ಮಾನವ ಕುಲಕ್ಕೆ ಒಳಿತು ಬಯಸಿ ಮೌನ ಶಿವಯೋಗಾನುಷ್ಠಾನ

KannadaprabhaNewsNetwork |  
Published : Sep 06, 2024, 01:00 AM IST
ಪೋಟೊ-೫ ಎಸ್.ಎಚ್.ಟಿ. ೧ಕೆ-೫ ಎಸ್.ಎಚ್.ಟಿ. ೧ಕೆ-ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಮಹಾಸ್ವಾಮಿಗಳು ಕೈಗೊಂಡಿದ್ದ ಮೌನ ಶಿವಯೋಗಾನುಷ್ಠಾನ ಮಂಗಲ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟನೆ ಮಾಡಿದರು. | Kannada Prabha

ಸಾರಾಂಶ

ಜನರಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಅಶಾಂತಿ ತಾಂಡವ

ಶಿರಹಟ್ಟಿ: ಮಾನವ ಕುಲಕ್ಕೆ ಒಳಿತು ಆಗಬೇಕು. ರೈತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದು ಸಬಲರಾಗಬೇಕು ಎನ್ನುವ ಉದ್ದೇಶದಿಂದ ತಾಲೂಕಿನ ಬೆಳ್ಳಟ್ಟಿ, ಕೊಕ್ಕರಗುಂದಿ ಗ್ರಾಮದ ರಾಮಲಿಂಗೇಶ್ವರ ಮಠದ ಬಸವರಾಜ ಮಹಾಸ್ವಾಮಿಗಳು ೧೦ನೇ ಮೌನ ಶಿವಯೋಗಾನುಷ್ಠಾನ ನಡೆಸಿದ್ದಾರೆ ಎಂದು ಬನ್ನಿಕೊಪ್ಪ ಬೃಹನ್ಮಠದ ಸುಜ್ಞಾನದೇವ ಶಿವಾಚಾರ್ಯರು ಶ್ರೀಗಳು ಹೇಳಿದರು.

ಶ್ರೀಗಳ ಶಿವಯೋಗಾನುಷ್ಠಾನ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಲೋಕ ಕಲ್ಯಾಣಕ್ಕಾಗಿ ಹಾಗೂ ನಾಡಿನ ಸಮೃದ್ಧಿಗಾಗಿ ಜನರಲ್ಲಿ ಸಂಸ್ಕಾರ ಮೂಡಿಸುವ ಉದ್ದೇಶದಿಂದ ಮೌನಾನುಷ್ಠಾನ ಕೈಗೊಂಡಿದ್ದು, ಜನರಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಅಶಾಂತಿ ತಾಂಡವವಾಡುತ್ತಿದೆ. ಲೋಕದಲ್ಲಿ ಶಾಂತಿ ನೆಲೆಗೊಳ್ಳಲು ಹಾಗೂ ಸಂಸ್ಕಾರ ಸರ್ವರಲ್ಲಿ ಹರಡಲಿ ಎನ್ನುವ ಧ್ಯೇಯದೊಂದಿಗೆ ಮೌನಾನುಷ್ಠಾನ ನಡೆಸುತ್ತಿರುವುದು ಸಮಾಜದಲ್ಲಿ ಉತ್ತಮವಾದ ಸಂದೇಶ ಬೀರಲಿದೆ ಎಂದರು.ಗದಗ-ಕಳಸಾಪುರದ ಓಂಕಾರಗಿರಿಯ ಓಂಕಾರೇಶ್ವರ ಹಿರೇಮಠದ ಫಕೀರೇಶ್ವರ ಶಿವಾಚಾರ್ಯ ಶ್ರೀಗಳು ಬಸವರಾಜ ಮಹಾಸ್ವಾಮಿಗಳು ಲೋಕಕಲ್ಯಾಣಾರ್ಥವಾಗಿ ಕೈಗೊಂಡಿರುವ ಮೌನ ಶಿವಯೋಗಾನುಷ್ಠಾನದಿಂದ ಎಲ್ಲರಿಗೂ ಒಳಿತಾಗಲಿದೆ. ತಂದೆ, ತಾಯಿ ಬಿಟ್ಟು ಸಮಾಜದ ಒಳಿತಿಗಾಗಿ ತಮ್ಮನ್ನೇ ತಾವು ಸಮರ್ಪಣೆ ಮಾಡಿಕೊಂಡಿದ್ದು, ಶ್ರೀ ಮಠಕ್ಕೆ ಪೀಠಾಧಿಪತಿಗಳಾಗಿ ೨೪ ವರ್ಷದಲ್ಲಿ ನಿರಂತರ ಮಠದ ಅಭಿವೃದ್ದಿ ಮಾಡುತ್ತಿದ್ದಾರೆ ಎಂದರು.

ಅಗಡಿ ಅಕ್ಕಿಮಠದ ಗುರುಲಿಂಗ ಶ್ರೀಗಳು, ಉತ್ತಂಗಿಯ ಶರಣೆ ಈರಮ್ಮ ತಾಯಿ ಮಾತನಾಡಿದರು.

ಬೆಳ್ಳಟ್ಟಿ ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ರಾಮಲಿಂಗೇಶ್ವರ ಮಠಕ್ಕೆ ಬಸವರಾಜ ಶ್ರೀಗಳು ಪೀಠಾಧಿಪತಿಗಳಾದ ಮೇಲೆ ಶ್ರೀ ಮಠವು ಬಹಳ ಬದಲಾವಣೆ ಹೊಂದಿದ್ದು, ಅವರ ನಿರಂತರ ಶ್ರಮವೇ ಕಾರಣ ಎಂದು ಹೇಳಿದರು.

ದೇವಿಹಾಳ ಗ್ರಾಮದ ಪುಂಡಲೀಕಪ್ಪ ಕೆಂಪಣ್ಣವರ ಕುಟುಂಬದವರಿಂದ ತುಲಾಭಾರ ಸೇವೆ ನೆರವೇರಿತು.

ಶ್ರೀಮಠದ ಬಸವರಾಜ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಶಿವನಗೌಡ ಪಾಟೀಲ, ಮೋಹನ್ ಗುತ್ತೆಮ್ಮನವರ, ರಮೇಶ ಮಲ್ಲಾಡದ, ಕೊಟ್ರೇಶ ಸಜ್ಜನರ, ಜಗದೀಶ ಗಾಂಜಿ, ಮಹೇಶ ಬಡ್ನಿ, ಬಿ.ಎಂ. ಯರಕದ, ಕೊಟ್ರೇಶ ಅಕ್ಕೂರ, ಸುರೇಶ ಬಸವರಡ್ಡಿ, ವಿರೂಪಾಕ್ಷಪ್ಪ ನಂದೆಣ್ಣವರ, ಸಿದ್ರಾಮಪ್ಪ ಮೊರಬದ, ರಾಜೇಂದ್ರಕುಮಾರ ಹಲಗಲಿ, ಸಹದೇವರಡ್ಡಿ ಬಸವರಡ್ಡಿ, ಗಿರೀಶರಡ್ಗಡಿ ಮೇಕಳಿ, ಜಗದೀಶ ಸಾಲವಾಡ, ರಾಜೀವ ಬಮ್ಮನಕಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು