ಕುಲ ಕಸುಬಿನಿಂದಾಗಿ ಅನೇಕ ಜಾತಿಳಿಗೆ ಹಿನ್ನಡೆ

KannadaprabhaNewsNetwork |  
Published : Apr 13, 2025, 02:05 AM IST
ಶಿವಮೊಗ್ಗದಲ್ಲಿ ವಿವಿಧ  ಹಿಂದುಳಿದ ವರ್ಗಗಳ ಸಂಘಟನೆಗಳ ವತಿಯಿಂದ ‘ಕಾಂತ ರಾಜ್ ಆಯೋಗರ ವರದಿ ಹಿನ್ನೆಲೆ ಮುನ್ನೆಲೆ ಹಿಂದುಳಿದ ವರ್ಗಗಳಿಗಿರುವ ಸವಾಲು ಮತ್ತು ಜವಾಬ್ದಾರಿಗಳು ಕುರಿತ ವಿಚಾರ ಸಂಕಿರಣ ಮತ್ತು ಸಾರ್ವಜನಿಕ ಸಂವಾದ’ ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಮೊಗ್ಗ: ಕುಲ ಕಸುಬನ್ನು ಗೌರವಿಸಿದ ಸ್ಥಿತಿಯಿಂದಾಗಿ ಬಹುತೇಕ ಸಮಾಜದ ಜನರಲ್ಲಿ ಆತ್ಮವಿಶ್ವಾಸವೇ ಇಲ್ಲದಂತಾಗಿದ್ದು, ವ್ಯವಸ್ಥೆಯ ದುರಂತವಾಗಿದೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ವಿಷಾದಿಸಿದರು.

ಶಿವಮೊಗ್ಗ: ಕುಲ ಕಸುಬನ್ನು ಗೌರವಿಸಿದ ಸ್ಥಿತಿಯಿಂದಾಗಿ ಬಹುತೇಕ ಸಮಾಜದ ಜನರಲ್ಲಿ ಆತ್ಮವಿಶ್ವಾಸವೇ ಇಲ್ಲದಂತಾಗಿದ್ದು, ವ್ಯವಸ್ಥೆಯ ದುರಂತವಾಗಿದೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ವಿಷಾದಿಸಿದರು.

ಹಿಂದುಳಿದ ಜನಜಾಗೃತಿ ವೇದಿಕೆ, ಹಿಂದುಳಿದ ಜಾತಿಗಳ ಒಕ್ಕೂಟ, ಅಖಿಲ ಕರ್ನಾಟಕ ಹಿಂದುಳಿದ ವರ್ಗಗಳು ಮತ್ತು ಅತೀ ಹಿಂದುಳಿದ ವರ್ಗಗಳ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಶನಿವಾರ ‘ಕಾಂತ ರಾಜ್ ಆಯೋಗರ ವರದಿ ಹಿನ್ನೆಲೆ ಮುನ್ನೆಲೆ ಹಿಂದುಳಿದ ವರ್ಗಗಳಿಗಿರುವ ಸವಾಲು ಮತ್ತು ಜವಾಬ್ದಾರಿಗಳು ಕುರಿತ ವಿಚಾರ ಸಂಕಿರಣ ಮತ್ತು ಸಾರ್ವಜನಿಕ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಾತಿ ಮತ್ತು ಕುಲ ಕಸುಬಿನಿಂದಾಗಿ ಅನೇಕ ಸಮುದಾಯಗಳು ಹಿಂದುಳಿಯುವಂತಾಯಿತು. ಕುಲ ಕಸುಬನ್ನು ಗೌರವಿಸಿದರಿಂದ ಪರಿಸ್ಥಿತಿ ಹೀಗಾಯಿತು ಎಂದರು.ಸಾಮಾಜಿಕ ನ್ಯಾಯವೆಂದರೆ ಮೀಸಲಾತಿ ಮಾತ್ರವಲ್ಲ. ಬಹಳಷ್ಟು ಕಾರ್ಯಕ್ರಮಗಳು ಇವೆ. ಮೀಸಲಾತಿ ಶೇ.50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆಯಾದರೂ ಸಂವಿಧಾನ ಮಾತ್ರ ಎಲ್ಲೂ ಕೂಡ ಶೇ.50 ಮೀರಬಾರದು ಎಂದು ಹೇಳಿಲ್ಲ ಎಂದು ಪ್ರತಿಪಾದಿಸಿದರು.ಈ ನಡುವೆಯೇ ಸುಪ್ರಿಂಕೋರ್ಟ್ ದತ್ತಾಂಶಗಳನ್ನು ಸಂಗ್ರಹ ಮಾಡುವಂತೆ ಹೇಳಿತ್ತು ಎಂದರು. ಅತೀ ಸಣ್ಣ ಸಮುದಾಯ, ಬುಡಕಟ್ಟುಗಳಿರುವ ಜಿಲ್ಲೆಗಳ ಪೈಕಿ ಶಿವಮೊಗ್ಗವೂ ಒಂದಾಗಿದೆ. ಇಲ್ಲಿರುವ ಇಂತಹ ಸಮುದಾಯಗಳಿಗೆ ಇದುವರೆಗೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ನ್ಯಾಯ ಕೊಡುವ ಸಲುವಾಗಿಯೇ ಈ ಗಣತಿ ಅತೀ ಮುಖ್ಯವಾಗಿದೆ ಎಂದು ಹೇಳಿದರು.

ಮಾಜಿ ವಿಧಾನಪರಿಷತ್‌ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ಎಲ್.ಜಿ.ಹಾವನೂರು ವರದಿ ಕೂಡ ಸುಲಭವಾಗಿ ಬರಲಿಲ್ಲ. ಅದೇ ರೀತಿ ಪರಿಸ್ಥಿತಿ ಕಾಂತರಾಜ್ ವರದಿ ಬಿಡುಗಡೆಯಲ್ಲಿಯೂ ಇದೆ. ಈಗ ಗೊಂದಲಕ್ಕೆ ಒಳಗಾಗಿರುವುದು ಸಮೀಕ್ಷೆಯೋ ಅಥವಾ ಗಣತಿಯೋ ಎಂಬುದು ಚರ್ಚೆಯ ವಿಷಯವಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಕೊಡುವ ಬಗ್ಗೆ ಸಂವಿಧಾನದಲ್ಲಿಯೇ ಸ್ಪಷ್ಟವಾಗಿಯೇ ಇದೆ ಎಂದರು.ಇದು ಜಾತಿ ಗಣತಿಯಲ್ಲ, ಸಮೀಕ್ಷೆ. ಇದು ಸಾಂದರ್ಭಿಕ ಸಮೀಕ್ಷೆಯೇ ಹೊರತು ಇದೇ ಅಂತಿಮವಲ್ಲ. ಗಣತಿ ಮಾಡಲು ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಸಾಮಾಜಿಕ ನ್ಯಾಯ ಕಟ್ಟಕಡೆಯ ಸಮುದಾಯಗಳಿಗೆ ಸಿಕ್ಕಿಲ್ಲ. ಅದನ್ನು ಕೊಡುವ ಸಲುವಾಗಿ ವರದಿ ಜಾರಿಯಾಗಬೇಕಿದೆ. ಆದರೆ ಏಳು ವರ್ಷ ಕಳೆದರೂ ವರದಿ ಬಿಡುಗಡೆಯಾಗಲಿಲ್ಲ. ಸುಲಭವಾಗಿ ಈ ವರದಿ ಸ್ವೀಕಾರ ಕೂಡ ಆಗಿಲ್ಲ. ಈ ಸಂಬಂಧ ಸಾಕಷ್ಟು ಹೋರಾಟ ಕೂಡ ನಡೆಸಲಾಯಿತು. ಅಧ್ಯಕ್ಷರ ಮೇಲೆ ಒತ್ತಡ ಹೇಗೆ ಇರುತ್ತದೆ ಎಂದರೆ ಮೂರು ವರ್ಷ ಅಧ್ಯಯನ ಮಾಡಿದ ಬಳಿಕವೂ ಕಾರ್ಯದರ್ಶಿ ಸಹಿ ಮಾಡಿಲ್ಲ ಎಂದು ಹೇಳಲಾಗಿತ್ತು. ಇದೆಲ್ಲವೂ ಒತ್ತಡದ ತಂತ್ರದ ಭಾಗವೇ ಆಗಿತ್ತು. ಅದೇನೆ ಇದ್ದರೂ ರಾಜ್ಯ ಸರ್ಕಾರ ಈ ವರದಿ ಜಾರಿಗೆ ತರಲೇಬೇಕಿದೆ ಎಂದು ಹೇಳಿದರು.ಪ್ರಸ್ತುತ ಹಿಂದುಳಿದವರ್ಗದವನೊಬ್ಬ ಶಾಸಕನಾಗುತ್ತೇನೆಂದು ಧೈರ್ಯವಾಗಿ ಹೇಳುವ ಯಾವುದೇ ವಾತಾವರಣವಿಲ್ಲ. ಸೋಷಿಯಲ್ ಎಂಜಿನಿಯರಿಂಗ್‌ನಿಂದ ಸೋಷಿಯಲ್ ಜಸ್ಟೀಸ್ ಸಿಕ್ಕುತ್ತಿದೆಯಾ ಎನ್ನುವುದನ್ನು ಚಿಂತಿಸಬೇಕಿದೆ ಎಂದರು.ಎಚ್.ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ನಾಯಕರಾದ ವಿ.ರಾಜು, ತೀ.ನಾ.ಶ್ರೀನಿವಾಸ್, ವರಲಕ್ಷ್ಮೀ, ಆರ್.ಮೋಹನ್, ಅಣ್ಣಪ್ಪ ಕೋಟೆ, ಅಬೀಬುಲ್ಲಾ, ನಗರ ಮಹಾದೇವಪ್ಪ, ಆರ್‌.ಟಿ.ನಟರಾಜ ಮತ್ತಿತರರು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ