ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿವಿಗೆ ಕಾನೂನು ಬಾಹಿರವಾಗಿ ಪ್ರಭಾರ ಕುಲಪತಿ ಪ್ರೊ.ಶಿವಚಿತ್ತಪ್ಪ ನೇಮಕ, ಹಲವು ಭ್ರಷ್ಟಾಚಾರದ ಬಗ್ಗೆ ಮರಿತಿಬ್ಬೇಗೌಡರು ಇತ್ತೀಚೆಗೆ ಆರೋಪಿಸಿ ಸರ್ಕಾರ ಹಾಗೂ ಸಚಿವರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರು ತನಿಖೆ ನಡೆಸಿ ಹತ್ತು ದಿನದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕ ವಿವಿ ಕಾಯ್ದೆ 2000 ಪ್ರಕಾರ ವಿವಿಯ ಹಿರಿಯ ಡೀನ್ ಅವರನ್ನು ನೇಮಕ ಮಾಡಬೇಕಿತ್ತು. ಜ್ಯೇಷ್ಠತಾ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಪ್ರೊ.ಶಿವಚಿತ್ತಪ್ಪರನ್ನು ಕಾನೂನು ಬಾಹಿರವಾಗಿ ಮಂಡ್ಯ ವಿವಿಗೆ ಪ್ರಭಾರ ಕುಲಪತಿಯಾಗಿ ನೇಮಕ ಮಾಡಲಾಗಿದೆ. ರಾಜಭವನದಲ್ಲಿರುವ ಕೆಲವು ಭ್ರಷ್ಟ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಿದ್ದಾರೆ.ಯುಜಿಸಿ ನಿಯಮಾನುಸಾರ ಯಾವುದೇ ವಿವಿ ಸ್ವಂತ ಕಾಯ್ದೆಗಳಿಲ್ಲದೇ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುವಂತಿಲ್ಲ. ಆದರೂ ವಿವಿ ಆರಂಭಗೊಂಡಾಗಿನಿಂದಲೂ ಯಾವುದೇ ಕಾಯ್ದೆ ಮಾಡಿಕೊಂಡಿಲ್ಲ. ಕಾಯ್ದೆಗಳು ರಾಜ್ಯಪಾಲರು ಮತ್ತು ರಾಜ್ಯಸರ್ಕಾರದಿಂದ ಅನುಮೋದನೆಗೊಂಡಿರಬೇಕು. ಕಾಯ್ದೆ ರಚಿಸದೇ ಮೈಸೂರು ವಿವಿ ಕಾಯ್ದೆಗಳನ್ನೇ 7 ವರ್ಷದಿಂದ ಅನುಸರಿಸಿಕೊಂಡು ಬರಲಾಗಿದೆ. ವಿವಿಯಿಂದ ಪ್ರದಾನ ಮಾಡಿರುವ ಪದವಿ, ವಿವಿ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಿಗೆ ಹೊಸ ಕೋರ್ಸ್ ಗೆ ಅನುಮತಿ, ಸಂಶೋಧನಾ ಕೇಂದ್ರ ಸ್ಥಾಪನೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ನೇಮಕ, ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸುವುದಾಗಿ ಕಾನೂನುಬಾಹಿರವಾಗಿ ನಡೆಸಲಾಗಿದೆ.
ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ. ಇದಲ್ಲದೆ ಗ್ರಂಥಾಲಯಕ್ಕೆ 40 ಲಕ್ಷ ರು ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಪುಸ್ತಕದ ಮುಖ ಬೆಲೆಗಿಂತ ದುಪ್ಪಟ್ಟು ದರದ ಬಿಲ್ ಹಾಕಲಾಗಿದೆ. ಲಕ್ಷಾಂತರ ರೂ ಕೊಟ್ಟು ಕಂಪ್ಯೂಟರ್ ಪರಿಕರ ಖರೀದಿಸಿ
ವಿವಿಗೆ ಸಂಬಂಧಿಸಿದಂತೆ ಟೆಂಡರ್ ರಹಿತರವಾಗಿ ಹೊರಗುತ್ತಿಗೆ ಆಧಾರದಲ್ಲಿ ಕಾವಲುಗಾರರು ಮತ್ತು ಇತರೆ ಸಿಬ್ಬಂದಿ ನೇಮಕಾತಿ, ಕೆಲಸ ಮಾಡುವವರ ಸಂಖ್ಯೆ 30 ನೌಕರರು. ಆದರೆ, 50 ನೌಕರರ ಹೆಸರಿನಲ್ಲಿ ವೇತನ ಪಾವತಿ, ಮಂಡ್ಯ ವಿವಿಯಲ್ಲಿ ಪಿಎಚ್.ಡಿ ಪದವಿಗೆ ಸಂಬಂಧಿಸಿದಂತೆ ಕೆಲ ಲೋಪ, ಯುಜಿಸಿ ನಿಯಮಾವಳಿ ಪ್ರಕಾರ ಅರ್ಹತೆ ಇಲ್ಲದಿದ್ದರೂ ವಿವಿ ಸಂಯೋಜಿತ ಕಾಲೇಜಿಗೆ ಸಂಶೋಧನಾ ಕೇಂದ್ರ ನೀಡಿದ್ದಾರೆ. ಪಿಎಚ್.ಡಿ ಮಾರ್ಗದರ್ಶಕರ ನೇಮಕ ಮಾಡುವಾಗ ನಿಯಮ ಪಾಲನೆ ಮಾಡಿಲ್ಲ ಎಂದು ಮರಿತಿಬ್ಬೇಗೌಡರು ಆರೋಪಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಉನ್ನತ ಶಿಕ್ಷಣ ಇಲಾಖೆ, ಆರೋಪಕ್ಕೆ ಸಂಬಂಧಿಸಿದಂತೆ ವ್ಯವಹಾರಗಳು ಕಾನೂನು ರಿತ್ಯವೋ ಅಥವಾ ಕಾನೂನುಬಾಹಿರವೋ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.ತನಿಖೆಗೆ ಒತ್ತಾಯಿಸಿ ಸುದ್ದಿಗೋಷ್ಠಿ ಎಚ್ಚರಿಕೆ