ಚಳ್ಳಕೆರೆ: ಕಾಂಗ್ರೆಸ್ ಕರ್ನಾಟಕ ಕಾರ್ಮಿಕ ಮಂಡಳಿ ಉಪಾಧ್ಯಕ್ಷ ಹಾಗೂ ರಾಜ್ಯ ಪೌರಸೇವಾ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಹಿರಿಯೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದನ್ನು ಭಾರತೀಯ ಜನತಾ ಪಕ್ಷ ಖಂಡಿಸಿದೆ. ಜಿ.ಎಸ್.ಮಂಜುನಾಥ ಬಹಿರಂಗ ಕ್ಷಮಾಪಣೆ ಕೇಳದೇ ಇದ್ದಲ್ಲಿ ಅವರ ಮನೆಯ ಮುಂದೆ ಮಂಜುನಾಥ ಹಠಾವೋ ಚಳುವಳಿ ಆರಂಭಿಸುವುದಾಗಿ ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ತಿಳಿಸಿದರು.
ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಎಂದೂ ಕಾಣದಂತಹ ಅಭೂತಪೂರ್ವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ವಿಶ್ವಸಂಸ್ಥೆಯ ನಾಯಕರಾಗಿ ನರೇಂದ್ರ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಬೇಕಾದ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಉಜ್ವಲ ಯೋಜನೆ ಮೂಲಕ ಸುಮಾರು 10 ಕೋಟಿಗೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಮನೆಯಲ್ಲಿ ಗ್ಯಾಸ್ ಉಪಯೋಗಿಸಿ ಅಡುಗೆ ಮಾಡಿಕೊಳ್ಳಲು ಅನುಕೂಲ ಮಾಡಿದ್ದಾರೆ. ಭಾರತವನ್ನು ವಿರೋಧಿಸುವ ರಾಷ್ಟ್ರಗಳು ಇಂದು ನರೇಂದ್ರ ಮೋದಿ ಅವರ ಪ್ರಭಾವದಿಂದ ಭಾರತದ ಸ್ನೇಹ ಬಯಸಿ ಬರುತ್ತಿದ್ದಾರೆ. ರಾಷ್ಟ್ರದಲ್ಲಿ ಹೊಸ, ಹೊಸ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ನಿರ್ಮಾಣ, ಬಾಹ್ಯಾಕಾಶ ಕ್ಷೇತ್ರದಲ್ಲೂ ಸಹ ಚಂದ್ರಯಾನದ ಮೂಲಕ ಖ್ಯಾತಿಗಳಿಸಿದ್ದಾರೆ. ಇಂತಹ ಪ್ರಧಾನ ಮಂತ್ರಿ ಅವರ ಕೊಡುಗೆ ಬಗ್ಗೆ ಪರಿಜ್ಞಾನವಿಲ್ಲದೆ ಮಂಜುನಾಥ ಅವ್ಯಾಚ ಶಬ್ದಗಳಿಂದ ನಿಂತಿಸಿರುವುದು ಸರಿಯಲ್ಲ. ಕೂಡಲೇ ಅವರು ಕ್ಷಮಾಪಣೆ ಕೇಳದೇ ಇದ್ದಲ್ಲಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮ ದಾಸ್, ಬಿಜೆಪಿ ಮುಖಂಡ ಜೆ.ಪಿ.ಜಯಪಾಲಯ್ಯ, ಟಿ.ಮಂಜುನಾಥ, ಈಶ್ವರನಾಯಕ, ತಿಪ್ಪೇಶ್, ಹೊಸಮನೆ ಮನೋಜ್, ಜಗದಾಂಭ, ಕಾಟಪ್ಪನಹಟ್ಟಿ ವೀರೇಶ್, ಹೊಟ್ಟಪ್ಪನಹಳ್ಳಿಕಾಂತರಾಜ್, ಪಾಲನೇತ್ರ ನಾಯಕ, ಆರ್.ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.