ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನಲ್ಲಿ ಗುರುವಾರ ಎಚ್.ಕಡದಕಟ್ಟೆ ಗ್ರಾಪಂ ಕಚೇರಿಯಲ್ಲಿ ಆರ್ಟಿಐ ಮೂಲಕ ಎಲ್ಲಾ ಮಾಹಿತಿಗಳನ್ನು ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಅತಿವೃಷ್ಟಿ ಉಂಟಾದ ವೇಳೆ ಸರ್ಕಾರ ಪರಿಹಾರ ಘೋಷಣೆ ಮಾಡಿದಾಗ ಒಂದೇ ಕುಟುಂಬದವರು ಬಿದ್ದಿರುವ ಮನೆಗಳೇ ಬೇರೆ ಆದರೆ ಬೇರೆಯವರು ಬೇರೆ ಜಾಗದಲ್ಲಿ ಳೆದ ಬಿಜೆಪಿ ಸರ್ಕಾರದಲ್ಲಿ ಅತಿವೃಷ್ಟಿ ಉಂಟಾದ ವೇಳೆ ಸರ್ಕಾರ ಪರಿಹಾರ ಘೋಷಣೆ ಮಾಡಿದಾಗ ಒಂದೇ ಕುಟುಂಬದವರು ಬಿದ್ದಿರುವ ಮನೆಗಳು ಬೇರೆಯವರ ಹಾಗೂ ಬೇರೆ ಬೇರೆ ಜಾಗದಲ್ಲಿ ಫೋಟೋ ತೆಗೆಯಿಸಿ ಪರಿಹಾರ ಪಡೆಯುವ ಮೂಲಕ ಸರ್ಕಾರದ ಹಣ ಲೂಟಿ ಮಾಡಿದ್ದಾರೆ, ಇದರಲ್ಲಿ ಗ್ರಾಪಂ ಸದಸ್ಯರೊಬ್ಬರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡದೇ 5 ಲಕ್ಷ ರು. ಬಿಲ್ ಡ್ರಾ ಮಾಡಿಕೊಂಡು ಹಣ ಪಟಾಯಿಸಿದ್ದಾರೆ,ಮತ್ತೆ 14-15 ನೇ ಹಣಕಾಸು ಯೋಜನೆಯಲ್ಲಿ ಹಿಂದೂ ರುದ್ರಭೂಮಿ ಕಾಮಗಾರಿಗೆ ಅನುದಾನವನ್ನು ಡ್ರಾ ಮಾಡಿದ್ದಾರೆ, ಆದರೆ ಕಾಮಗಾರಿ ನಡೆದೇ ಇಲ್ಲ, ಮತ್ತೆ 15 ನೇ ಹಣಕಾಸಿನಲ್ಲಿ ಒದೊಂದು ಐ ಮಾಸ್ಟ್ ದೀಪದ ಕಂಬಕ್ಕೆ 1.95 ಲಕ್ಷ ಡ್ರಾ ಮಾಡಿದ್ದಾರೆ, ಆದರೆ ಅದರ ಮೂಲ ಬೆಲೆ ಕೇವಲ 40 ರಿಂದ 50 ಸಾವಿರ ಮಾತ್ರ ಎಂದು ದೂರಿದರು.
ಗೊತ್ತಿಲ್ಲದ ಹಾಗೇ ಮನೆ ಫೋಟೋ:
ಪಿಡಿಒ ಹೊನ್ನಪ್ಪ ಮಾತನಾಡಿ, 2022 ರಲ್ಲಿ ಹರಿಹರದಿಂದ ಇಲ್ಲಿಗೆ ವರ್ಗಾವಣೆ ಆಗಿ ಬಂದ ನಂತರ ನನಗೆ ಎಚ್.ಕಡದಕಟ್ಟೆ ಗ್ರಾಪಂಗೆ ಕಳುಹಿಸದೆ ಹೊನ್ನಾಳಿ ತಾಪಂನಲ್ಲೇ ಇರುವಂತೆ ಅಂದಿನ ಇಒ ಸೂಚಿಸಿದ್ದರು, ನಂತರ ಅಪಘಾತ ಆಗಿದ್ದರಿಂದ ನಾನು ರಜೆ ಮೇಲೆ ಹೋದೆ, ನಂತರ ಬಂದಾಗ ನನಗೆ ತಿಮ್ಲಾಪುರ ಗ್ರಾ.ಪಂ.ಗೆ ಪಿಡಿಒ ಆಗಿ ಹೋದೆ, ಆಗ ಮೂಲಸ್ಥಾನಗಳಿಗೆ ಹೋಗಬೇಕು ಎಂದು ಸರ್ಕಾರದ ಆದೇಶ ಬಂದ ನಂತರ ಮತ್ತೆ ಎಚ್,ಕಡದಕಟ್ಟೆಗೆ ಗ್ರಾಪಂಗೆ ಪಿಡಿಒ ಆಗಿ ಬಂದೆ, ಈಗ ಗ್ರಾಮಸ್ಥರು ಹಲವಾರು ಆರೋಪ ಮಾಡಿದ್ದಾರೆ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.