲವತ್ತ ಮಹದೇಶ್ವರ ವ್ಯಾಪ್ತಿಯ ಶ್ರೀಮಹದೇಶ್ವರ ದೇಗುಲದಲ್ಲಿ ಮಂಡಲಪೂಜೆಯೂ ವಿದ್ವಾನ್ ಚಂದ್ರಶೇಖರಮೂರ್ತಿ ಅವರ ದಿವ್ಯ ಸಮ್ಮುಖದಲ್ಲಿ ವಿಧಿ, ವಿಧಾನಗಳೊಂದಿಗೆ ಜರುಗಿತು.
ವಿಶೇಷ ಪೂಜೆ ಹಿನ್ನೆಲೆ ದೇಗುಲಕ್ಕೆ ಸಮಾಜ ಸೇವಕರೂ, ರಾಜ್ಯ ಕೆಪಿಸಿಸಿ ಕಾಮಿ೯ಕ ಘಟಕದ ಕಾರ್ಯದರ್ಶಿ ಜಿ ಸಿ ಕಿರಣ್,
ಯುವ ಮುಖಂಡ ಕೆಸ್ತೂರು ಕೇಶವಮೂರ್ತಿ, ಅಂಬಾದಾಸ್, ಅಮ್ಮನಪುರ ಮಹೇಂದ್ರ, ಮಹೇಶ, ಸಿದ್ದಲಿಂಗಸ್ವಾಮಿ, ಪ್ರಕಾಶ, ಜಯಣ್ಣ, ಕಳ್ಳಿಪುರ ರೇವಣ್ಣ, ವೀರಣ್ಣ, ಮಹದೇವಸ್ವಾಮಿ ಗಲ್ಲಿಮಹದೇವು, ಮಲ್ಲೇಶ , ಬಂಗಾರಮ್ಮ, ದಾಸನಹುಂಡಿ ಚಂದ್ರ, ಸುರೇಶ, ಕೊಳ್ಳೇಗಾಲ ನಾಗಮಲ್ಲು, ಹೊಂಡರಬಾಳು ಅಶ್ವಿನ್, ವೀರಸ್ವಾಮಿ, ಸ್ವಾಮಿ ಇನ್ನಿತರರ ಗಣ್ಯರು ಭೇಟಿ ನೀಡಿ ವಿವಿಧ ಸೇವಾ ಕೈಂಕರ್ಯ ಮತ್ತು ಸೇವಾರ್ಥಗಳಲ್ಲಿ ಪಾಲ್ಗೊಂಡರು.ದಾಸೋಹಕ್ಕೆ ಪಾತ್ರೆಗಳ ಕೊಡುಗೆ: ಮಂಡಲ ಪೂಜೆ ಹಿನ್ನೆಲೆ ದೇಗುಲಕ್ಕೆ ಸಮಾಜ ಸೇವಕ ಜಿ.ಸಿ. ಕಿರಣ್ ಅವರು ಭಕ್ತಾದಿಗಳ ದಾಸೋಹಕ್ಕೆ ಅಗತ್ಯವಾದ ಪಾತ್ರೆ, ಪರಿಕರಗಳನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಅರ್ಚಕ ರುದ್ರಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ದಾಸೋಹ ವ್ಯವಸ್ಥೆ ಸಾವಿರಾರು ರೂಗಳ ಪಾತ್ರೆ ವಿತರಿಸಿದ ಜಿ ಸಿ ಕಿರಣ್ ಅವರನ್ನು ಗ್ರಾಮದ ಗೌಡ ಪುಟ್ಟಸ್ವಾಮಿ ಸನ್ಮಾನಿಸಿದರು.
ಬೆಲ್ಲವತ್ತ ಮಹದೇಶ್ವರಸ್ವಾಮಿ ದೇಗುಲಕ್ಕೆ ಬೇಟಿ ನೀಡಿದ್ದು ಮತ್ತು ಇಲ್ಲಿನ ಐತಿಹ್ಯ ಮಹದೇಶ್ವರ ಸ್ವಾಮಿ ದಶ೯ನ ಭಾಗ್ಯ ಲಭಿಸಿದ್ದು ಸಂತಸ ತಂದಿದೆ. ಕಾನನದ ನಡುವೆ ಇರುವ ಈ ಗ್ರಾಮದ ಅಚ್ಚ ಹಸಿರಿನ ಸುಂದರಗ್ರಾಮ. ದೇಗುಲಕ್ಕೆ ಮುಂದಿನ ದಿನಗಳಲ್ಲೂ ನನ್ನ ಕೈಲಾದ ರೀತಿಯಲ್ಲಿ ಸೇವಾ ಕೈಂಕರ್ಯ ಗಳಲ್ಲಿ ತೊಡಗಿಸಿಕೊಳ್ಳುವೆಂದು ಕೆಪಿಸಿಸಿ ಕಾಮಿ೯ಕ ಘಟಕದ ರಾಜ್ಯ ಕಾಯ೯ದರ್ಶಿ ಜಿ.ಸಿ. ಕಿರಣ್ ಹೇಳಿದರು.