ಡಂಬಳ: ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ, ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ ಎಂದು ವಿರೂಪಾಪುರದ ಗುರು ಮುದಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಡಂಬಳ ಹೋಬಳಿಯ ಪೇಠಾಆಲೂರ ಗ್ರಾಮದ ಹಾಲೇಶ್ವರ 47ನೇ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ಸಾನಿಧ್ಯ ವಹಿಸಿ ಮಾತನಾಡಿದರು.ಇಂತಹ ದುಬಾರಿ ಸಮಯದಲ್ಲಿ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಬಹಳ ಕಷ್ಟದ ಕೆಲಸ. ಜೊತೆಗೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಮನಗಂಡು ತ್ರಿವಿಧ ದಾಸೋಹಿಗಳಾದ ಹಾಲೇಶ್ವರ ಶಿವಶರಣರು ಪ್ರತಿ ವರ್ಷ ಬಡವರಿಗಾಗಿ ಜಾತ್ರಾಮಹೋತ್ಸವದಲ್ಲಿ ಬಡವರ ಹಿತಕ್ಕಾಗಿ ಇಲ್ಲಿಯವರೆಗೆ 460ಕ್ಕೂ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿಸಿದ್ದು ಪ್ರಶಂಸನೀಯ ಎಂದು ಹೇಳಿದರು.
ತ್ರಿವಿಧ ದಾಸೋಹಿ ಹಾಲೇಶ್ವರ ಶಿವಶರಣರು ಮಾತನಾಡಿ, ವಧು–ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೆನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯ ಮಾಡಬೇಕು. ಇಂತಹ ಸಾಮಾಜಿಕ ಕಳಕಳಿಯೊಂದಿಗೆ ಭಕ್ತರ ಸಹಕಾರದಿಂದಾಗಿ ಜಾತ್ರಾಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಜರುಗಲು ಕಾರಣವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.ಈ ಸಂದರ್ಭದಲ್ಲಿ 10 ಜೋಡಿಗಳು ಕಂಕಣ ಭಾಗ್ಯ ಪಡೆದರು.
ಕಾರ್ಯಕ್ರಮದಲ್ಲಿ ಹಾಲೇಶ್ವರ ಮಠದ ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಚಂದ್ರು ನಾಗರಡ್ಡಿ, ನಾಗಪ್ಪ ಚಿಕರಡ್ಡಿ, ವೀರನಗೌಡ ಸುಳ್ಳದ, ಶರಣಪ್ಪ ಬೂತರಡ್ಡಿ, ಹಾಲೇಶ ಸೂಡಿ, ಶರಣಪ್ಪ ಪರಡ್ಡಿ, ಮುನಿಯಪ್ಪ ಯು, ಶರಣಪ್ಪ ಕೆಂಚನಗೌಡ, ತೋಟಪ್ಪ ಶಿವಸಟ್ಟರ, ಬಸಣ್ಣ ಗೌರಿ, ಗುರಪ್ಪ ತಳವಾರ, ಶರಣಪ್ಪ ಸಂಸಿ, ಫಕೀರಪ್ಪ ಡಂಬಳ, ರವಿ ಚಾಕಲಬ್ಬಿ, ಶರಣಪ್ಪ ಶಂಸಿ, ಸಿದ್ದಮ್ಮ ಸಂಸಿ, ಇರಮ್ಮ ತುರ್ಕಾಣಿ, ರೇಣವ್ವ ತುರ್ಕಾಣಿ, ಹುಲಗೇವ್ವ ಉಪ್ಪಾರ, ಶಾಂತಮ್ಮ ಮುಂಡಾಸ, ರೇಣವ್ವ ಬಾರಕೇರ, ಮಲ್ಲವ್ವ ಕುಂಟರ, ಜೇನಮ್ಮ ನಧಾಪ, ಮುದಕವ್ವ ಹೂಗಾರ, ಪಾರಮ್ಮ ಅರವಟ್ಟಿಗಿ, ಗ್ರಾಮದ ಹಿರಿಯರು, ಯುವಕರು, ಹಾಲೇಶ್ವರ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಜಾತ್ರಾ ಸಮಿತಿಯ ಸರ್ವಸದಸ್ಯರು ಇದ್ದರು.