ಹೊಸಕೋಟೆ: ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕೆಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಪ್ರಾಂತೀಯ ಅಧಿಕಾರಿ ಶ್ರೀಧರ್ ತಿಳಿಸಿದರು.
ಸಿಇಒ ವೆಂಕಟೇಶ್ ಮಾತನಾಡಿ, ಸಹಕಾರ ಸಂಘಗಳಿಗೆ ಷೇರುದಾರರೇ ಜೀವಾಳ. ಸದಸ್ಯರ ವಿಶ್ವಾಸ ಗಳಿಸಿರುವ ಸಂಘ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ಪ್ರಸ್ತುತ 1350 ಷೇರುದಾರರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 8 ಕೋಟಿ ವಹಿವಾಟು ನಡೆದಿದೆ. 6.42 ಕೋಟಿ ಠೇವಣಿ ಸಂಗ್ರಹವಾಗಿದ್ದು, 4.16 ಕೋಟಿ ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 18.66 ಲಕ್ಷ ಲಾಭ ಗಳಿಸಿದೆ ಎಂದರು.
ಸಂಘದ ಅಧ್ಯಕ್ಷೆ ಪಿ.ಮೈತ್ರಿದೇವಿ ಮಾತನಾಡಿ, ಮಹಿಳೆಯರನ್ನು ಸಬಲೀಕರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ಸಹಕಾರಿ ಸಂಘ ಸ್ಥಾಪಿಸಲಾಗಿದೆ ಎಂದರು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಕೆ.ಎಂ.ರಾಜೇಶ್, ಶ್ರೀವಾರಿ ಗ್ರೂಪ್ ಮಾಲೀಕ ಕೃಷ್ಣಮೂರ್ತಿ, ಸಂಘದ ಉಪಾಧ್ಯಕ್ಷೆ ಕೆ.ಅಮೂಲ್ಯ, ನಿರ್ದೇಶಕರಾದ ಪ್ರಭಾಮಣಿ, ಶಾರದಾ ಅಯ್ಯರ್, ಬಿ.ಎಸ್. ರಾಜೇಶ್ವರಿ, ವೈ.ಹೇಮಲತಾ, ಸಂಪಮ್ಮ, ಅಶ್ವತಮ್ಮ, ಟಿ.ಎಸ್.ಸುಜಾತ, ಎಚ್.ಎಂ.ನಾಗಜ್ಯೋತಿ, ಟಿ.ಎಸ್.ದೇವಿರಮ್ಮ, ವ್ಯವಸ್ಥಾಪಕಿ ಬಿ.ಎಂ.ಲಕ್ಷ್ಮಿ, ನಗದು ಗುಮಾಸ್ತೆ ಎಂ.ಎಸ್. ರೇವತಿ, ಪಿಗ್ಮಿ ಏಜೆಂಟ್ ಜಿ.ವಿ.ರಮೇಶ್ ಉಪಸ್ಥಿತರಿದ್ದರು.
ಹೊಸಕೋಟೆಯಲ್ಲಿ ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಾಮಾನ್ಯ ಸಭೆಯನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಡಿಜಿಎಂ ಶ್ರೀಧರ್ ಉದ್ಘಾಟಿಸಿದರು.