ಕನ್ನಡಪ್ರಭ ವಾರ್ತೆ ಮಂಡ್ಯ
ಪಿಇಟಿ, ಡ್ರೀಮ್ ಕ್ರಿಕೆಟ್ ಅಕಾಡೆಮಿ, ಪಿಇಟಿ ಕ್ರೀಡಾ ಸಮುಚ್ಚಯ ಇವರ ವತಿಯಿಂದ ನಿತ್ಯ ಸಚಿವ ಕೆ.ವಿ.ಶಂಕರಗೌಡ ಸ್ಮರಣಾರ್ಥ ಪಿಇಟಿ ಆಹ್ವಾನಿತ ಟಿ-೨೦ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-೧ರ ಕೆವಿಎಸ್ ೨೦೨೫ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಂಸ್ಥೆಯನ್ನು ಕಲಾವಿದರು ನಾಟಕ ಪ್ರದರ್ಶನ ಮಾಡಿಯೇ ಕಟ್ಟಿದ್ದಾರೆ ಎಂದರು.
ಈ ಸಂಸ್ಥೆಗೆ ರೈತರು ೬೯ ಎಕರೆ ಜಮೀನನ್ನು ನೀಡಿದ್ದಾರೆ. ನಮ್ಮ ತಾತ ಕೆ.ವಿ.ಶಂಕರಗೌಡ ಮತ್ತು ನಮ್ಮ ತಂದೆ ಕೆ.ಎಸ್. ಸಚ್ಚಿದಾನಂದ ಅವರು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ಸಂಸ್ಥೆಯಿಂದಲೇ ಸಂಕ್ರಾಂತಿ, ಹೊಸ ನೀರು ಸೇರಿದಂತೆ ಆರು ಸಿನಿಮಾಗಳನ್ನು ಮಾಡಿದ್ದೇವೆ. ನನಗೆ ಕಲೆಯಲ್ಲಿ ಯಾಕೋ ಆಸಕ್ತಿ ಬರಲಿಲ್ಲ. ಆದರೂ ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ಅವರಿಂದಲೇ ಬಂದಿದೆ ಎಂದರು.ಅದರೂ ನಮ್ಮೂರಿನವೇ ಆದ ರವಿಶಂಕರ್ ಅವರು ಸಿನಿಮಾ, ನಾಟಕಗಳಲ್ಲೂ ಸಹ ಉತ್ತಮ ಅಭಿನಯ ಮಾಡುತ್ತಿದ್ದಾರೆ. ಹಿಂದೆಯೂ ನಾವು ಕಲಾವಿದರಿಗೆ ಸಹಕಾರ ನೀಡುತ್ತಿದ್ದೆವು. ಈಗಲೂ ಸಹ ಅದೇ ರೀತಿ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು.
ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ಚಿತ್ರನಟ ರವಿಶಂಕರ್ ಮಾತನಾಡಿ, ನಮ್ಮ ಸೋದರ ಮಾವನವರಾದ ಕೆ.ಎಸ್. ಸಚ್ಚಿದಾನಂದ ಅವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಆದ್ದರಿಂದಲೇ ನಾನು ಇಂದು ಚಿತ್ರರಂಗದಲ್ಲಿದ್ದೇನೆ. ಅವರಿಗೆ ನಾನು ಸದಾ ಋಣಿಯಾಗಿದ್ದೇನೆ ಎಂದರು.
ಅವರಂತೆಯೇ ಕೆ.ಎಸ್.ವಿಜಯ್ಆನಂದ್ ಅವರೂ ಸಹ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದಾರೆ. ಸೀಸನ್-೧ ಇದ್ದದ್ದು ಮುಂದುವರಿಯುತ್ತೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಡ್ಯದ ಕ್ರಿಕೆಟ್ ತಂಡ ಆಟವಾಡುವ ರೀತಿಯಲ್ಲಿ ಮಾಡಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ ಎಂದರು.ಟ್ರಸ್ಟ್ ನಿರ್ದೇಶಕ ಡಾ.ರಾಮಲಿಂಗಯ್ಯ, ಖ್ಯಾತ ಚಿತ್ರನಟರಾದ ಯೋಗೇಶ್, ಕೆಜಿಎಫ್ ಗರುಡರಾಮ್, ವಿವಾನ್ ಸೇರಿದಂತೆ ಸಂಗೀತ ನಿರ್ದೇಶಕರು ಹಾಗೂ ಪ್ರಾದೇಶಿಕ ಕ್ರಿಕೆಟ್ ಆಟಗಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.