ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಥಲಸ್ಸೆಮಿಯಾ ರೋಗಿಗಳಿಗೆ ಎಚ್‌ಎಲ್‌ಎ ಪರೀಕ್ಷಾ ಶಿಬಿರ

KannadaprabhaNewsNetwork |  
Published : Jun 05, 2025, 02:14 AM IST
4ಎಚ್‌ಎಲ್ಎ | Kannada Prabha

ಸಾರಾಂಶ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಒನ್ ಗುಡ್ ಸ್ಟೆಪ್ ಫೌಂಡೇಶನ್ ಸಹಯೋಗದೊಂದಿಗೆ, ಪ್ರತಿ 3 - 4 ವಾರಗಳಿಗೊಮ್ಮೆ ಜೀವಮಾನವಿಡೀ ರಕ್ತ ವರ್ಗಾವಣೆಯ ಅಗತ್ಯವಿರುವ ಆನುವಂಶಿಕ ರಕ್ತ ಅಸ್ವಸ್ಥತೆಯಾದ ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಬೆಂಬಲ ನೀಡಲು ಎಚ್ಎಲ್ಎ. (ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್) ಟೈಪಿಂಗ್ ಪರೀಕ್ಷಾ ಶಿಬಿರ ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಮಣಿಪಾಲಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಒನ್ ಗುಡ್ ಸ್ಟೆಪ್ ಫೌಂಡೇಶನ್ ಸಹಯೋಗದೊಂದಿಗೆ, ಪ್ರತಿ 3 - 4 ವಾರಗಳಿಗೊಮ್ಮೆ ಜೀವಮಾನವಿಡೀ ರಕ್ತ ವರ್ಗಾವಣೆಯ ಅಗತ್ಯವಿರುವ ಆನುವಂಶಿಕ ರಕ್ತ ಅಸ್ವಸ್ಥತೆಯಾದ ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಬೆಂಬಲ ನೀಡಲು ಎಚ್ಎಲ್ಎ. (ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್) ಟೈಪಿಂಗ್ ಪರೀಕ್ಷಾ ಶಿಬಿರ ಆಯೋಜಿಸಿತು. ಈ ಶಿಬಿರ ಥಲಸ್ಸೆಮಿಯಾ ಮತ್ತು ಇತರ ಅನೇಕ ರಕ್ತ ಅಸ್ವಸ್ಥತೆಗಳಿಗೆ ಏಕೈಕ ಚಿಕಿತ್ಸಕ ಆಯ್ಕೆಯಾದ ಮೂಳೆ ಮಜ್ಜೆಯ ಕಸಿಗೆ ಸಂಭಾವ್ಯ ದಾನಿಗಳನ್ನು ಗುರುತಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿತ್ತು. ಎಚ್ಎಲ್ಎ ಟೈಪಿಂಗ್ ಒಂದು ದುಬಾರಿ ಪರೀಕ್ಷೆಯಾಗಿದ್ದು, ಅದರ ವೆಚ್ಚವನ್ನು ಬೆಂಗಳೂರು ಮೂಲದ ಅಮಿತಾ ಪೈ ಸ್ಥಾಪಿಸಿದ ಒನ್ ಗುಡ್ ಸ್ಟೆಪ್ ಫೌಂಡೇಶನ್ ಭರಿಸಿತ್ತು.ಈ ಸಂದರ್ಭ ಮಾತನಾಡಿದ ಮಕ್ಕಳ ರಕ್ತ ಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸ್ವಾತಿ ಪಿ.ಎಂ., ಮೂಳೆ ಮಜ್ಜೆಯ ಕಸಿಗೆ ಸಂಭಾವ್ಯ ದಾನಿಗಳನ್ನು ಗುರುತಿಸುವಲ್ಲಿ ಎಚ್ಎಲ್ಎ ಟೈಪಿಂಗ್ ಪರೀಕ್ಷೆ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು

ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಎಮಿನ್ ಎ. ರಹಿಮಾನ್ ಅವರು ಥಲಸ್ಸೆಮಿಯಾ ಮತ್ತು ಐರನ್ ಚೆಲೇಷನ್ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ಅವಲೋಕನವನ್ನು ನೀಡಿದರು.ಸಹ ಪ್ರಾಧ್ಯಾಪಕಿ ಡಾ. ಅರ್ಚನಾ ಎಂ.ವಿ., ಮೂಳೆ ಮಜ್ಜೆಯ ಕಸಿಗೆ ಒಳಗಾಗುವ ರೋಗಿಗಳಿಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿರುವ ಆರ್ಥಿಕ ಸಹಾಯದ ಕುರಿತು ಮಾತನಾಡಿದರು. ಮಕ್ಕಳ ಚಿಕಿತ್ಸೆಗಾಗಿ ಮೂಳೆ ಮಜ್ಜೆಯ ಕಸಿ ಮಾಡಿಸಿಕೊಳ್ಳಲು ಬಯಸುವ ಸಂಭವನೀಯ 12 ಕುಟುಂಬಗಳಿಂದ 30 ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ತಿಳಿಸಿದ್ದಾರೆ.ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಥಲಸ್ಸೆಮಿಯಾ ರೋಗಿಗಳಿಗೆ ಸಮಗ್ರ ಆರೈಕೆ ನೀಡುತ್ತದೆ, ಇದರಲ್ಲಿ ಸುರಕ್ಷಿತ ರಕ್ತ ವರ್ಗಾವಣೆಗಾಗಿ ಡೇ-ಕೇರ್ ಸೌಲಭ್ಯ, ಬಹುಶಿಸ್ತೀಯ ಆರೈಕೆ, ಪ್ರಸವಪೂರ್ವ ತಪಾಸಣೆ, ಥಲಸ್ಸೆಮಿಯಾ ಮಕ್ಕಳ ಜನನವನ್ನು ತಡೆಗಟ್ಟಲು ಪ್ರಸವಪೂರ್ವ ಪರೀಕ್ಷೆ ಮತ್ತು ಮೂಳೆ ಮಜ್ಜೆಯ ಕಸಿ ಸೇರಿವೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ