- ರವೀಂದ್ರ ಅರಳುಗುಪ್ಪಿ ಏಕವ್ಯಕ್ತಿ ಅಭಿನಯಕ್ಕೆ ಮಾರುಹೋದ ಪ್ರೇಕ್ಷಕರು
ನಗರದ ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಸಂಜೆ ಹನ್ಮಂತ್ ಪೂಜಾರ್ ರಚಿಸಿದ ಹುತಾತ್ಮರು ಏಕವ್ಯಕ್ತಿ ನಾಟಕವು ಹೀಗೆ ನೋಡುಗರನ್ನು ಸೆಳೆದಿಟ್ಟರೆ, ಬಹುಮುಖ ಪ್ರತಿಭೆಯಾದ ರವೀಂದ್ರ ಅರಳಗುಪ್ಪಿ ಅಭಿನಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಅನ್ವೇಷಕರ್ ಆರ್ಟ್ ಫೌಂಡೇಷನ್ನಿಂದ ಅನ್ವೇಷಕರು ರಂಗಯಾತ್ರೆ ಭಾಗವಾಗಿ ಈಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜ ನಗರ ಇತರೆಡೆ ಪಿಯು ಕಾಲೇಜುಗಳ ಪಠ್ಯ ಆದರಿಸಿದ ನಾಟಕಗಳ ಮೂಲಕ ತನ್ನದೇ ಹೆಜ್ಜೆ ಗುರುತು ಮೂಡಿಸುತ್ತಿದೆ. ಇದೀಗ ದಾವಣಗೆರೆಯಲ್ಲಿ ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನದ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಹಿರಿಯ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಉದ್ಘಾಟಿಸಿ, ತಂಡದ ಪ್ರಯತ್ನಕ್ಕೆ ಶುಭಾರೈಸಿದರು. ಹಿರಿಯ ವಿಚಾರವಾದಿ, ಪ್ರಾಧ್ಯಾಪಕ ಡಾ.ಎಚ್.ವಿಶ್ವನಾಥ, ಹಿರಿಯ ಪತ್ರಕರ್ತರಾದ ಬಾ.ಮ. ಬಸವರಾಜಯ್ಯ, ಬಿ.ಎನ್.ಮಲ್ಲೇಶ, ನಾಟಕ ರಚನೆಕಾರ ಹನ್ಮಂತ್ ಪೂಜಾರ್, ಎಸ್.ಎಸ್.ಸಿದ್ದರಾಜು ಇತರರು ಉದ್ಘಾಟನಾ ಸಮಾರಂಭದಲ್ಲಿದ್ದರು. ಕೊರೋನಾ ನಂತರ ಮತ್ತೆ ಸಂಸ್ಥೆ ತನ್ನ ಕಾರ್ಯ ಚಟುವಟಿಕೆ ಪುನಾರಂಭಿಸಿದ್ದು, ನಗರದಲ್ಲಿ ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನದ ಮೂಲಕ ಶುಭಾರಂಭ ಮಾಡಿದೆ.
- - -
-24ಕೆಡಿವಿಜಿ8: ಹುತಾತ್ಮರು ಏಕವ್ಯಕ್ತಿ ನಾಟಕದಲ್ಲಿ ರವೀಂದ್ರ ಅರಳಗುಪ್ಪಿ ಅಭಿನಯ. -24ಕೆಡಿವಿಜಿ9: ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನ ಉದ್ಘಾಟನೆಯಲ್ಲಿ ಡಾ. ಎಂ.ಜಿ.ಈಶ್ವರಪ್ಪ ಮಾತನಾಡಿದರು.