ಉಡುಪಿಯ ರಾಜ್ಯ ಮಹಿಳಾ ನಿಲಯದಲ್ಲಿ ಇಬ್ಬರು ಹಣ್ಣುಮಕ್ಕಳಿಗೆ ಅದ್ಧೂರಿ ವಿವಾಹ
ಇನ್ನೊಬ್ಬ ಯುವತಿ ಮಲ್ಲೇಶ್ವರಿ ಈಗ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ, ಅವರನ್ನು ಎಂಕಾಂ ಮಾಡಿ ಬೆಂಗಳೂರಿನ ಬಿಬಿಎಂ ಕಂಪನಿಯಲ್ಲಿ ಉದ್ಯೋಗದಲ್ಲಿರುವ, ದ.ಕ. ಜಿಲ್ಲೆಯ ಬಪ್ಪನಾಡಿನ ಸಂಜಯ ಪ್ರಭು ಅವರು ವರಿಸಿದ್ದಾರೆ, ಮಾತ್ರವಲ್ಲ ಪತ್ನಿಯ ಮುಂದೆಯೂ ಓದಿನ ಜವಾಬ್ದಾರಿಯನ್ನೂ ಆತ ಹೊತ್ತುಕೊಂಡಿದ್ದಾರೆ.ಈ ಮಹಿಳಾ ನಿಲಯದ ಇತರ ನಿವಾಸಿಗಳು ಸಂಭ್ರಮದಿಂದ ತಮ್ಮ ಗೆಳತಿಯರ ಮದುವೆಗಾಗಿ ಇಡೀ ನಿಲಯವನ್ನೇ ಹೂವು ಮತ್ತು ರಂಗೋಲಿಗಳಿಂದ ಸಿಂಗರಿಸಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸ್ವತಃ ಮದುವೆಗೆ ಬಂದವರನ್ನು ಸ್ವಾಗತಿಸುತಿದ್ದರು.
ಮಂಗಳ ವಾದ್ಯಘೋಷಗಳೊಂದಿಗೆ ಆಹ್ಪಾನಿತ ಗಣ್ಯರ ಸಮ್ಮುಖದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರೇ ಧಾರೆ ಎರೆದು, ಕನ್ಯಾದಾನ ಮಾಡಿದರು, ನಂತರ ನವ ವಿವಾಹಿತ ದಂಪತಿಗಳಿಗೆ ಆರತಿಯನ್ನೂ ಬೆಳಗಿ ಶುಭ ಹಾರೈಸಿದರು. ಡಿವೈಎಸ್ಪಿ ಪ್ರಭು, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಮತ್ತು ನಿರೂಪಣಾಧಿಕಾರಿ ಅನುರಾಧ ಹಾದಿಮನಿ ಅವರು ವಧುಗಳ ಹಿರಿಯರ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದರು.ಜಿ.ಪಂ. ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿ, ನಿವಾಸಿನಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಮತ್ತಿತರರು ಇದ್ದರು.ಜಿಲ್ಲಾಡಳಿತದ ವತಿಯಿಂದ ನಿಯಮದಂತೆ ನವದಂಪತಿಗಳ ಹೆಸರಿನಲ್ಲಿ ತಲಾ 50 ಸಾವಿರ ರು.ಗಳನ್ನು ಠೇವಣಿಯಾಗಿಡಲಾಗಿದೆ. ಈ ಎರಡು ಮದುವೆಗಳೊಂದಿಗೆ ಈ ಮಹಿಳಾ ನಿಲಯದಲ್ಲಿ ನಡೆದ ಅನಾಥ ಯುವತಿಯರ ಮದುವೆಗಳ ಸಂಖ್ಯೆ 27 ಆಗಿದೆ ಎಂದು ನಿಯದ ಅಧಿಕ್ಷಕಿ ಪುಷ್ಪಾರಾಣಿ ಹೇಳಿದ್ದಾರೆ.
..........ಇಲ್ಲಿನ ಯುವತಿಯರಿಗೀಗ ಭಾರಿ ಬೇಡಿಕೆ
ಇತ್ತೀಚೆಗೆ ಕೃಷಿಕರಿಗೆ ಅಥವಾ ಸಾಧಾರಣ ಉದ್ಯೋಗದಲ್ಲಿರುವ ಯುವಕರಿಗೆ ಮುಖ್ಯವಾಗಿ ಬ್ರಾಹ್ಮಣ ಸಮುದಾಯದಲ್ಲಿ ಮದುವೆಗೆ ಹೆಣ್ಣುಗಳು ಸಿಗದ ಹಿನ್ನೆಲೆಯಲ್ಲಿ, ಅಂತಹ ಯುವಕರು ಉಡುಪಿ ಈ ಮಹಿಳಾ ನಿಲಯದ ಯುವತಿಯರನ್ನು ಮದುವೆಯಾಗುವುದಕ್ಕೆ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಾನೂನು ಪ್ರಕ್ರಿಯೆಗಳ ಮೂಲಕ ಅವರ ಹಿನ್ನೆಲೆಯನ್ನು ಪರಿಶೀಲಿಸಿ, ನಿಲಯದ ಯುವತಿಯರು ಒಪ್ಪಿದರೆ ಮದುವೆ ಮಾಡಿಸಲಾಗುತ್ತಿದೆ. ಪ್ರಸ್ತುತ ಉಡುಪಿ ರಾಜ್ಯ ನಿಲಯದಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ 53 ಮಂದಿ ನಿವಾಸಿಗಳಿದ್ದಾರೆ. ಅವರಿಗೆ ಸರ್ಕಾರದ ಯೋಜನೆಗಳಡಿ ಶಿಕ್ಷಣ, ಕೌಶಲಾಭಿವೃದ್ಧಿ ತರಬೇತಿ. ಉದ್ಯೋಗಗಳನ್ನು ಓದಗಿಸಿಕೊಡಲಾಗುತ್ತಿದೆ. ಇಲ್ಲಿನ ನಾಲ್ವರು ಯುವತಿಯರು ಕಾಲೇಜಿಗೂ ಹೋಗುತ್ತಿದ್ದಾರೆ, ಅವರ ಸಂಬಂಧಿಕರು ಪತ್ತೆಯಾದರೆ ಮತ್ತೆ ಕುಟುಂಬದೊಂದಿಗೆ ಸೇರ್ಪಡೆ ಮಾಡಲಾಗುತ್ತದೆ.