ಮ್ಯಾಟ್ರಿಕ್ ಮೇಳ ವಿದ್ಯಾರ್ಥಿಗಳಿಗೆ ಸಹಕಾರಿ

KannadaprabhaNewsNetwork |  
Published : Jan 18, 2026, 02:45 AM IST
17ಕೆಕೆಆರ್1:ಕುಕನೂರು ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2025 -26 ನೇ ಸಾಲಿನ ಪಿ ಎಂ ಶ್ರೀ ಕಾರ್ಯಕ್ರಮದಲ್ಲಿ ಮ್ಯಾಟ್ರಿಕ್ ಮೇಳ ಜರುಗಿತು.  | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಲು ಗಣಿತಾ ಚಟುವಟಿಕೆ ಮಾಡಲಾಗುತ್ತಿದೆ.

ಕುಕನೂರು: ವಿನೂತನ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪಠ್ಯ ವಿಷಯಗಳ ಚಟುವಟಿಕೆಗಳಿಂದ ವಿಶೇಷ ಜ್ಞಾನ ಸಂಪಾದನೆ, ಮಕ್ಕಳ ಬೌದ್ಧಿಕ ಮಟ್ಟ ದ್ವಿಗುಣವಾಗುವುದು ಎಂದು ಇಟಗಿ ಸರ್ಕಾರಿ ಆದರ್ಶ ವಿದ್ಯಾಲಯದ ಪ್ರಾಚಾರ್ಯ ರಾಮರಡ್ದೆಪ್ಪ ಹಾಲಕೇರಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2025 -26 ನೇ ಸಾಲಿನ ಪಿಎಂಶ್ರೀ ಕಾರ್ಯಕ್ರಮದಲ್ಲಿ ಮ್ಯಾಟ್ರಿಕ್ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ತಿಂಗಳು ಒಂದು ದಿನ ಶನಿವಾರ ಸಂಭ್ರಮ ಎಂದು ಬ್ಯಾಗ್ ಲೆಸ್ ಡೇ ಆಚರಿಸುವ ಮೂಲಕ ಆ ಕಾರ್ಯಕ್ರಮದಡಿಯಲ್ಲಿ ಇತರ ವಿಶೇಷವಾಗಿ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಜರುಗವವು. ಇದು ಮಕ್ಕಳಿಗೆ ಸಹಕಾರಿಯಾಗಲಿದೆ. ವ್ಯವಹಾರಿಕ ಜ್ಞಾನದ ಜತೆಗೆ ವಿಷಯದ ಬಗ್ಗೆ ಸಮಗ್ರ ಮಾಹಿತಿ ಮ್ಯಾಟ್ರಿಕ್ ಮೇಳಗಳು ಮಕ್ಕಳಿಗೆ ಬಹಳ ಅನುಕೂಲ ಎಂದರು.

ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಲು ಗಣಿತಾ ಚಟುವಟಿಕೆ ಮಾಡಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಹಾಗೂ ವ್ಯವಹಾರಿಕದಲ್ಲಿ ಕೂಡ ಗಣಿತದ ವಿಷಯದ ಪ್ರಭಾವ ಏನು ಎಂದು ಮಕ್ಕಳಿಗೆ ತಿಳಿವಳಿಕೆ ಮೂಡುತ್ತದೆ. ಈ ರೀತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಂಭ್ರಮ ಸಡಗರದಿಂದ ಭಾಗವಹಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಕರಾದ ಜಯಪ್ಪ ಕನಕಮ್ಮನವರ್, ಜಗದೀಶ ಅಜ್ಜಣ್ಣನವರ್, ರಂಗಪ್ಪ ಓಳೇಕರ್, ಬಸಮ್ಮ ಮೇಟಿ, ಶರಣಪ್ಪ ಬೊಮಳೇಕರ್, ನಾಗರಾಜ ಸೋಣದ, ರೋಹಿಣಿ, ಸಂತೋಷ ಕುಮಾರಿ, ವಿರೂಪಾಕ್ಷಪ್ಪ ಮ್ಯಾಲಿ, ಮಹೇಶ ರಾಮದುರ್ಗ, ಶ್ವೇತ ಹಳ್ಳಿ, ಶ್ರೀದೇವಿ ಬೆಳದಡಿ, ಮುರಾರಿ ಭಜಂತ್ರಿ, ರಮೇಶ ಕೆ.ಟಿ, ಶ್ವೇತ ಬನ್ನಿಕೊಪ್ಪ, ರಹಿಮಾನ್, ಬಸವರಾಜ ಸೋಣದ್, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಠದಲ್ಲಿ ಗುರುಶಾಂತವೀರ ಶ್ರೀಗಳ ಅಂತ್ಯಕ್ರಿಯೆ
ಸಿದ್ಧೇಶ್ವರ ಜಾತ್ರೆಯಲ್ಲಿ ಭಾರ ಎತ್ತುವ ಸ್ಪರ್ಧೆ