ಸರಗೂರಿನಲ್ಲಿ ಸಂಭ್ರಮದಿಂದ ಬಕ್ರೀದ್‌ ಆಚರಣೆ

KannadaprabhaNewsNetwork |  
Published : Jun 08, 2025, 01:22 AM IST
59 | Kannada Prabha

ಸಾರಾಂಶ

ಎಲ್ಲರೂ ಸಹಬಾಳ್ವೆಯಿಂದ ಇರಬೇಕಾದುದು ಭಗವಂತನ ಆಸೆ. ಹಬ್ಬಗಳ ಆಚರಣೆಯಿಂದ ಉತ್ತಮ ಬಾಂಧವ್ಯ ಮೂಡಲಿದೆ.

ಕನ್ನಡಪ್ರಭ ವಾರ್ತೆ ಸರಗೂರುಪಟ್ಟಣದಲ್ಲಿ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ, ಸಕಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿದರು.ಪಟ್ಟಣದ ಈದ್ಗಾ ಮೈದಾನದಲ್ಲಿ ಎಲ್ಲರೂ ಒಂದೆಡೆ ಸೇರಿ, ಗುರುಗಳ ಆರ್ಶೀವಾದ ಪಡೆದು ಮಕ್ಕಳು ಹೊಸ ಬಟ್ಟೆ ತೊಟ್ಟು, ಬಕ್ರೀದ್ ಹಬ್ಬಕ್ಕೆ ಮೆರಗು ತಂದರು. ಜಾಮೀಯ ಮಸೀದಿ ಗುರುಗಳಾದ ಅಬ್ದುಲ್ ರಶೀದ್, ನೂರ್ ಮಸೀದಿ ಗುರುಗಳಾದ ಅಬ್ದುಲ್ ಜಲೀಲ್ ಮಾತನಾಡಿ, ಎಲ್ಲರೂ ಸಹಬಾಳ್ವೆಯಿಂದ ಇರಬೇಕಾದುದು ಭಗವಂತನ ಆಸೆ. ಹಬ್ಬಗಳ ಆಚರಣೆಯಿಂದ ಉತ್ತಮ ಬಾಂಧವ್ಯ ಮೂಡಲಿದೆ. ಉತ್ತಮ ಮಳೆಯಾಗಿ ಬೆಳೆ ಬರಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.ಮಸೀದಿ ಗುರುಗಳಾದ ಅಬ್ದುಲ್ ರಶೀದ್ ಸಾಬ್ ಅವರು ಸರಗೂರು ಮುಸ್ಲಿಂ ಸಮಾಜದ ಯಜಮಾನರಾದಂತಹ ಹಿದಾಯತ್‌ ಉಲ್ಲಾ ಶರೀಫ್ ಹಾಗೂ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಮೀರ್ ಸುಹೇಲ್, ಸುಬಾನ್, ಮಹಮ್ಮದ್ ಪಾಷಾ, ಮಹಮದ್ ಸದಾನ್, ಸಾಫ್ಫಾನ್ ಸಾಧಿಕ್, ಸಿರಾಜ್ ಪಾಷ, ಇಸಾಕ್ ಖಾನ್, ಯೂನುಸ್, ಮಫ್ಫಿಉಲ್ಲಾ, ದಾದು, ರಾಹಿಲ್ ಪಾಷ, ಜಲೀಲ್, ನಾಜಿರ್, ಜಾವಿದ್, ಇಬ್ರಾಹಿಂ, ಹಿದಾಯತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''