ಶಿಕ್ಷಣಕ್ಕೆ ತಕ್ಕುದಾಗಿ ಉದ್ಯೋಗ ಹುಟ್ಟಿದ ಊರಲ್ಲಿಯೇ ಸಿಗುವಂತಾಗಲಿ: ಪರ್ತಗಾಳಿ ಶ್ರೀ

KannadaprabhaNewsNetwork |  
Published : May 01, 2026, 02:15 AM IST
ಹೊನ್ನಾವರ ಅವರು ಪಟ್ಟಣದ ನ್ಯೂ ಎಜ್ಯುಕೇಶನ್ ಸೊಸೈಟಿಯು ಪ್ರಿ ಪ್ರೈಮರಿ ಸ್ಕೂಲ್ ಕಟ್ಟಡವನ್ನು ಬುಧವಾರ ಗೋಕರ್ಣ ಪರ್ತಗಾಳಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಹೊನ್ನಾವರ ಪಟ್ಟಣದ ನ್ಯೂ ಎಜ್ಯುಕೇಶನ್ ಸೊಸೈಟಿ ಪ್ರಭಾತಗರದಲ್ಲಿರುವ ಸಂಸ್ಥೆಯ ಸ್ವಂತ ನಿವೇಶನದಲ್ಲಿ ಹೊಸ ಸುಸಜ್ಜಿತ ಪ್ರಿ ಪ್ರೈಮರಿ ಸ್ಕೂಲ್ ಕಟ್ಟಡವನ್ನು ಬುಧವಾರ ಪರ್ತಗಾಳಿ ಮಠದ ಸ್ವಾಮೀಜಿ ಉದ್ಘಾಟಿಸಿದರು.

ಹೊನ್ನಾವರ: ಸಾಮಾಜಿಕ ಬೆಳವಣಿಗೆ ಜವಾಬ್ದಾರಿ ಎಲ್ಲರಲ್ಲಿ ಬೆಳೆಯಲಿ. ತಮ್ಮ ಊರು ಎಂಬ ಅಭಿಮಾನ ಎಲ್ಲರಲ್ಲಿ ಇರಲಿ. ನಾವು ಪಡೆದುಕೊಂಡ ಸಂಸ್ಕಾರಗಳು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಗೋಕರ್ಣ ಪರ್ತಗಾಳಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಶೀರ್ವಚನ ನೀಡಿದರು.

ಅವರು ಪಟ್ಟಣದ ನ್ಯೂ ಎಜ್ಯುಕೇಶನ್ ಸೊಸೈಟಿಯು ಕೆಟಿಆರ್‌ ಕಪ್ಲಿಂಗ್ಸ್ ಅವರ ಸಹಕಾರದಲ್ಲಿ ನಿರ್ಮಿಸಲಾಗಿರುವ ಕೆಟಿಆರ್ ಕಿಡ್ಸ್ ನರ್ಸರಿ, ಎಲ್.ಕೆ.ಜಿ., ಯು.ಕೆ.ಜಿ. ವಿದ್ಯಾರ್ಥಿಗಳಿಗಾಗಿ ಪಟ್ಟಣದ ಪ್ರಭಾತಗರದಲ್ಲಿರುವ ಸಂಸ್ಥೆಯ ಸ್ವಂತ ನಿವೇಶನದಲ್ಲಿ ಹೊಸ ಸುಸಜ್ಜಿತ ಪ್ರಿ ಪ್ರೈಮರಿ ಸ್ಕೂಲ್ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ನಾವು ಮಾಡುವ ದಾನ ಯಾವ ಕಾರಣಕ್ಕೆ ಎಂಬುದು ತಿಳಿದಿರಬೇಕು. ಅದು ಸಾತ್ವಿಕ ದಾನ ಎನಿಸಿಕೊಳ್ಳುತ್ತದೆ. ನಾವು ಬೆಳೆದಂತೆ ಲವಲವಿಕೆ ಮಾಯವಾಗುತ್ತದೆ. ಆದರೆ ಪೂರ್ವ ಪ್ರಾಥಮಿಕ ಮಕ್ಕಳಲ್ಲಿ ಲವಲವಿಕೆ ಇರುತ್ತದೆ. ಮುಂದಿನ ಜನಾಂಗಕ್ಕೂ ಒಳ್ಳೆಯ ವಿಚಾರಗಳು ರವಾನೆ ಆಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಗುರುಪರಂಪರೆಯ ಮೇಲೆ ಗೌರವವಿರಲಿ. ಹೊನ್ನಾವರದಲ್ಲಿ ಎಂಜಿನಿಯರಿಂಗ್ ಕಾಲೇಜ್ ನಿರ್ಮಾಣ ಆಗಬೇಕು. ಶಿಕ್ಷಣ ಮತ್ತು ಉದ್ಯೋಗ ಎಲ್ಲವೂ ನಮ್ಮಲ್ಲಿಯೇ ಆಗಬೇಕು. ನಮ್ಮ ಮೂಲವನ್ನು ಮರೆಯದೆ ಬೆಳೆಯಬೇಕು‌. ಶಿಕ್ಷಣಕ್ಕೆ ತಕ್ಕುದಾಗಿ ಉದ್ಯೋಗ ನಮ್ಮಲ್ಲಿ ಸೃಷ್ಟಿಯಾಗುವಂತಾಗಲಿ ಎಂದು ಹರಸಿದರು.

ದಾನಿ ಪುಣೆ ಕೆ.ಟಿ.ಆರ್. ಕಪ್ಲಿಂಗ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಶಿವಶಂಕರ ಕೃಷ್ಣರಾವ್ ಪಿಕಳೆ ಮಾತನಾಡಿ, ಗಳಿಸಿದ ಹಣ ಸಮಾಜಕ್ಕೆ ನೀಡಬೇಕು.‌ ಊರಿಗೆ, ಶಾಲೆಗೆ, ಕಾಲೇಜಿಗೆ ಶೌಚಗೃಹ ನಿರ್ಮಿಸಿಕೊಟ್ಟಿದ್ದೇನೆ. ಅಲ್ಲದೆ ಹೊನ್ನಾವರ ತಾಲೂಕಿನ ನ್ಯೂ ಇಂಗ್ಲಿಷ್ ಶಾಲೆಗೂ ಸಹಾಯ ಮಾಡಿದ್ದೇನೆ. ಹೊನ್ನಾವರ ಮತ್ತು ಕುಮಟಾ ತಾಲೂಕಿಗೆ ಸೇರಿ ೧೦ ಪ್ರಾಜೆಕ್ಟ್ ಮಾಡಿದ್ದು, ಅದರಲ್ಲಿ ೫ ಶೌಚಾಲಯ, ೩ ಸೋಲಾರ್ ಪ್ರೊಜೆಕ್ಟ್ ಮಾಡಲಾಗಿದೆ. ಒಟ್ಟು ₹೨ ಕೋಟಿ ೧೨ ಲಕ್ಷ ಖರ್ಚಾಗಿದೆ. ಇದರಲ್ಲಿ ಹೆಚ್ಚಿನ‌ ಹಣ ಹೊನ್ನಾವರ ತಾಲೂಕಿಗೆ ದಕ್ಕಿದೆ ಎಂದರು.

ಹಾಂಗ್ಯೋ ಐಸ್‌ಕ್ರೀಮ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ ಪೈ ಮಾತನಾಡಿ, ಹೊನ್ನಾವರ ಜಿಲ್ಲೆಯ ಬ್ರೇನ್ ಇದ್ದಂತೆ. ಹೊನ್ನಾವರದಲ್ಲಿ ದಾನಿಗಳ ಸಂಖ್ಯೆ ಹೆಚ್ಚಲಿ. ನ್ಯೂ ಇಂಗ್ಲಿಷ್ ಶಾಲೆ ಕಾಲೇಜುಗಳನ್ನು ನಿರ್ಮಿಸುವಂತಾಗಲಿ ಎಂದು ಆಶಿಸಿದರು.

ದಾನಿಗಳನ್ನು, ಕಟ್ಟಡ ವಿನ್ಯಾಸಗಾರ, ಕಟ್ಟಡ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ನರ್ಸರಿಯಲ್ಲಿ ಪ್ರವೇಶಾತಿ ಪಡೆದ ೭ ವಿದ್ಯಾರ್ಥಿಗಳಿಗೆ ಗುರುಗಳು ಶಾಲಾ ಕಿಟ್, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ನ್ಯೂ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ರಘುನಾಥ ಜಿ. ಪೈ, ಉಪಾಧ್ಯಕ್ಷ ನಾಗರಾಜ್ ಕಾಮತ, ಕಟ್ಟಡ ವಿನ್ಯಾಸಕಾರ ಯೋಗೇಶ್ಚಂದ್ರ ಧಾರಾ ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿದರು. ನ್ಯೂ ಇಂಗ್ಲಿಷ್ ಸಂಸ್ಥೆಯ ಉಪಾಧ್ಯಕ್ಷ ನಾಗರಾಜ್ ಕಾಮತ ವಂದಿಸಿದರು. ಶಿಕ್ಷಕ ಅಶೋಕ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಶಿಷ್ಯ ಸಂಬಂಧ ಕೃಷ್ಣಾರ್ಜುನರಂತಿರಲಿ: ಡಾ.ಶ್ರೀಧರ ಪೈ
ಆರೋಗ್ಯ ಇಲಾಖೆಗೆ ಕೆಬಿಎಲ್‌ 3 ವಾಹನ ಹಸ್ತಾಂತರ