ಮೊಹರಂ ಎಲ್ಲರ ಬದುಕಿನಲ್ಲಿ ಸುಖ ಸಮೃದ್ದಿ ತರಲಿ: ಬಿಜಾಪುರ

KannadaprabhaNewsNetwork |  
Published : Jul 06, 2025, 11:48 PM IST
6ಎಚ್‌ಯುಬಿ24ಕರ್ನಾಟಕ ಅಹಲೇ ಸುನ್ನತ ಕಮಿಟಿ ವತಿಯಿಂದ ಹುಬ್ಬಳ್ಳಿ ಮದರ ಥೆರೇಸಾ ವೃದ್ಧಾಶ್ರಮದಲ್ಲಿ ಬಡವರು, ನಿರ್ಗತಿಕರು, ವಯೋವೃದ್ಧರಿಗೆ ಹಣ್ಣು ಹಂಪಲ್‌ ಹಾಗೂ ಅನ್ನ ಸಂತರ್ಪಣೆ ನೆರವೇರಿಸಲಾಯಿತು. | Kannada Prabha

ಸಾರಾಂಶ

ಸರ್ವಧರ್ಮ ಸಮನ್ವಯ ಸಾರುವ ಮೊಹರಂ ಆಚರಣೆ ಎಲ್ಲರ ಬದುಕಿನಲ್ಲಿ ಸುಖ ಸಮೃದ್ದಿ ತರಲಿ, ಸರ್ವರಿಗೂ ಒಳಿತಾಗಲಿ

ಹುಬ್ಬಳ್ಳಿ: ಸರ್ವಧರ್ಮ ಸಮನ್ವಯ ಸಾರುವ ಮೊಹರಂ ಆಚರಣೆ ಎಲ್ಲರ ಬದುಕಿನಲ್ಲಿ ಸುಖ ಸಮೃದ್ದಿ ತರಲಿ, ಸರ್ವರಿಗೂ ಒಳಿತಾಗಲಿ ಹಾಗೂ ಪ್ರವಾದಿ ಮಹ್ಮದ ಪೈಗಂಬರ ಮೊಮ್ಮಗ ಇಮಾಮ್‌ ಹುಸೇನ್‌ ಮತ್ತು ಅವರ ಅನುಯಾಯಿಗಳು ಧರ್ಮಕ್ಕಾಗಿ ಹೋರಾಡಿ ಹುತಾತ್ಮರಾದ ದಿನ. ಅವರ ಸವಿನೆನಪು ಸ್ಮರಿಸುವ ದಿನ ಎಂದು ಡಾ. ಖ್ವಾಜಾಮೈನುದ್ದೀನ್‌ ಬಿಜಾಪುರ ಹೇಳಿದರು.

ಕರ್ನಾಟಕ ಅಹಲೇ ಸುನ್ನತ ಕಮಿಟಿ ವತಿಯಿಂದ ಹುಬ್ಬಳ್ಳಿ ಮದರ ಥೆರೇಸಾ ವೃದ್ಧಾಶ್ರಮದಲ್ಲಿ ಬಡವರು, ನಿರ್ಗತಿಕರು, ವಯೋವೃದ್ಧರಿಗೆ ಹಣ್ಣು ಹಂಪಲ್‌ ಹಾಗೂ ಅನ್ನ ಸಂತರ್ಪಣೆ ನೆರವೇರಿಸಿ ಮಾತನಾಡಿದರು.

ಕಮಿಟಿ ಜಂಟಿ ಕಾರ್ಯದರ್ಶಿ ಮೌಲಾನಾ ನಿಯಾಜ ಆಲಂ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಜೀರ ಅಹ್ಮದ ಕೋಲಕಾರ, ಬಾಬಾಜಾನ ಮುಧೋಳ. ಮಹ್ಮದ ಯುಸೂಫ್‌ ಸುಂಡಕೆ, ಮಹ್ಮದ ಸಿರಾಜ್ ಮುಲ್ಲಾ, ಮೌಲಾನಾ ಹಕ್ಮಿಂ, ಮೌಲಾನಾ ಮುಕ್ತಾರ, ಮಹ್ಮದ ಹುಸೇನ ಆಸೀಪ ಪಲ್ಲಾ ಮುಂತಾದವರು ಪಾಲ್ಲೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ