
ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಜ್ಞಾನವೇ ಸಂಪತ್ತು, ಜ್ಞಾನವೇ ಬಂಗಾರ ಎಂದು ಪುಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಮಗೆ ನೀಡಿ ಹೋಗಿದ್ದಾರೆ. ಆಧ್ಯಾತ್ಮದಲ್ಲಿ ಮಹಿಳೆ ತನ್ನನ್ನು ತೊಡಗಿಸಿಕೊಂಡರೆ ಇಡೀ ಕುಟುಂಬವೇ ಸುಂದರ, ಬದುಕು ಬಂಗಾರವಾಗುತ್ತದೆ ಎನ್ನುವುದನ್ನು ಶ್ರೀ ಸಿದ್ದೇಶ್ವರ ಅಪ್ಪಗಳು ನಮಗೆ ತಿಳಿಸಿದ್ದಾರೆ. ನಾವು ಅವರ ಮಾತುಗಳನ್ನು ಪಾಲಿಸಬೇಕು ಎಂದರು.
ಕಲಬುರಗಿಯ ಗ್ರಂಥಿ ಶಾಸ್ತ್ರಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ಇಂದು ಕುಟುಂಬದಲ್ಲಿ ಅಪ್ಪ-ಅಮ್ಮ ಇಬ್ಬರಿಗೂ ಆಧ್ಯಾತ್ಮದ ಅವಶ್ಯಕತೆ ಇದೆ. ಮಹಿಳೆಯನ್ನು ಹೊರತುಪಡಿಸಿ ಆಧ್ಯಾತ್ಮವಿಲ್ಲ. ನಾವೆಲ್ಲರೂ ಅರಿವಿನಿಂದ ಬದುಕಲು ಶ್ರೀ ಸಿದ್ದೇಶ್ವರ ಅಪ್ಪಗಳು ನಮ್ಮನ್ನು ಜ್ಞಾನಯೋಗಾಶ್ರಮ ಪುಣ್ಯ ಭೂಮಿಯಲ್ಲಿ ಸೇರಿಸಿದ್ದಾರೆ ಎಂದರು.ಬುರಣಾಪುರ ಶ್ರೀ ಸಿದ್ಧಾರೂಢ ಮಠದ ಮಾತೋಶ್ರೀ ಯೊಗೇಶ್ವರಿ ಮಾತಾಜಿ ಆಶೀರ್ವಚನ ನೀಡಿ, ಮಹಿಳೆ ಮತ್ತು ಆಧ್ಯಾತ್ಮ ಎನ್ನುವುದು ನಮ್ಮ ಜಿಲ್ಲೆಗೆ ಹೊಸದಲ್ಲ ಯಾಕೆಂದರೆ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಗಳು ನಮಗೆಲ್ಲ ಇದನ್ನು ಹೇಳಿ ಕೊಟ್ಟಿದ್ದಾರೆ. ರವಿವಾರಕ್ಕೊಮ್ಮೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಆಧ್ಯಾತ್ಮ ಕೇಂದ್ರ ಆಶ್ರಮಗಳಿಗೆ ಕರೆದುಕೊಂಡು ಹೋಗಬೇಕು. ನಾವು ಆಧ್ಯಾತ್ಮದ ರೂಢಿ ಮಾಡಿಕೊಳ್ಳಬೇಕು. ರೂಢಿಯಿಂದ ಕುಟುಂಬ ಬದಲಾಗುತ್ತದೆ, ಸಮಾಜ ಬದಲಾಗುತ್ತದೆ. ಭಾರತದ ಪರಂಪರೆ ಬೆಳಗುತ್ತದೆ ಎಂದರು.
ಗದಗ ಕದಳಿ ಬನದ ಮಾತೋಶ್ರೀ ಅಕ್ಕಮಹಾದೇವಿ ಮಾತಾಜಿ ಆರ್ಶೀವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ರಾಷ್ಟ್ರ ಸಂತರು. ಆತ್ಮ ಸಂಬಂಧಿ ವಿಷಯವನ್ನು ಅರಿತುಕೊಳ್ಳುವುದೇ ಆಧ್ಯಾತ್ಮ. ಮಕ್ಕಳು ಎಂದರೆ ನಮ್ಮ ಆತ್ಮ ಇದ್ದಂತೆ, ದೇಹ ಮಿತ್ಯಾತ್ಮ, ಬ್ರಹ್ಮ ಎನ್ನುವುದು ಮುಖ್ಯಾತ್ಮ ಧರ್ಮವನ್ನು ಉಳಿಸಲು ನಿಂತವರನ್ನು ಆಧ್ಯಾತ್ಮ ಚಿಂತಕರು ಎನ್ನುತ್ತಾರೆ ಎಂದರು.ಈ ವೇಳೆ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಪೂಜ್ಯ ಬಸವಲಿಂಗ ಸ್ವಾಮೀಜಿ, ಮಹಿಳಾ ಸಾಧಕಿಯರು, ನಾಡಿನ ಪೂಜ್ಯರು ಹಾಗೂ ಜ್ಞಾನಯೋಗಾಶ್ರಮದ ಭಕ್ತರು ಭಾಗವಹಿಸಿದ್ದರು.