ಶಿರಸಿ: ಪ್ರತಿವರ್ಷ ಚೈತ್ರ ಶುದ್ಧ ಹುಣ್ಣಿಮೆಯಂದು ನಡೆಯುವ ತಾಲೂಕಿನ ಮಂಜಗುಣಿ ವೆಂಕಟ್ರಮಣ ದೇವರ ವಾರ್ಷಿಕ ಮಹಾರಥೋತ್ಸವವು ಮಂಗಳವಾರ ಸಡಗರದಿಂದ ನಡೆಯಿತು.
ಭಕ್ತರು ರಥಕ್ಕೆ ಬಾಳೆಹಣ್ಣು, ನೆನೆಸಿದ ಹಸಿಕಡಲೆ ಕಾಳುಗಳನ್ನು ಎರಚಿ ತಮ್ಮ ಹರಕೆ ನೆರವೇರಿಸಿದರು.ರಥಬೀದಿಯಲ್ಲಿ ಸಂಚರಿಸಿ ಮರಳಿ ಸ್ವಸ್ಥಾನಕ್ಕೆ ಬಂದ ರಥಾರೂಢ ವೆಂಕಟ್ರಮಣ ದೇವರ ದರ್ಶನವನ್ನು ಭಕ್ತರು ಸರತಿಯ ಸಾಲಿನಲ್ಲಿ ನಿಂತು ರಥವೇರಿ ಪಡೆದರು. ರಥೋತ್ಸವದ ಸಂದರ್ಭದಲ್ಲಿ ನಡೆಸುವ ಶಿಶುಪೂಜೆ, ಫಲ ಸಮರ್ಪಣೆ, ವಿವಿಧ ಬೆಳೆಗಳ ಸಮರ್ಪಣೆ ಇತ್ಯಾದಿ ವಿವಿಧ ಹರಕೆಗಳನ್ನೂ ಸಹ ಭಕ್ತರು ಸಮರ್ಪಿಸಿದರು.ಸಂಭ್ರಮದ ವೆಂಕಟರಮಣ ದೇವರ ಬ್ರಹ್ಮರಥೋತ್ಸವ
ಅಂಕೋಲಾ: ತಾಲೂಕಿನ ದೊಡ್ಡ ದೇವರೆಂದೆ ಪ್ರಸಿದ್ಧಿಯಾದ ವೆಂಕಟರಮಣ ದೇವರ ಬ್ರಹ್ಮರಥೋತ್ಸವವು ಮಂಗಳವಾರ ಹನುಮ ಜಯಂತಿಯ ದಿನದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಯುಗಾದಿ ಹಬ್ಬದ ಪಾಡ್ಯ ಮಿತಿಯಿಂದಲೇ ರಥೋತ್ಸವದ ಪ್ರಯುಕ್ತ ವೆಂಕಟರಮಣ ದೇವಸ್ಥಾನದಲ್ಲಿ ಅನೇಕ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತದೆ.ಬ್ರಹ್ಮ ರಥೋತ್ಸವದ ಮೊದಲ ದಿನ ಪುಷ್ಪ ರಥೋತ್ಸವ ಸಣ್ಣ ತೇರು ಉತ್ಸವ ನಡೆಯುವುದು ಇಲ್ಲಿಯ ಸಂಪ್ರದಾಯ. ತಾಲೂಕಿನ ಸುತ್ತಲಿನ ಹಳ್ಳಿಹಳ್ಳಿಗಳಿಂದ ಹಾಗೂ ಹೊರ ತಾಲೂಕಿನಿಂದ ಜನರು ಆಗಮಿಸಿ ಹನುಮ ಜಯಂತಿಯಂದು ನಡೆಯುವ ಡೊಡ್ಡ ತೇರು ಬ್ರಹ್ಮರತೋತ್ಸವದಲ್ಲಿ ಪಾಲ್ಗೊಂಡರು.ಮಧ್ಯಾಹ್ನದಿಂದಲೆ ರಥದ ಮೇಲೆ ವಿರಾಜಮನವಾಗಿರುವ ವೆಂಕಟರಮಣ ದೇವರಿಗೆ ಭಕ್ತರು ರಥವನ್ನೇರಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ರಥದ ಸುತ್ತಲು ಸುಂದರವಾದ ಕಲಾಕೃತಿಗಳಿದ್ದು, ಬಾಳೆಹಣ್ಣಿನ ಗೊನೆ ಹೂವು ಮತ್ತು ತೆಂಗಿನಕಾಯಿ ಪತಾಕೆಗಳಿಂದ ಸುಂದರವಾಗಿ ಶೃಂಗರಿಸಿದ ಬ್ರಹ್ಮರಥ ಭಕ್ತರ ಜಯ ಘೋಷದೊಂದಿಗೆ ರಥ ಎಳೆದು ಸಂಭ್ರಮಪಟ್ಟರು.ರಥಬೀದಿಯಿಂದ ಎಳೆದು ತಂದು ಕಾರವಾರ ರಸ್ತೆ ಮೂಲಕ ದುರ್ಗಾದೇವಿಯ ದೇವಸ್ಥಾನದ ಎದುರಿಗೆ ರಥಕ್ಕೆ ಅಗ್ರ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೆರೆದ ಸಹಸ್ರಾರು ಭಕ್ತರು ಬಾಳೆಹಣ್ಣು, ಹಸಿಗಡಲೆ ಹಾಗೂ ನಾಣ್ಯಗಳನ್ನು ರಥಕ್ಕೆ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು.