ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಚುನಾವಣೆ ನಡೆದು ಸಂಘದ ಅಧ್ಯಕ್ಷ ಸ್ಥಾನಕ್ಕೆ ಎಂ. ಈ. ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೀರಭದ್ರಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಪದ್ಮನಾಭ ಅವರು ಅವಿರೋಧ ಆಯ್ಕೆ ಘೋಷಿಸಿದರು.
ಚುನಾವಣೆಯಲ್ಲಿ ಸಂಘದ ನಿರ್ದೇಶಕರಾದ ಎಂ.ಲಿಂಗಪ್ಪ, ಸಿ.ಮಹೇಂದ್ರ, ವೀರಭದ್ರ ನಾಯಕ, ಕಾಗಲವಾಡಿ ಬಸವಣ್ಣ, ಆರ್. ರಾಜೇಂದ್ರ, ವೈ.ಕೆ.ಮೊಳೆ ಬಸವರಾಜು, ಹೊಸೂರು ರಾಜು, ರಾಮಸಮುದ್ರ ಬಾಬು, ಎಂ.ಜಿ.ಶ್ರೀಕಾಂತ್ ಪಾಲ್ಗೊಂಡಿದ್ದರು.ನೂತನ ಅಧ್ಯಕ್ಷ ಎಂ.ಈ. ಮಂಜುನಾಥ್ ಮಾತನಾಡಿ, ‘ಸಂಘದ ನಿರ್ದೇಶಕರು ಮತ್ತು ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ಸಂಘದ ಸದಸ್ಯರು ಮತ್ತು ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿವೇಶನ ಕೊಡಿಸಲು ಶ್ರಮಿಸುತ್ತೇನೆ ಎಂದರು.
ಇದೇ ಸಂದರ್ಭದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು, ಖಜಾಂಚಿ ಆರ್.ಸಿ.ಪುಟ್ಟರಾಜು, ಉಪಾಧ್ಯಕ್ಷರಾದ ಬದನಗುಪ್ಪೆ ಪ್ರಸಾದ್, ಹಿರಿಯ ಪತ್ರಕರ್ತರಾದ ಎ.ಡಿ.ಸಿಲ್ವಾ, ಬನಶಂಕರ ಆರಾಧ್ಯ, ಫಾಲಲೋಚನ ಆರಾಧ್ಯ, ವಿಜಯ ಕುಮಾರ್, ಬಿಳಿಗಿರಿ ಶ್ರೀನಿವಾಸ್, ಎಚ್.ಎಸ್. ಚಂದ್ರಶೇಖರ್, ಸಿದ್ದಪ್ಪಾಜಿ, ಪ್ರಮೋದ್ ಇತರರಿದ್ದರು.
20ಸಿಎಚ್ಎನ್14